ಬೆಳಗು

ಓ ನೋಡು ಬೆಳಗಾಯ್ತು ಮೂಡಲವು ಕೆಂಪಾಯ್ತು
ಕೂಡಲದ ಸಂಗಯ್ಯ ಬಂದ ಬಂದ
ಕಾಳರಾತ್ರಿಯ ಹಕ್ಕಿ ದೂರ ಹಾರುತ ಹೋತು
ಶಿವತಂದೆ ಶುಭ ಬೆಳಗು ತಂದ ತಂದ

ಶಿವಯೋಗದಾನಂದ ಶೃಂಗಾರ ಸುಂದರಿಯು
ಶರಣಸುಂದರ ಪಾದ ತೊಳೆದಿರುವಳು
ಮುಳ್ಳು ಮಲ್ಲಿಗೆ ಮಾಡಿ ಕಲ್ಲು ಸಂಪಿಗೆ ಮಾಡಿ
ಸುಣ್ಣ ಬೆಣ್ಣೆಯ ಮಾಡಿ ಕುಣಿದಿರುವಳು

ಭಸ್ಮವಾಯಿತು ಭೂತ ಸುಟ್ಟು ಹೋಯಿತು ಪ್ರೇತ
ಮಾಯೆಯೆಂಬಾ ಶಬ್ದ ಮಾಯವಾಯ್ತು
ರಾವಣೇಶ್ವರ ಹೋದ ದೇವರಾಮನು ಬಂದ
ಮರಣ ಲೋಕಕೆ ಶರಣ ಗಾನಬಂತು

ನೆಲತುಂಬ ಮಳೆಯಾಯ್ತು ಕಣ್ತುಂಬ ಬೆಳೆಯಾಯ್ತು
ಶಿವಶಿವಾ ಶಿವಶಬ್ದ ಹೊಳೆಯಾಯಿತು
ಮುಗಿಲು ಗಂಟಾನಾದ ಕಡಲು ಜಾಗಟೆಗಾನ
ಸೂರ್‍ಯ ಶರಣನ ಪಾದ ದಯಮಾಡಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೌವ್ವನ
Next post ಉತ್ತು, ಕಿತ್ತು, ಬತ್ತಿಸುವ ಕೃಷಿಯಾಕೋ?

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…