ಗರತಿ ಪಟ್ಟ

ಹೇಳಿರೇ ಕೆಳದಿಯರೇ
ಕನಸ ಕಂಡಿರೇನೆ
ರಾಮನ
ಇಲ್ಲ ರಾಜಕುಮಾರನ
ಎದೆಯಲ್ಲಿ ಕನಸಿನ
ಬೀಜಗಳ ಒತ್ತಾಗಿ ಬಿತ್ತಿ
ಒಡೆತನವ ಸಾಧಿಸಿದಿರೇನೆ?

ಎಚ್ಚರಿಕೆಯಿಂದ ದಾರಿಯಲಿ
ಪರೀಕ್ಷಿಸಿ ಹೆಜ್ಜೆ ಇಟ್ಟರೂ
ಚುಚ್ಚುವ ಸಾವಿರಾರು ಮುಳ್ಳುಗಳು
ನೋವು ಯಾತನೆಗಳಿಗೆ
ಸ್ತ್ರೀ ಧರ್ಮದ ಮುಸುಕು
ಎಗ್ಗಿಲ್ಲದೇ ಎಳೆದಿರೇನೆ?

ಹೆಜ್ಜೆ ಹಾಕಿದಲ್ಲಿ ಸೋರುವ
ಕೀವು ರಕ್ತಗಳನ್ನು ಒರೆಸುತ್ತ
ಅವ್ವನಾದರ್ಶದ ಸೆರಗು ಹೊದ್ದು
ಉಸಿರಾಡುವ ಯಂತ್ರವಾದಿರೇನೆ?

ಆದರ್ಶದ ಕೈಪಿಡಿಗಳಾಗಿ
ಯಜಮಾನರ ಮರ್ಜಿ ಹಿಡಿದು
ದಾಸಿಯಂತೆ ದುಡಿದಿದ್ದಕ್ಕೆ ಕೊನೆಗೆ
ಗರತಿಯ ಪಟ್ಟ ದಕ್ಕಿತೇನೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎತ್ತು ಕಟ್ಟಿದೆ
Next post ನಗುವ ನಾಡು

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys