ಬೆಳಗು

ಓ ನೋಡು ಬೆಳಗಾಯ್ತು ಮೂಡಲವು ಕೆಂಪಾಯ್ತು
ಕೂಡಲದ ಸಂಗಯ್ಯ ಬಂದ ಬಂದ
ಕಾಳರಾತ್ರಿಯ ಹಕ್ಕಿ ದೂರ ಹಾರುತ ಹೋತು
ಶಿವತಂದೆ ಶುಭ ಬೆಳಗು ತಂದ ತಂದ

ಶಿವಯೋಗದಾನಂದ ಶೃಂಗಾರ ಸುಂದರಿಯು
ಶರಣಸುಂದರ ಪಾದ ತೊಳೆದಿರುವಳು
ಮುಳ್ಳು ಮಲ್ಲಿಗೆ ಮಾಡಿ ಕಲ್ಲು ಸಂಪಿಗೆ ಮಾಡಿ
ಸುಣ್ಣ ಬೆಣ್ಣೆಯ ಮಾಡಿ ಕುಣಿದಿರುವಳು

ಭಸ್ಮವಾಯಿತು ಭೂತ ಸುಟ್ಟು ಹೋಯಿತು ಪ್ರೇತ
ಮಾಯೆಯೆಂಬಾ ಶಬ್ದ ಮಾಯವಾಯ್ತು
ರಾವಣೇಶ್ವರ ಹೋದ ದೇವರಾಮನು ಬಂದ
ಮರಣ ಲೋಕಕೆ ಶರಣ ಗಾನಬಂತು

ನೆಲತುಂಬ ಮಳೆಯಾಯ್ತು ಕಣ್ತುಂಬ ಬೆಳೆಯಾಯ್ತು
ಶಿವಶಿವಾ ಶಿವಶಬ್ದ ಹೊಳೆಯಾಯಿತು
ಮುಗಿಲು ಗಂಟಾನಾದ ಕಡಲು ಜಾಗಟೆಗಾನ
ಸೂರ್‍ಯ ಶರಣನ ಪಾದ ದಯಮಾಡಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೌವ್ವನ
Next post ಉತ್ತು, ಕಿತ್ತು, ಬತ್ತಿಸುವ ಕೃಷಿಯಾಕೋ?

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…