ಆಕಾಶದ ಬೇರು

ಧರ್‍ಮದ ಹೆಸರು ದೇಶದ ತುಂಬ
ಸಾವಿರ ಸಾವಿರ ಸಾವುಗಳು
ಮರೆಯುವ ಮಠಗಳ ಪೀಠದ ಕೆಳಗೆ
ನರಳುವ ಅಸಂಖ್ಯ ನೋವುಗಳು.

ಧರ್‍ಮದ ದಳ್ಳುರಿ ದವಡೆಗೆ ಸಿಕ್ಕಿ
ಜಜ್ಜಿಹೋಗಿದೆ ಮಾನವೀಯತೆ
‘ಸರ್‍ವ ಜನರಿಗೆ ಸುಖ’ ತುತ್ತೂರಿ
ಹೂತು ಹೋಗಿದೆ ಸಮಾನತೆ.

ಗೊಡ್ಡು ಧರ್‍ಮಗಳ ಬೊಜ್ಜು ಮಾತುಗಳು
ತೇಗುತ ಕೂತಿವೆ ತೂಗಡಿಸಿ
ಕೊಳೆತು ನಾರುತಿದೆ ನಾಡ ನಾಲಗೆ
ಶತಶತಮಾನವು ಪಾಠ ಒಪ್ಪಿಸಿ.

ಬಡವರ ಭ್ರಮೆಗೆ ಭೂತಗನ್ನಡಿ
ಜೊಲ್ಲು ಸುರಿಸುವ ಜಡಧರ್‍ಮ
ಎಳೆಯರ ಎದೆಗೂ ಚಪ್ಪಡಿ ಎಳೆದು
ಹೇಳುವ ತತ್ವ-‘ಇದು ಕರ್‍ಮ’.

ಸಮತೆಯ ಸೋಗಿನ ತಳಪಾಯದಲಿ
ಎದೆಯೆದೆ ನಡುವೆ ವಿಷಗೊಡೆ
ಅರಿವಿನ ಬದಲು ಅಂಧತೆ ಅಮರಿ
ತಲೆ ಬರುಡೆಗಳ ಬಟವಾಡೆ.

ಮತಧರ್ಮದ ಮರ
ಮೃಗಶಕ್ತಿಗೆ ವರ
ಆಕಾಶದ ಬೇರು, ನೆಲತುಂಬಿದ ಟಿಸಿಲು
ನೆಲದಾಳಕೆ ಬೇರಿಳಿಯುತ
ಮುಗಿಲೆತ್ತರ ಟಿಸಿಲೆತ್ತುತ
ಬಲವಾಗಲಿ ಮನುಜತೆ, ನಮ್ಮೆಲ್ಲರ ಕರುಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೭
Next post ಅನಂತ ಅನಂತವಾಗಿರು

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys