ಬೆಳಗು

ಓ ನೋಡು ಬೆಳಗಾಯ್ತು ಮೂಡಲವು ಕೆಂಪಾಯ್ತು
ಕೂಡಲದ ಸಂಗಯ್ಯ ಬಂದ ಬಂದ
ಕಾಳರಾತ್ರಿಯ ಹಕ್ಕಿ ದೂರ ಹಾರುತ ಹೋತು
ಶಿವತಂದೆ ಶುಭ ಬೆಳಗು ತಂದ ತಂದ

ಶಿವಯೋಗದಾನಂದ ಶೃಂಗಾರ ಸುಂದರಿಯು
ಶರಣಸುಂದರ ಪಾದ ತೊಳೆದಿರುವಳು
ಮುಳ್ಳು ಮಲ್ಲಿಗೆ ಮಾಡಿ ಕಲ್ಲು ಸಂಪಿಗೆ ಮಾಡಿ
ಸುಣ್ಣ ಬೆಣ್ಣೆಯ ಮಾಡಿ ಕುಣಿದಿರುವಳು

ಭಸ್ಮವಾಯಿತು ಭೂತ ಸುಟ್ಟು ಹೋಯಿತು ಪ್ರೇತ
ಮಾಯೆಯೆಂಬಾ ಶಬ್ದ ಮಾಯವಾಯ್ತು
ರಾವಣೇಶ್ವರ ಹೋದ ದೇವರಾಮನು ಬಂದ
ಮರಣ ಲೋಕಕೆ ಶರಣ ಗಾನಬಂತು

ನೆಲತುಂಬ ಮಳೆಯಾಯ್ತು ಕಣ್ತುಂಬ ಬೆಳೆಯಾಯ್ತು
ಶಿವಶಿವಾ ಶಿವಶಬ್ದ ಹೊಳೆಯಾಯಿತು
ಮುಗಿಲು ಗಂಟಾನಾದ ಕಡಲು ಜಾಗಟೆಗಾನ
ಸೂರ್‍ಯ ಶರಣನ ಪಾದ ದಯಮಾಡಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೌವ್ವನ
Next post ಉತ್ತು, ಕಿತ್ತು, ಬತ್ತಿಸುವ ಕೃಷಿಯಾಕೋ?

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys