ದೀರ್ಘ ಪ್ರಾರ್ಥನೆ

ಬಿಟ್ಟು ಬಿಡದೇ ನಡೆದೆ ನಡೆದರು
ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು.
ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು.
ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು,
ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು.
ಹಸಿರು ಸೊಂಪಿನ ದಾರಿತುಂಬ ಕಂಡ,
ಬೇಟೆಯ ಹೆಜ್ಜೆಗಳು, ಏರು ದಾರಿ ತುಂಬ ನೋವು.

ಅಂತರಿಕ್ಷದಲಿ ತಾರೆಗಳ ಹುಡುಕಿದವರು.
ಮೊದಲ ಮಳೆಹನಿಗೆ ಮುಖ ಒಡ್ಡಿದಾಗ,
ಸಂಪನ್ನ ಸದಾಚಾರದ ಮಣ್ಣು ಘಮ್ಮೆಂದು
ಒಳಗೊಳಗೆ ಚಿಗುರಿದ ಹಸಿರು, ಆತ್ಮದ ತುಂಬ
ಧ್ವನಿ ಎತ್ತಿ ಹಾಡಿದ ಹಕ್ಕಿಗೂಡು, ತಾಯಿ ಒಡಲಲಿ
ಹುದುಗಿದ ಕೂಸು ಹಸಿಬಿಸಿ ರಕ್ತ ನರಗಳಲಿ
ಹರಿದು ಹೃದಯ ಹಗುರಾಗುವ ಊರು ಕೇರಿ.

ಸಾಗುತ್ತಲಿದೆ ದಾರಿ ಹೆಣಗುತ್ತ ಅವರಿವರ ಹೆಜ್ಜೆಗಳ
ಹೊತ್ತು ಶಿಲುಬೆ, ವರ್ಷದ ಎಲ್ಲಾ ಕಾಲದಲ್ಲಿ ಎದೆ
ಶೂಲೆ ಸಹಿಸುತ್ತ ಸೂರ್ಯ ಪಸರಿಸಿದ ಕಿರಣಗಳು.
ಪ್ರೇಮದ ಮಾತು ತೆರೆದ ನೀಲಿ ಆಕಾಶದಲಿ,
ಡಬ್ಬುಬಿದ್ದ ಚಂದ್ರ ಹಳೇ ಗ್ರಂಥಗಳಲಿ ಹುದುಗಿದ.
ಇತಿಹಾಸ, ಉತ್ತಮವಾದದ್ದು ಯಾವುದೂ
ಪರಿಶ್ರಮವಿಲ್ಲದೇ ದಕ್ಕದು, ಸಫಲವಾಗು ಕೃತಿಯಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆಹರು ನಿಮ್ಮ ನೆನಪು
Next post ಪಾಂಡು ಪತ್ನಿಯರು

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys