ದೇವಿ

ಓ ಕಾಳಿಕಾ ದೇವಿ ಜಗನ್ಮಾತೆ
ಭಕ್ತ ಜನ ಹೃದಯದಲಿ ನಲಿಯುವಾಕೆ
ಕೋರಿಕೆಗಳ ಪೂರೈಸುವ ದೇವಿಯೇ
ಸ್ಮರಣೆಯ ನಿನ್ನ ಮೂರ್‍ತಿ ತೋರುವಾಕೆ

ಯುಗ ಯುಗಗಳಲ್ಲಿ ದೇವಿ ವೈಜಯಂತಿ
ಚೈತನ್ಯ ದಾಯನಿ ಶ್ರೀಮುಖಿ
ನಿನ್ನ ಸನ್ನಿಧಾನ ಏಳೇಳು ಸಗ್ಗ
ಮತ್ತೆ ಆತ್ಮಗಳು ಆನಂದ ಸುಖಿ

ಯಾರದರುಶನಕ್ಕೆ ಜನ ಹಗಲಿರುಳು
ಶಂಖಗಳ ನಾದ ಮಾಡುತಿಹರು
ಯಾರ ಮೊಗಾರವಿಂದಕ್ಕೆ ಭಕ್ತರು
ತಮ್ಮ ದೈನಂದಿನ ಧ್ಯಾನ ಗೈಯುತ್ತಿಹರು

ಅವರಿಗಾಗಿ ತಾಯಿ ನೀನು ಜಗದಾತೆ
ನಿನ್ನ ಲೀಲೆಗಳಿಗೆ ಜಗತ ಕಾರಣ
ನೀನೊಂದೇ ಉಳಿದೆಲ್ಲವೂ ಮಿಥ್ಯ
ಮಾಣಿಕ್ಯ ವಿಠಲನೇ ಪರಿಪೂರ್ಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೩
Next post ನೆಹರು ನಿಮ್ಮ ನೆನಪು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…