ಹಸಿರುಟ್ಟ ನೆಲದಲ್ಲಿ

ಹಸಿರುಟ್ಟ ನೆಲದಲ್ಲಿ
ಹೊಸತು ಬಗೆಯ ಕಂಡೆ
ಹೊಸ ಬೆಳಕಿನ ಹಗಲಲ್ಲಿ
ನಸು ನಾಚಿದ ಮೊಗವ ಕಂಡೆ ||

ಋತು ದರ್ಶನದಾ ನೆಲೆಯಲಿ
ದಿವ್ಯತೆಯ ಭಾವವ ಕಂಡೆ
ಸುಂದರ ಸ್ವಪ್ನಗಾನ ಲತಾಮಂಟಪದಲ್ಲಿ
ನಳಿನ ಮುಖಿಯರ ನರ್‍ತನ ಕಂಡೆ ||

ಮೇಘಮಾಲೆಯ ಚಿತ್ತದೋಕುಳಿಯಲಿ
ಚಿತ್ತ ಬಿಡಿಸಿ ಹಸನಾಗಿಹ ವಸಂತನ ಕಂಡೆ
ನವಯೌವನದ ಹುರುಪಿಗೆ ನಲಿದ
ಮಾಧವಿ ಮನಸಿಜನವರಿಸಿದ ಕಂಡೆ ||

ಕಾನನದೊಳು ನವ್ಯ ಭಾವದೊಲುಮೆಯಲಿ
ನಲಿಯುವ ತರುಲತೆ ಮೃಗ ಕೃಷ್ಣೆಯರ ಕಂಡೆ
ಕಾದಂಬಿನಿಯಲಿ ನೊಸೆದ ನವನೀತ
ಬೆಡಗಿಯರ ಬಳುಕಿ ನಡೆವ ಸೊಬಗ ಕಂಡೆ ||

ಜೀವದುಸಿರಾಗಿ ಶ್ರುತಿಯಾಗಿ
ಅನಂತದೊಳು ಕಲಕಲನಾದದಿಂ
ಬೆರೆತು ಕುಣಿಯುತ ಬರುವ
ಜಲಕನ್ಯೆಯರ ಕಂಡೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವ ಶರೀರ ದೇವರಿಗಾಗಿ
Next post ಅನಾವರ್ತ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys