ಎತ್ತು ಕಟ್ಟಿದೆ

ಎತ್ತು ಕಟ್ಟಿದೆ ಲಾಂದ್ರವುರಿಸಿದೆ
ಗಾಡಿ ಹೊರಟಿದೆ ಸಂಜೆಗೆ
ಎಲ್ಲಿಗೆಂದು ತಿಳಿಯದೇ
ಎಲ್ಲಿ ಮುಟ್ಟಿತಲ್ಲಿಗೆ

ಏರಿಯಲಿ ಏರುತಿರಲಿ
ಇಳಿಜಾರಿನಲಿ ಇಳಿಯುತಿರಲಿ
ಬಟ್ಟಬಯಲ ಕಾಡು ದಾರಿ
ತಿರುವುಗಳಲಿ ತಿರುಗುತಿರಲಿ

ಹಾಡೊ ಗಾಡಿಗಾರ ಆ
ಎತ್ತುಗಳಿಗೆ ಹೊಡೆಯದೇ
ಬೆತ್ತ ಬೆನ್ನಿಗೆ ತಾಗಿಸದೇ ಬರೇ
ಗಾಳಿಯಲೆ ಚಕ್ ಚಕಾ

ನೆನಪು ನಿನ್ನ ಹಾಡಿನಲ್ಲಿ ಮುಂ-
ಜಾವ ದೂರ ನಾಡಿನಲ್ಲಿ
ಅಲ್ಲೀ ವರೆಗೆ ಉರುಳುತಿರಲಿ
ನಮ್ಮ ಗಾಡಿ ಮೆಲ್ಲಗೆ ಎಲ್ಲಿ ಹೋಯ್ತೊ ಅಲ್ಲಿಗೆ

ನಿದ್ದೆ ಬರುವುದು ಕಣ್ಣಿನಲ್ಲಿ
ಎಂಥದೋ ಕನಸು ಆ ನಿದ್ದೆಯಲ್ಲಿ
ಎಷ್ಟು ಹಗಲು ಎಷ್ಟು ರಾತ್ರಿ
ಎದ್ದಾಗ ನಾನೆಲ್ಲಿ
ಎದ್ದಾಗ ನೀನೆಲ್ಲಿ
ಓ ಗಾಡಿಗಾರ ಮೋಡಿಗಾರ
ಎಂಥ ಜಾದುಗಾರನೋ
ನೀನಂಥ ಮೋದಗಾರನೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕಿಕಾಳಿನಷ್ಟು ಕಾರು ತಯಾರಿಸಿದ ಜಪಾನ್
Next post ಗರತಿ ಪಟ್ಟ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys