ದೀರ್ಘ ಪ್ರಾರ್ಥನೆ

ಬಿಟ್ಟು ಬಿಡದೇ ನಡೆದೆ ನಡೆದರು
ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು.
ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು.
ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು,
ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು.
ಹಸಿರು ಸೊಂಪಿನ ದಾರಿತುಂಬ ಕಂಡ,
ಬೇಟೆಯ ಹೆಜ್ಜೆಗಳು, ಏರು ದಾರಿ ತುಂಬ ನೋವು.

ಅಂತರಿಕ್ಷದಲಿ ತಾರೆಗಳ ಹುಡುಕಿದವರು.
ಮೊದಲ ಮಳೆಹನಿಗೆ ಮುಖ ಒಡ್ಡಿದಾಗ,
ಸಂಪನ್ನ ಸದಾಚಾರದ ಮಣ್ಣು ಘಮ್ಮೆಂದು
ಒಳಗೊಳಗೆ ಚಿಗುರಿದ ಹಸಿರು, ಆತ್ಮದ ತುಂಬ
ಧ್ವನಿ ಎತ್ತಿ ಹಾಡಿದ ಹಕ್ಕಿಗೂಡು, ತಾಯಿ ಒಡಲಲಿ
ಹುದುಗಿದ ಕೂಸು ಹಸಿಬಿಸಿ ರಕ್ತ ನರಗಳಲಿ
ಹರಿದು ಹೃದಯ ಹಗುರಾಗುವ ಊರು ಕೇರಿ.

ಸಾಗುತ್ತಲಿದೆ ದಾರಿ ಹೆಣಗುತ್ತ ಅವರಿವರ ಹೆಜ್ಜೆಗಳ
ಹೊತ್ತು ಶಿಲುಬೆ, ವರ್ಷದ ಎಲ್ಲಾ ಕಾಲದಲ್ಲಿ ಎದೆ
ಶೂಲೆ ಸಹಿಸುತ್ತ ಸೂರ್ಯ ಪಸರಿಸಿದ ಕಿರಣಗಳು.
ಪ್ರೇಮದ ಮಾತು ತೆರೆದ ನೀಲಿ ಆಕಾಶದಲಿ,
ಡಬ್ಬುಬಿದ್ದ ಚಂದ್ರ ಹಳೇ ಗ್ರಂಥಗಳಲಿ ಹುದುಗಿದ.
ಇತಿಹಾಸ, ಉತ್ತಮವಾದದ್ದು ಯಾವುದೂ
ಪರಿಶ್ರಮವಿಲ್ಲದೇ ದಕ್ಕದು, ಸಫಲವಾಗು ಕೃತಿಯಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆಹರು ನಿಮ್ಮ ನೆನಪು
Next post ಪಾಂಡು ಪತ್ನಿಯರು

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…