ಕತ್ತಲ ಗೂಡಿನ ದೀಪ

ಮೈತುಂಬಾ ಮಸಿ ಮೆತ್ತಿದರೂ
ತೊಳೆದು ಬರಬಲ್ಲರು ಅವರು
ಕೇಳಲುಬಾರದು
ಮಸಿಯ ಮೂಲಕ್ಕೆ ಕಾರಣ
ಅವರು ಮೇಲ್ಪಂಕ್ತಿಯ ಊಟಕ್ಕೆ ಕುಳಿತವರು.

ಬಿಳಿಮೈಯ ಮಾತಿಗೆ ಬಸವನ ಗೋಣು
ಎಂಜಲೆಲೆಗೆ ಮೈ ಉಜ್ಜಿಕೊಂಡವರು ಇವರು.
ಕರಿಮೈಯ ಮಾರನ ಮನೆಯ
ದೀಪದ ಬೆಳಕಿಗೆ ಯಾವ ಬಣ್ಣ

ಕೇಳಲೇ ಇಲ್ಲ, ಬಲ್ಲವರು
ತಗ್ಗಿದ ತಲೆಗಳ ಎತ್ತಲಾಗಲೇ ಇಲ್ಲ
ಜಾತಿ ಎಂಬ ಬಾವಿಯ ಆರದ ನೀರು
ಸಿಹಿಯಲ್ಲ, ಉಪ್ಪುಪ್ಪು.

ಆದೇ ಆಗ ಮೂಡಿದ್ದ
ಪೂರ್ವದಲ್ಲೊಬ್ಬ ಪ್ರಖರ ಸೂರ್ಯ
ದೀನ ದಲಿತರ ಹಾಡುಗಳು
ಮುಖಪುಟದ ಮೇಲೆ ಮೂಡಲಾರಂಭಿಸಿದವು
ಮಂತ್ರಗಳ ಮೇಲೋಚ್ಛಾಟನೆ ಮಾಡಿ.

ಆತನ ಕಣ್ಣುಗಳಲ್ಲಿ ತೀಕ್ಷ್ಣ ಹೊಳಪು
ಭಂಡಾರ ಮೆತ್ತಿದ ಹಣೆಗಳು
ತಲೆತಗ್ಗಿಸಿದವು.

ಬೆಚ್ಚಿಬಿದ್ದರು ಧರ್ಮಸೈತಾನರು
ಮೈಗಂಟಿದ ದಾರ ಬಿಗಿಯಾಗಿ
ಉಸಿರುಗಟ್ಟಿದಂತೆ

ಜಲಪಾತದ ವಾಙ್ಮಯಕ್ಕೆ
ಬೆದರಿದ ಪುರಾಣಗಳು
ಪಟಪಟನೇ ಉದುರಿಬಿದ್ದವು.

ಅದೊಂದು ಧಾತುವಿನಿಂದ
ಹೊಮ್ಮಿದ, ಪಲ್ಲವಿಸಿದ
ರಕ್ತದಲ್ಲೇ ಬೆಂಕಿಯುಗುಳುವ
ಲಾವಾ ತುಂಬಿಕೊಂಡ
ಬೆಂಕಿಯುಂಡೆಗಳು
ವರ್ತಮಾನದ ಬಾಗಿಲ ಕಾವಲುಗಾರರು

ಕತ್ತಲೆಗೂಡಿನ ದೀಪಗಳು
ಜಗ್ಗನೇ ಉರಿಯುತ್ತಿವೆ.
ಬಾಯಿಲ್ಲದವನ ಕೂಗಿಗೆ
ಕಂಚಿನ ಕಂಠ ಎರವಲು ಸಿಕ್ಕಿದೆ.
ದಲಿತರ ಕೇರಿಗಳು
ದಿಗ್ವಿಜಯದ ಕೇಕೆಗಳು

ಪ್ರತಿ ಉದಯವೂ
ಮಾರ್ದವದ ಸೌಂದರ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧
Next post ಮುಸ್ಸಂಜೆಯ ಮಿಂಚು – ೯

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…