Home / ಕವನ / ಕವಿತೆ / ಕೊಳಲನುಡಿಸು!

ಕೊಳಲನುಡಿಸು!

ಕೊಳಲ ನುಡಿಸು ಕಿವಿಯೊಳನಗೆ
ಚೆಲುವ ಮೋಹನಾ!

ಕೊಳಲ ನುಡಿಸಿ ಪ್ರೇಮಸುಧೆಯ
ಮಳೆಯ ಸುರಿಸಿ ಹೃದಯ ತಾಪ
ಕಳೆದು ತಿಳಿವಿನೆಳಬಳ್ಳಿಯ
ಬೆಳೆಯಿಸಿ ಬೆಳಗೆನ್ನ ಮನವ….
ಚೆಲುವ ಮೋಹನಾ!


ಎಳೆಯತನದಿ ಹಸುಗಳ ಜಂ-
ಗುಳಿಯ ಕಾಯಲೆಂದು ಬನಕೆ
ಗೆಳೆಯರೊಡನೆ ಹೋಗಿ ಹೊಳೆಯ
ಮಳಲಿನಲ್ಲಿ ನಿಂತು ನುಡಿಸಿ….
ತಿಳಿನೀರನು ಕುಡಿಸಿ ಧೇನು-
ಗಳನು ತಣಿಸಿ ಚೈತನ್ಯದ
ಕಳೆಯ ನಿಲಿಸಿ ಸ್ಥಿರ-ಚರದಲಿ
ಇಳೆಯನು ನಲಿದಾಡಿಸಿರುವ….
ಚೆಲುವ ಮೋಹನಾ !
ಕೊಳಲ ನುಡಿಸು ಕಿವಿಯೊಳೆನಗೆ
ಚೆಲುವ ಮೋಹನಾ !

೨.
ಕುಂಜಮುಖದ ಸಖಿಯರ ಮನ
ಮಂಜುಳವಹ ರಾಗದಿಂದ
ರಂಜಿಸುತಾಕೆಯರ ಹೃದಯ
ಪಂಜರಶುಕನಾಗಿ ನೀನು….
ಭಂಜಿಸಿ ಭವಭಯ ಮಾಯೆಯ
ಮಂಜನೆಲ್ಲ ಮರೆಮಾಡಲು
ಸಂಜೆಯ ಸವಿಸಮಯದಲ್ಲಿ
ಕುಂಜವನದಿ ಕುಳಿತೂದಿದ…
ಚೆಲುವ ಮೋಹನಾ !
ಕೊಳಲ ನುಡಿಸು ಕಿವಿಯೊಳೆನಗೆ
ಚೆಲುವ ಮೋಹನಾ!


ಭಿನ್ನ ವಿಷಯಕೆಳಸದಂತೆ
ಚೆನ್ನ ನಿನ್ನ ಕೊಳಲ ನುಡಿಸಿ,
ನನ್ನ ಮನದ ಮೃಗವ ತಣಿಸಿ
ನಿನ್ನೊಳದರೆ ನೋಟ ನಿಲಿಸಿ….
ತನ್ಮಯವನ್ನಾಗಿ ಮಾಡಿ
ನಿನ್ನ ನೆರೆಯಲಿರಿಸಿಕೊಳ್ಳೊ
ಬಿನ್ನಹವೆನ್ನದು ಮನ್ನಿಸಿ
ಚಿನ್ಮಯ ಶ್ರೀಕೃಷ್ಣ ಮೂರ್‍ತಿ….
ಚೆಲುವ ಮೋಹನಾ !
ಕೊಳಲ ನುಡಿಸು ಕಿವಿಯೊಳೆನಗೆ
ಚೆಲುವ ಮೋಹನಾ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...