ಆತ್ಮದ ದೃಶ್ಯ

ಮೋಡಗಳೊರಗಿವೆ ನಿರ್ವಾಸಿತವಾದಾಕಾಶದ ಅವಕಾಶದೊಳು
ಆಲಸದಲಿ ದಣಿವಾದವೊಲು
ಗತಿಸಿದ ಕಡಲಿನ ನೆರೆ ತೆರೆ ಅವಲೋಕಿಸಿ ಸುತ್ತಾಡುತ್ತಿವೆ ಖಿನ್ನ
ಉರುಳುರುಳುತ್ತಿವೆ ಅವಸನ್ನ
ಬರಿ ಚಿಂತೆಯೊಳೋ ಕರಿ ಕರೆ ಚಾಚಿದೆ ಶೋಕಾಕುಲತೆಯೆ ಮುಸುಕಿದೊಲು
ವಾಯವ್ಯದ ಉಸಿರಾಟದಲು
ಅಗೊ ಅದರಾಚೆಗೆ ಅಡಕಿಲವಾಗಿವೆ ವಿಷಾದದಲಿ ಹಲ ದಿನ್ನೆಗಳು

ಪ್ರಕೃತಿಯಲ್ಲಿ ಏಕಾಕಿಯಾದ ಆ ಆತ್ಮದ ನಿಸ್ಸಾರಿತ ಭಾವ
ರಿಕ್ತವಾದ ಹುಸಿಪುಸಿ ಜಾವ
ಗರ್ಭಿತಾರ್ಥದಲ್ಲಿ ಕೆತ್ತಿದಂತೆ ಇರೆ ನೆಲದ ಮುಖಕೆ ಮೊಗವಾಡವಿದೆ
ವಿಕಾರದಲಿ ಕೊರೆದಂತೆ ಇದೆ
ಸ್ತಬ್ದ ಮನೋದಯ ಮಾನವ ಹೃದಯ, ಆಧ್ಯಾತ್ಮಿಕ ಅನುರಾಗದಲಿ
ಇದಿರಿಸುತಿದೆ ಸಂಸ್ತ್ಯಾಗದಲಿ
ವಿಜನ ವನದ ಹತ ಪ್ರತೀಕ್ಷೆಯನ್ನೇ ಅನುಕರಿಸುವ ಆಕಾರದಲಿ

ಎತ್ತಿರಿಸದೆ ಅಗೊ ನಿಂತಿದೆ ಕಾದು, ಸಹಸ್ರರಶ್ಮಿಯ ವರಕಾಗಿ
ಬಂಗಾರಕು ನೀಲಿಗು ಆಗಿ
ಸಾಗರ ಗೀತದ ಮಂಥರ ಸುಂದರ ಮಂಗಲಮಯ ಧ್ರುವಪದಗಾನ
ಸುಖಸಂಚಲ ತಾನವಿತಾನ
ಗಭೀರ ತಲದಲಿ ಮಾನವನಾತ್ಮದಿ ದಿವ್ಯಪ್ರಭವಿಸ್ಫೋಟನಕೆ
ಅಂತರ್ಗತ ಉದ್ಘಾಟನಕೆ
ಸ್ವಪ್ರತಿಬಿಂಬವ ಮೂಡಿಸಿದಾಗ ಹಿಗ್ಗಾದೊಲು ದೇವನ ಮನಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಳಲನುಡಿಸು!
Next post ವಾಗ್ದೇವಿ – ೫೦

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…