ಗಾಳಿಯಲಿ ತೇಲಿದ ನೆರಳು

ಕೆಂಪು ನಿಯಾನ್ ಲೈಟಿನ ಬೆಳಕಲ್ಲಿ ಕರೀ
ರಸ್ತೆ ಮೈ ಕಾಯಿಸಿಕೊಂಡು ಉದ್ದುದ್ದ
ಹರಿದ ರಾತ್ರಿ, ರಸ್ತೆಯ ತುದಿಯ
ಮರದ ನೆರಳು ದೂರದಿಂದ ಭೀಮಾಕೃತಿ.

ಮುರಿದ ಒಣಗಿದ ಬಾಳೆಯಲೆಯಂತೆ,
ಅಲ್ಲಲ್ಲಿ ಚದುರಿದ ಕಸಗಳು ಮೆಲ್ಲಗೆ
ಬೀಸುವ ಗಾಳಿಗೆ ಅತ್ತಿಂದಿತ್ತ ಚಲಿಸಿವೆ,
ದಾರಿಗುಂಟ ಒಜ್ಜೆಯ ನೆನಪಿನ ಲಾರಿಗಳು
ಸರಿದಿವೆ.

ಮಧ್ಯರಾತ್ರಿಯ ಮೌನದ ಕತ್ತಲೆಯಲಿ
ಅವರಿವರ ನೆರಳುಗಳು ಸೈಕಲ್ಲುಗಳು
ಸರಿದು ಹೋಗಿವೆ ಬರೀ ಗಾಲಿಗಳ ಗುರುತು
ಉಳಿಸಿ, ಸಿನೇಮಾ ಪರಧೆಯ ಕನಸುಗಳು
ಮುತ್ತಿಕೊಂಡಿವೆ.

ನಿರಾಳವಾಗಿ ಮಧ್ಯೆ ರಸ್ತೆಯಲ್ಲಿ ಮಲಗಿದ
ಬೀದಿ ನಾಯಿಗೆ ಹೆಣ್ಣು ನಾಯಿಯೊಂದು ಸಿಕ್ಕಿದೆ
ಯಾವ ವಾಹನದ ಸಪ್ಪಳನೂ ಅವುಗಳನ್ನು
ಕಂಗೆಡಿಸಿಲ್ಲ ಮತ್ತೆ ಮರಿಗಳು ಹುಟ್ಟುವ ಬೀಜಗಳು ಹರಿಸಿವೆ.

ಬೆಳಗಿನ ಸೂರ್ಯನ ಬಿಸಿಲಿಗೆ ಕಂಪಿಸಿ ಕೆಂಪಾದ
ಹೂ ತೊಟ್ಟು ಕಳಚಿಕೊಂಡು ಗೊತ್ತಾಗದಂತೆ
ನೆಲವ ಅಪ್ಪಿದೆ, ಬಯಲಲಿ ಬೀಸಿದ ಗಾಳಿಗೂ
ಅವರಿವರ ನೆರಳನ್ನು ಹೊತ್ತು ತಿರುಗಾಡುವ
ಭಾರದ ಇರುಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಂತ ಅನಂತವಾಗಿರು
Next post ಮತ್ತೆ ಹಸ್ತಿನಾಪುರಕ್ಕೆ ಬಂದ ಪಾಂಡವರು

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys