Home / ಕವನ / ಕವಿತೆ / ದೀರ್ಘ ಪ್ರಾರ್ಥನೆ

ದೀರ್ಘ ಪ್ರಾರ್ಥನೆ

ಬಿಟ್ಟು ಬಿಡದೇ ನಡೆದೆ ನಡೆದರು
ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು.
ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು.
ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು,
ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು.
ಹಸಿರು ಸೊಂಪಿನ ದಾರಿತುಂಬ ಕಂಡ,
ಬೇಟೆಯ ಹೆಜ್ಜೆಗಳು, ಏರು ದಾರಿ ತುಂಬ ನೋವು.

ಅಂತರಿಕ್ಷದಲಿ ತಾರೆಗಳ ಹುಡುಕಿದವರು.
ಮೊದಲ ಮಳೆಹನಿಗೆ ಮುಖ ಒಡ್ಡಿದಾಗ,
ಸಂಪನ್ನ ಸದಾಚಾರದ ಮಣ್ಣು ಘಮ್ಮೆಂದು
ಒಳಗೊಳಗೆ ಚಿಗುರಿದ ಹಸಿರು, ಆತ್ಮದ ತುಂಬ
ಧ್ವನಿ ಎತ್ತಿ ಹಾಡಿದ ಹಕ್ಕಿಗೂಡು, ತಾಯಿ ಒಡಲಲಿ
ಹುದುಗಿದ ಕೂಸು ಹಸಿಬಿಸಿ ರಕ್ತ ನರಗಳಲಿ
ಹರಿದು ಹೃದಯ ಹಗುರಾಗುವ ಊರು ಕೇರಿ.

ಸಾಗುತ್ತಲಿದೆ ದಾರಿ ಹೆಣಗುತ್ತ ಅವರಿವರ ಹೆಜ್ಜೆಗಳ
ಹೊತ್ತು ಶಿಲುಬೆ, ವರ್ಷದ ಎಲ್ಲಾ ಕಾಲದಲ್ಲಿ ಎದೆ
ಶೂಲೆ ಸಹಿಸುತ್ತ ಸೂರ್ಯ ಪಸರಿಸಿದ ಕಿರಣಗಳು.
ಪ್ರೇಮದ ಮಾತು ತೆರೆದ ನೀಲಿ ಆಕಾಶದಲಿ,
ಡಬ್ಬುಬಿದ್ದ ಚಂದ್ರ ಹಳೇ ಗ್ರಂಥಗಳಲಿ ಹುದುಗಿದ.
ಇತಿಹಾಸ, ಉತ್ತಮವಾದದ್ದು ಯಾವುದೂ
ಪರಿಶ್ರಮವಿಲ್ಲದೇ ದಕ್ಕದು, ಸಫಲವಾಗು ಕೃತಿಯಲ್ಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...