ನೆಹರು ನಿಮ್ಮ ನೆನಪು

ನೆಹರು ನಿಮ್ಮ ನೆನಪು
ನಮ್ಮೆಲ್ಲರ ಅಂತರಂಗವ ತುಂಬಿ
ಬರಡಾಗಿದ್ದ ನೆಲವು ಹಸಿರಾಯ್ತು
ನಿಮ್ಮ ನೆನಪು ಹೊನಲ ಚುಂಬಿ ||

ವರುಷವು ಉರುಳಿ ಬರಲು
ನಿಮ್ಮ ನೆನಪು ಭಾವನೆ ಚೆಲುವ
ಕವಲೊಡೆದ ಸಸಿಯು ಚಿಗುರಿ
ಮೊಗ್ಗರಳಿ ಚೆಂಗುಲಾಬಿ ಕರೆಯುವಲ್ಲಿ ||

ಪಂಚಶೀಲ ದಿವ್ಯತತ್ವ
ಬೆಳಗಿ ಭವ್ಯಜೀವನ ಕಾವ್ಯ
ನಿಮ್ಮ ನೆನಹು ನಿಲುವು ನಿಲ್ಲುವಲ್ಲಿ
ಧ್ಯಾನ ಚಿಂತನ ಸಾರ್ಥಕತೆಯಲ್ಲಿ ||

ನಿಮ್ಮ ಕೀರ್ತಿ ಉಜ್ವಲವಾಗಿ
ನಿರ್‍ಮಲತೆಯ ಕಂಡಿತು ಧರಿತ್ರಿ
ಸ್ಫೂರ್ತಿಗಿದೋ ನಿಮ್ಮಯ ಮೂರ್‍ತಿ
ಭಾರತದ ಏಳ್ಗೆಗಾಗಿ ದುಡಿಯುವಲ್ಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಿ
Next post ದೀರ್ಘ ಪ್ರಾರ್ಥನೆ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys