ಗಾಳಿಯಲಿ ತೇಲಿದ ನೆರಳು

ಕೆಂಪು ನಿಯಾನ್ ಲೈಟಿನ ಬೆಳಕಲ್ಲಿ ಕರೀ
ರಸ್ತೆ ಮೈ ಕಾಯಿಸಿಕೊಂಡು ಉದ್ದುದ್ದ
ಹರಿದ ರಾತ್ರಿ, ರಸ್ತೆಯ ತುದಿಯ
ಮರದ ನೆರಳು ದೂರದಿಂದ ಭೀಮಾಕೃತಿ.

ಮುರಿದ ಒಣಗಿದ ಬಾಳೆಯಲೆಯಂತೆ,
ಅಲ್ಲಲ್ಲಿ ಚದುರಿದ ಕಸಗಳು ಮೆಲ್ಲಗೆ
ಬೀಸುವ ಗಾಳಿಗೆ ಅತ್ತಿಂದಿತ್ತ ಚಲಿಸಿವೆ,
ದಾರಿಗುಂಟ ಒಜ್ಜೆಯ ನೆನಪಿನ ಲಾರಿಗಳು
ಸರಿದಿವೆ.

ಮಧ್ಯರಾತ್ರಿಯ ಮೌನದ ಕತ್ತಲೆಯಲಿ
ಅವರಿವರ ನೆರಳುಗಳು ಸೈಕಲ್ಲುಗಳು
ಸರಿದು ಹೋಗಿವೆ ಬರೀ ಗಾಲಿಗಳ ಗುರುತು
ಉಳಿಸಿ, ಸಿನೇಮಾ ಪರಧೆಯ ಕನಸುಗಳು
ಮುತ್ತಿಕೊಂಡಿವೆ.

ನಿರಾಳವಾಗಿ ಮಧ್ಯೆ ರಸ್ತೆಯಲ್ಲಿ ಮಲಗಿದ
ಬೀದಿ ನಾಯಿಗೆ ಹೆಣ್ಣು ನಾಯಿಯೊಂದು ಸಿಕ್ಕಿದೆ
ಯಾವ ವಾಹನದ ಸಪ್ಪಳನೂ ಅವುಗಳನ್ನು
ಕಂಗೆಡಿಸಿಲ್ಲ ಮತ್ತೆ ಮರಿಗಳು ಹುಟ್ಟುವ ಬೀಜಗಳು ಹರಿಸಿವೆ.

ಬೆಳಗಿನ ಸೂರ್ಯನ ಬಿಸಿಲಿಗೆ ಕಂಪಿಸಿ ಕೆಂಪಾದ
ಹೂ ತೊಟ್ಟು ಕಳಚಿಕೊಂಡು ಗೊತ್ತಾಗದಂತೆ
ನೆಲವ ಅಪ್ಪಿದೆ, ಬಯಲಲಿ ಬೀಸಿದ ಗಾಳಿಗೂ
ಅವರಿವರ ನೆರಳನ್ನು ಹೊತ್ತು ತಿರುಗಾಡುವ
ಭಾರದ ಇರುಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಂತ ಅನಂತವಾಗಿರು
Next post ಮತ್ತೆ ಹಸ್ತಿನಾಪುರಕ್ಕೆ ಬಂದ ಪಾಂಡವರು

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…