Home / ಲೇಖನ / ವಿಜ್ಞಾನ / ಅಕ್ಕಿಕಾಳಿನಷ್ಟು ಕಾರು ತಯಾರಿಸಿದ ಜಪಾನ್

ಅಕ್ಕಿಕಾಳಿನಷ್ಟು ಕಾರು ತಯಾರಿಸಿದ ಜಪಾನ್

ಜಪಾನ್ ದೇಶವು ಚಿಕ್ಕದಾದರೂ ವೈಜ್ಞಾನಿಕವಾಗಿ ಬಹಳ ಶ್ರೇಷ್ಠ ಮಟ್ಟದಲ್ಲಿದೆ. ಪ್ರತಿದಿನವೂ ಅಲ್ಲಿ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಕಾರು ತಯಾರಿಕೆಯಲ್ಲಿ ಬಹಳ ಕಾಲದಿಂದಲೂ ಮೊದಲ ಸ್ಥಾನಗಳಲ್ಲಿ ಇದೆ. ಪುಟಾಣಿ ಗಾತ್ರದ ಯಂತ್ರಗಳ ಸೃಷ್ಟಿಯಲ್ಲಿಯೂ ಈ ದೇಶ ಎತ್ತಿದ ಕೈ. ಈಗ ಎಲ್ಲದಕ್ಕೂ ಮುಂದೆ ಹೋಗಿ ಅಕ್ಕಿಕಾಳಿನ ಗಾತ್ರದಲ್ಲಿ ಒಂದು ಚಲನ ಶೀಲ ಕಾರೊಂದನ್ನು ತಯಾರಿಸಿ ಬಿಟ್ಟಿದೆ. ಇದು ಮನರಂಜನೆ, ಅಥವಾ ಆಟಿಗೆ ವಸ್ತು ಅಲ್ಲವೇ ಅಲ್ಲ. ಕಾರಿನೊಳಗೆ ಇರಬೇಕಾದ ಎಲ್ಲ ಬಿಡಿಭಾಗಗಳು ಯಂತ್ರಗಳು, ಸೀಟುಗಳು, ಎಲ್ಲವೂ ಇವೆ. ಇದರಲ್ಲಿಯ ಬಿಡಿಭಾಗಗಳನ್ನು ದುರ್ಭೀನು ಹಾಕಿಯೇ ನೋಡಬೇಕು.

ಇಂಥಹ ಕಾರುಗಳನ್ನು ಜಪಾನಿನ “ನಿಪೊಂಡೆನ್ಸೊ” ಕಂಪನಿಯು ತಯಾರಿಸುತ್ತಿದ್ದು ಈ ಕಾರುಗಳ ವೇಗ ಒಂದು ಸೆಕೆಂಡಿಗೆ ೫ ಸೆಂಟಿಮೀಟರ್‌ಗಳಷ್ಟು ಚಲಿಸುತ್ತದೆ. ಈ ಕಾರಿನಲ್ಲಿ ೨೪ ಭಾಗಗಳಿದ್ದು ೫ ಭಾಗಗಳಿಂದ ರಚಿತವಾದ ಮೋಟಾರುಗಳನ್ನು ಒಳಗೊಂಡಿದೆ. ೧೦ ವರ್ಷಗಳ ಸಂಶೋಧನೆ ಈ ಕಾರಿನ ತಯಾರಿಕೆಯಲ್ಲಿ ಹಿಡಿದಿದೆ. ಈ ಸಂಶೋಧನೆಗೆ ತಗುಲಿದ ವೆಚ್ಚ ೨೫ ಕೋಟಿ ಡಾಲರ್‌ಗಳು, ಒಂದು ಘನಸೆಂಟಿ ಮೀಟರ್‌ಗ್ರಾತಕ್ಕಿಂತಲೂ ಚಿಕ್ಕಾದಾದರೂ ಈ ಕಾರು ಸಮರ್ಥವಾಗಿ ನಿರ್ವಹಿಸಬಲ್ಲ ಯಂತ್ರಗಳ ಅಭಿವೃದ್ಧಿಯೇ ಮುಖ್ಯಗುರಿ, ಎಂದು ಸಂಶೋಧಕರು ಹೇಳುತ್ತಾರೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...