Home / ಕವನ / ಕವಿತೆ / ಕತ್ತಲ ಗೂಡಿನ ದೀಪ

ಕತ್ತಲ ಗೂಡಿನ ದೀಪ

ಮೈತುಂಬಾ ಮಸಿ ಮೆತ್ತಿದರೂ
ತೊಳೆದು ಬರಬಲ್ಲರು ಅವರು
ಕೇಳಲುಬಾರದು
ಮಸಿಯ ಮೂಲಕ್ಕೆ ಕಾರಣ
ಅವರು ಮೇಲ್ಪಂಕ್ತಿಯ ಊಟಕ್ಕೆ ಕುಳಿತವರು.

ಬಿಳಿಮೈಯ ಮಾತಿಗೆ ಬಸವನ ಗೋಣು
ಎಂಜಲೆಲೆಗೆ ಮೈ ಉಜ್ಜಿಕೊಂಡವರು ಇವರು.
ಕರಿಮೈಯ ಮಾರನ ಮನೆಯ
ದೀಪದ ಬೆಳಕಿಗೆ ಯಾವ ಬಣ್ಣ

ಕೇಳಲೇ ಇಲ್ಲ, ಬಲ್ಲವರು
ತಗ್ಗಿದ ತಲೆಗಳ ಎತ್ತಲಾಗಲೇ ಇಲ್ಲ
ಜಾತಿ ಎಂಬ ಬಾವಿಯ ಆರದ ನೀರು
ಸಿಹಿಯಲ್ಲ, ಉಪ್ಪುಪ್ಪು.

ಆದೇ ಆಗ ಮೂಡಿದ್ದ
ಪೂರ್ವದಲ್ಲೊಬ್ಬ ಪ್ರಖರ ಸೂರ್ಯ
ದೀನ ದಲಿತರ ಹಾಡುಗಳು
ಮುಖಪುಟದ ಮೇಲೆ ಮೂಡಲಾರಂಭಿಸಿದವು
ಮಂತ್ರಗಳ ಮೇಲೋಚ್ಛಾಟನೆ ಮಾಡಿ.

ಆತನ ಕಣ್ಣುಗಳಲ್ಲಿ ತೀಕ್ಷ್ಣ ಹೊಳಪು
ಭಂಡಾರ ಮೆತ್ತಿದ ಹಣೆಗಳು
ತಲೆತಗ್ಗಿಸಿದವು.

ಬೆಚ್ಚಿಬಿದ್ದರು ಧರ್ಮಸೈತಾನರು
ಮೈಗಂಟಿದ ದಾರ ಬಿಗಿಯಾಗಿ
ಉಸಿರುಗಟ್ಟಿದಂತೆ

ಜಲಪಾತದ ವಾಙ್ಮಯಕ್ಕೆ
ಬೆದರಿದ ಪುರಾಣಗಳು
ಪಟಪಟನೇ ಉದುರಿಬಿದ್ದವು.

ಅದೊಂದು ಧಾತುವಿನಿಂದ
ಹೊಮ್ಮಿದ, ಪಲ್ಲವಿಸಿದ
ರಕ್ತದಲ್ಲೇ ಬೆಂಕಿಯುಗುಳುವ
ಲಾವಾ ತುಂಬಿಕೊಂಡ
ಬೆಂಕಿಯುಂಡೆಗಳು
ವರ್ತಮಾನದ ಬಾಗಿಲ ಕಾವಲುಗಾರರು

ಕತ್ತಲೆಗೂಡಿನ ದೀಪಗಳು
ಜಗ್ಗನೇ ಉರಿಯುತ್ತಿವೆ.
ಬಾಯಿಲ್ಲದವನ ಕೂಗಿಗೆ
ಕಂಚಿನ ಕಂಠ ಎರವಲು ಸಿಕ್ಕಿದೆ.
ದಲಿತರ ಕೇರಿಗಳು
ದಿಗ್ವಿಜಯದ ಕೇಕೆಗಳು

ಪ್ರತಿ ಉದಯವೂ
ಮಾರ್ದವದ ಸೌಂದರ್ಯ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...