ಶಿಲಾಮೂರ್ತಿಯಲಿ ದೇವರನು
ಕಾಣುವ ಹುಚ್ಚು ಹಂಬಲವೇಕೆ?
ಕಣ್ಣಿಗೆ ಕಾಣುವ ದೇವರನು
ಅರಿಯದೆ ಕೈಬಿಟ್ಟೆಯೇಕೆ?
ಕಲ್ಲಿನಲಿ ಮಣ್ಣಿನಲಿ
ಗಾಳಿಯಲ್ಲಿ ನೀರಿನಲ್ಲಿ
ಪಶುಪ್ರಾಣಿ ಸಂಕುಲದಲಿ
ಪ್ರಕೃತಿಯ ಜೀವಜಂತುಗಳಲ್ಲಿ
ಅಣುರೇಣು ತೃಣಕಾಷ್ಠಗಳಲ್ಲಿ
ಎಲ್ಲೆಂದರಲ್ಲಿ ನೀ ಕಾಣುವಲ್ಲಿ
ದೇವರಿರುವನು ನೋಡಾ
ಕಾಣದೆ ಬಳಲುವೆಯೇಕೆ ಮೂಡಾ.
ಗುಡಿ ಚರ್ಚು ಮಸೀದಿಗಳ ಒಳಗೆ
ಅರಳಿ ಅಶ್ವತ್ಥ ಕಟ್ಟೆಗಳ ನಡುವೆ
ದೇವರಿರುವನೆಂಬ ಸಂಕುಚಿತ ಭಾವನೆ
ಸರಿಸಿ ಮನವ ವಿಶಾಲವಾಗಿಸಿ
ಒಳಗಣ್ಣ ತೆರೆದು ಸುತ್ತ ಗಮನಿಸಿ
ಕಾಣುವನು ದೇವರಾಗ
ಪ್ರೀತಿ ತುಂಬಿದ ಹೃದಯಗಳಲ್ಲಿ
ಸ್ನೇಹ ವಿಶ್ವಾಸದ ಮಾತಿನಲ್ಲಿ.
*****
Related Post
ಸಣ್ಣ ಕತೆ
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಒಂದು ಹಿಡಿ ಪ್ರೀತಿ
ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…