ಏಳು ಯುವಕಾ ಸಾಕು ತವಕಾ

ಏಳು ಯುವಕಾ ಸಾಕು ತವಕಾ
ವಿಶ್ವ ನಿನ್ನನು ಕೂಗಿದೆ
ಏಳು ಏಳೈ ಕೂಗು ಕೇಳೈ
ಭೂಮಿ ನಿನ್ನನು ಬೇಡಿದೆ

ಎಲ್ಲಿ ಸಾವು ನೋವು ಕತ್ತಲೆ
ಅಲ್ಲಿ ಪ್ರೇಮವ ಸುರಿಯುವೆ
ಎಲ್ಲಿ ವಂಚನೆ ಸಂಚು ಯಾಚನೆ
ಅಲ್ಲಿ ಕೆಂಡವ ಕಾರುವೆ

ಹೂವಿಗಿಂತಲು ಹೂವು ನೀನು
ಯುಗಕೆ ಜಗಕೆ ಗುಣಮಣಿ
ನೀನೆ ತ್ಯಾಗಾ ಪ್ರೀತಿ ಶೌರ್‍ಯಾ
ಭುವನ ಭಾಗ್ಯದ ಕಣ್ಮಣಿ

ಗುಡುಗು ಸಿಡಿಲು ಮಿಂಚು ನೀನೆ
ಪ್ರೇಮ ರಾಜ್ಯಕೆ ಪ್ರೇರಣಾ
ರಣದ ಮಾರಣ ಕಹಳೆ ನೀನೆ
ವಿಶ್ವಶಾಂತಿಗೆ ಕಾರಣಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರ ನೆಲೆ
Next post ವೇಷ ಭಾಷೆಯೊಳಷ್ಟೇ ಅಕ್ಷರದಚ್ಚೊತ್ತಿದರೆ ಸಾಕೇ?

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…