ಅನಂತ ಅನಂತವಾಗಿರು

ಅನಂತ ಅನಂತವಾಗಿರು ಮನವೆ
ತಾಮಸ ಬೇಡ ನಿಸ್ವಾರ್‍ಥದ
ಹಣತೆಯ ಹಚ್ಚು ನೀ
ಓ ಮನವೆ ಕನ್ನಡ ಕನ್ನಡ
ಎಂದುಲಿಯ ನೀ ಮನವೆ

ದುಡಿದ ಮನಕೆ ತಣಿವ ಜಲವೆ
ತಲ್ಲಣವೇಕೆ ನಿನಗೆ ಮಣಿವೆ
ಧರೆಗೆ ಎಂದೆಂದಿಗೂ ನೀನು
ಮಣ್ಣಿನ ಕಣ್ಣೆ ಎಂದೊಲಿದು
ನಲಿಯೆ ಮನವೆ ಕನ್ನಡ
ಕನ್ನಡ ಕನ್ನಡ ಎಂದುಲಿಯೆ

ಧ್ಯಾನಿಸು ಮನವೆ ಮಾನಿಸು ಮನವೆ
ಭಾವಲತೆಯಂತೆ ಕತೆಯಾಗಿ
ಕನ್ನಡ ಜ್ಯೋತಿಯ ಕಿರಣವಾಗು
ಆಗು ಅನಂತವಾಗಿರು ನೀ ಕನ್ನಡ
ಕನ್ನಡ ಕನ್ನಡ ಎಂದುಲಿದು ||

ತೆರೆದಿದೆ ನೋಡು ಬಾಗಿಲು
ಜ್ವಲಂತತೆಯ ಜಾಳಿಗೆಯಲಿ
ಪರಂಪರೆಯ ಪಾವನದ
ಸುಂದರ ಸ್ವಪ್ನವಾಗು ಮನವೆ
ಕನ್ನಡ ಕನ್ನಡ ಕನ್ನಡ
ಎಂದಲಿದು ನೆಲಿಯೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಕಾಶದ ಬೇರು
Next post ಗಾಳಿಯಲಿ ತೇಲಿದ ನೆರಳು

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…