ಅನಾವರ್ತ

ಬೆಳಕಿನ ಸೂರ್ಯ ಉದುರಿಸುತ್ತಾನೆ
ಆವರ್ತ ಬೀಜಗಳು ಸಾಗರದಲಿ.
ತೇಲಿ ಮತ್ತೆ ಹನಿ ಆಗಿ ಆಗಸಕ್ಕೇರಿ
ಬಿಳಿ ಮೋಡಗಳು ತೇಲಿದ ನೀಲಿ ಆಕಾಶ.

ಎಲ್ಲಾ ಗುಟ್ಟುಗಳ ನಿನ್ನಲ್ಲೇ ಇರಿಸಿಕೊಂಡು
ಅವಸ್ಥೆಯಲಿ ಒಲೆಬೆಂಕಿ ಉರಿದು,
ಬೀಜಗಳ ರೊಟ್ಟಿಗಳು ಹರಡಿದ ಬದುಕು.
ಗಾಳಿ ಬೀಸಿ ತೇಲಿದ ಪಟ ನೀಲಿ ಆಕಾಶ,

ತಿರುಗಿ ತಿರುಗಿ ಮೇಲೇರಿ ಕೆಳಗಿಳಿದ
ಚಕ್ರತೊಟ್ಟಿಲು, ಏರಿದವರು ಇಳಿದು
ಇಳಿದವರು ಏರಿ ಆವರ್ತದ ಪರಧಿ.
ನಿಯಮಕ್ಕೆ ಅರಳಿದ ಹೂಗಳ ನೀಲಿ ಆಕಾಶ.

ಹೊರಗಿನ ಬೆಳದಿಂಗಳ ತಂಪು ಎದೆಯೊಳಗೆ
ಇಳಿದು ಹಿತದ ಮೆತ್ತನೆ ಪೀಠದ ಬುದ್ಧ.
ಶಾಶ್ವತ ಭ್ರಮೆಯ ಹೊಡೆದೋಡಿಸಿ ಈ
ಆವರ್ತನೆಯ ಜಾಲ ಬಿಡಿಸಿಕೊಂಡ ಮುಕ್ತ.

ಏರುವುದು ಇಳಿಯುವುದು ಎಲ್ಲಾ
ಗೊಂದಲಗಳ ದಾಟಿ, ನೀ ಅತಿಥಿ.
ನಡೆದ ದಾರಿತುಂಬ ದಿವ್ಯ ಬೆಳಗು ಸೂರ್ಯ
ಅನಾವರ್ತನದ ಚೇತನ ಚಿಂತನ ಬೆಳಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿರುಟ್ಟ ನೆಲದಲ್ಲಿ
Next post ಏಕಲವ್ಯನ ಗುರುದಕ್ಷಿಣೆ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys