Home / ಕವನ / ಕವಿತೆ / ಮಾನಸ ಆತ್ಮದಲ್ಲಿ

ಮಾನಸ ಆತ್ಮದಲ್ಲಿ

(ಸಾವಿತ್ರಿ)
ಕೊನೆಗಲ್ಲಿ ಬಂತು ಬರಿದೆನುವ ಬಯಲು ಆ ಉದಾಸೀನ ಬಾನು.
ಕೋಟಿ ಪ್ರಶ್ನೆ ಏನೇನು ? ಇರಲಿ ಉತ್ತರವು ಬ್ರಹ್ಮ ನಾನು.
ವಿಶ್ವ ಹೇಳುತಿದೆ ಮೌನ ಕೇಳುತಿದೆ ಮನನ ಏಕತಾನು.
ಜೀವ ಜಿಜ್ಞಾಸೆಗಿಲ್ಲ ಕೊನೆಯು ಪ್ರತಿ ಮೌನ ಕಾಮಧೇನು.

ಲವಲವಿಕೆಯೆಲ್ಲ ಎಕ್ಕೆಕ್ಕಿ ನಡೆದು ಮುಗ್ಗರಿಸಿಕೊಂಡು ಬಿತ್ತು.
ಬರಿ ಸಾಮಸೂಮ ಹಬ್ಬುತ್ತ ಒಮ್ಮೆಗೆಲೆ ಸ್ತಬ್ಧವಾಗಿ ಇತ್ತು.
* * *

ನಿರಾಕಾರ, ನಿಶ್ಚರ್ಯ ಮತ್ತು ನಿಃಶಬ್ಬ ಪುರುಷನೊಬ್ಬ.
ಹೊತ್ತು ಹೊರತಾಗೆ, ತನ್ನ ತಿಳಿದವನು ತಾನೆ ತಾನು ಆಗಿ,
ನಿಸ್ತರಂಗದಾ ಆಳದಲ್ಲಿ ಅರಿವೆನಿಸಿ ಆಗಳೂನೂ
ನಿರ್ಮಾತನಲ್ಲ, ನಿರ್ಮಾಣವಲ್ಲ, ಪೂರಾ ಅಜಾತನಾಗಿ

ಒಂದರದೆ ಹಲವು, ಇವನಿಂದೆ ಹರವು, ಎರವಿಲ್ಲದೊಬ್ಬನೊಬ್ಬ,
ಇಲ್ಲದಕೆ ಅಳತೆ ಬೆಳ್ಳಂ ಬೆಳಕು-ಮುಸುಕಿತ್ತು ಗುಪ್ತವಿರಿಸಿ.
ಅವ್ಯಕ್ತ ತನ್ನ ಆವರಣಗಳಲಿ ಕಾಪಾಡಿದಂತೆ ಉಳಿಸಿ,
ವಿಶ್ವದೊಂದು ವಿಷ್ಕಂಭದಾಚೆ ಲೋಕಾಲೋಕ ದಾಟಿ,
ಬ್ರಹ್ಮದಕ್ಷರದ ಪರಂಧಾಮ ಏಕೋ ಏಕವೆನಿಸಿ,

ಅರಿದಾದ ಗೂಢಕಾರಣವು ತಾನು ದುರ್ಭೇದ್ಯದಾತನಾಗಿ,
ಚಿರಂತನವು ತಾ, ತಾನನಂತ್ಯ ಕೇವಲವಗಮ್ಯವಾಗಿ,
* * *

ಆಕಾರವಿರದ ಆಕಾರವೊಂದು ಆತ್ಮಾರ್ಥವೆಂದು ತಿಳಿಯೆ,
ತುಹದ್ಭೂತ ಗತಿಸಿರಲು ಅದರ ಘನಛಾಯೆ ಹಿಂದೆ ಉಳಿಯೆ,
ಆ ಅಪಾರ ಪಾರಾವಾರದಲ್ಲಿಳಿವ ಮೊದಲು ಗಳಿಗೆ,
ಅಳಿವೆ ಅಲೆಯಲೆಯ ಕೊನೆಯ ಕಲೆಯ ಅನುಭವದ ಹಾಗೆ ಕಳೆಯೆ,

ಶೂನ್ಯ ಸಾಗರದ ತೀರದಲ್ಲೆ ಇಂಗಿಂಗಿ ಜಡಧಿ ಹೋಗೆ,
ಬಯಲು ಭಾವನೆಯ ತೇವ ಭಾವಿಯಲೆ ಆರಿಹೋದ ಹಾಗೆ,
ಅವಕಾಶವನ್ನು ನೆಂಬಿಲ್ಲ ಎಂಬ ಮಹದಾತ್ಮಧ್ಯಾನ ಪ್ರಖರ,
ಕಾಲವನೆ ಕೊಸರಿ ನಿಡಿದಾದ ತಾನು ಶಾಶ್ವತದ ಶೂನ್ಯಶಿಖರ,

ಅದ್ಭುತವು ಭವ್ಯ ವ್ಯಭಿಚರಣೆ ಇದರ ಸುಸ್ಥಾಣು ದಾಂತಶಾಂತ.
ಜಗಜೀವಗಳನು ತಾ ಹೊರಗು ಮಾಡಿ ನಿಬ್ಬೆರಗು ಮೌನವಾಂತ
ಎರಡರಿಯದೊಂದು ಕೈವಲ್ಯ ನೈಜ ಬರಿಬೆತ್ತಲೆತ್ತಲೂನೂ.
ಕಂಡಿತ್ತು ಅವನ ಕಡು-ರಾಗಿ ಜೀವ ಅರಸರಸಿ ಕೊನೆಗೆ ತಾನು.
* * *

ಆಳಾದ ಶಾಂತಿ ಅಲ್ಲಿತ್ತು, ಇಲ್ಲ ಹೆಸರಿರದ ಶಕ್ತಿಯಾಕೆ
ಇರಲಿಲ್ಲ ಅಲ್ಲಿ ಮಾಧುರ್ಯವಂತೆ, ಮಾಶಕ್ತಿ ನಮ್ಮ ಮಾತೆ
ತನ್ನೆದೆಗೆ ಅವಚಿಕೊಳುವವಳು, ತನ್ನ ಸಂತತಿಯ ಬಾಳ್ಕೆ ಜೋಕೆ.

ಏನವಳ ಹಿಡಿತ, ಸಕಲ ಪ್ರಪಂಚ ಆ ಅಗಲ ತಕ್ಕೆಯಲ್ಲಿ
ನೆಲೆ ಹತ್ತದಂಥ ಹರ್ಷಪ್ರಮೋದ ಆನಂತ್ಯದಬ್ಧಿಯಲ್ಲಿ
ನಾಳೆ ನಾಡಿದಿನ ಬಾಳಕಾಳು ಬೆಳೆಸೆನುವ ಮೋದಮುದ್ರೆ
ದೈವದುನ್ಮಾದದಲ್ಲಿ ಬಿಳಿಗಾವು ಎದ್ದ ಭಾವಭದ್ರೆ.
* * *

ಬೆಳಕುಕತ್ತಲೆಯ ಎರಡು ಗೋಲಗಳು ಒಂದನ್ನೊಂದು ದೂಡೆ,
ಮೇರೆಗೆರೆಯಲ್ಲಿ ಆತ್ಮಚರಿತಕ್ಕೆ ಗೀರುಹಾದಿ ಮಾಡೆ
ಕ್ಷಣಿಕ ಘಟನೆಗಳ ರಾಜ್ಯದಲ್ಲಿ; ಜೀವಪ್ರಪಂಚದಲ್ಲಿ.
ಬದುಕಲಿಕ್ಕೆ ಸಾಯುವರು ಅಲ್ಲಿ ಬದುಕುವರು ಸಾವಿಗೆಲ್ಲಿ?

ಮರಳಿ ಮರಳಿ ಮರಣವನೆ ಉಂಡು ಅಮರತ್ವ ಭೋಗಭಾಗಿ
ತನ್ನ ಕೃತಿಯ ಗೋಪುರದ ಚಕ್ರದಲಿ ವಕ್ರವಕ್ರವಾಗಿ
ಆಡಿದ್ದೆ ಆಡಿ ಮಾಡಿದ್ದೆ ಮಾಡಿ ಬಲಗೊಂಬುವಂತೆ ಆಗಿ

ಮೂಲ ಭಂಡವಲು ಮುಗಿಯಲಿಲ್ಲ, ನಿಜ, ಬೆಳೆಯಲಿಲ್ಲ ಕೂಡ
ಜ್ಞಾನವೆಲ್ಲ ಅಜ್ಞಾನದಂತೆ ಮೊದಲಿದ್ದ ಹಾಗೆ ಮೂಢ.
ಆತ್ಮದಾನಂತ್ಯದಿಂದ ಮರೆಯಾಗಿ ಅದುವು ಸಾಗುತಿತ್ತು.
ಇರವು ಬಂಧನದ ಬಾಳು; ಸಾವುದೇ ಮುಕ್ತಿ ಎನಿಸಲಿತ್ತು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...