ಆಕಾಶದ ಬೇರು

ಧರ್‍ಮದ ಹೆಸರು ದೇಶದ ತುಂಬ
ಸಾವಿರ ಸಾವಿರ ಸಾವುಗಳು
ಮರೆಯುವ ಮಠಗಳ ಪೀಠದ ಕೆಳಗೆ
ನರಳುವ ಅಸಂಖ್ಯ ನೋವುಗಳು.

ಧರ್‍ಮದ ದಳ್ಳುರಿ ದವಡೆಗೆ ಸಿಕ್ಕಿ
ಜಜ್ಜಿಹೋಗಿದೆ ಮಾನವೀಯತೆ
‘ಸರ್‍ವ ಜನರಿಗೆ ಸುಖ’ ತುತ್ತೂರಿ
ಹೂತು ಹೋಗಿದೆ ಸಮಾನತೆ.

ಗೊಡ್ಡು ಧರ್‍ಮಗಳ ಬೊಜ್ಜು ಮಾತುಗಳು
ತೇಗುತ ಕೂತಿವೆ ತೂಗಡಿಸಿ
ಕೊಳೆತು ನಾರುತಿದೆ ನಾಡ ನಾಲಗೆ
ಶತಶತಮಾನವು ಪಾಠ ಒಪ್ಪಿಸಿ.

ಬಡವರ ಭ್ರಮೆಗೆ ಭೂತಗನ್ನಡಿ
ಜೊಲ್ಲು ಸುರಿಸುವ ಜಡಧರ್‍ಮ
ಎಳೆಯರ ಎದೆಗೂ ಚಪ್ಪಡಿ ಎಳೆದು
ಹೇಳುವ ತತ್ವ-‘ಇದು ಕರ್‍ಮ’.

ಸಮತೆಯ ಸೋಗಿನ ತಳಪಾಯದಲಿ
ಎದೆಯೆದೆ ನಡುವೆ ವಿಷಗೊಡೆ
ಅರಿವಿನ ಬದಲು ಅಂಧತೆ ಅಮರಿ
ತಲೆ ಬರುಡೆಗಳ ಬಟವಾಡೆ.

ಮತಧರ್ಮದ ಮರ
ಮೃಗಶಕ್ತಿಗೆ ವರ
ಆಕಾಶದ ಬೇರು, ನೆಲತುಂಬಿದ ಟಿಸಿಲು
ನೆಲದಾಳಕೆ ಬೇರಿಳಿಯುತ
ಮುಗಿಲೆತ್ತರ ಟಿಸಿಲೆತ್ತುತ
ಬಲವಾಗಲಿ ಮನುಜತೆ, ನಮ್ಮೆಲ್ಲರ ಕರುಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೭
Next post ಅನಂತ ಅನಂತವಾಗಿರು

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…