ಕಲ್ಲುಮೂರ್ತಿ

ದೇವದೇವತಾ ಪಟ್ಟಣದಲ್ಲಿ ! ದೇಗುಲದೊಲು ಕಿರಿಕಟ್ಟಡದಲ್ಲಿ ||
ಕಟ್ಟೆರಕದ ಕೈ ಕಾಲೂ ಕಣ್ಣು | ದೇವತೆ ನೋಡಿದಳದೊ ನನ್ನನ್ನು ||
ಸಜೀವ ಜಾಗೃತ ಅಮೃತವು ದಿವ್ಯ | ಏಕಮೂರ್ತಿಯೇ ಅನಂತಭವ್ಯ ||
ಮದಾದೇವಿ ಮಾತಾಯಿಯು ಅಂಬೆ | ಪ್ರತ್ಯಕ್ಷವು ಇಚ್ಚೆಯು ಎಂಬೆ ||
ಪೃಥ್ವಿಯ ಗರ್ಭದ ಆಳಡಿಯಲ್ಲಿ | ನಿಸ್ವಪ್ನದ ನಿದ್ರೆಯ ತೊಡೆಯಲ್ಲಿ ||
ಸರ್ವಶಕ್ತ, ದುರ್ಭೇದ್ಯವು ಮೂಕ | ಗಗನ-ಜಲಧಿ-ವನ ವ್ಯಾಪಿಸಿ ಏಕ ||
ಮುಸುಕಿತು ಇಗೊ ಮಾನಸದಾವರಣ | ಮೌನವನೇ ಮಾಡಿಹಳಾಭರಣ ||
ಅಗಮ್ಯ ನಿಃಶಬ್ದವು ಸರ್ವಜ್ಞ | ಸುಷುಪ್ತಿಯೊಳು ಎಚ್ಚತ್ತನು ಪ್ರಾಜ್ಞ ||
ಕಂಡಿತು ದೃಷ್ಟಿಯು ಕೇಳಿತು ಶ್ರುತಿಯು | ಏಕವ್ಯಕ್ತವು ಆಯ್ತೊ ಮೂರ್ತಿಯು ||
ಪೂಜ್ಯವು, ಪೂಜಕ, ಪೂಜೆಯು, ಪೂವು | ರೂಪ ರೂಪಗಳು ನಾವೂ ನೀವು ||
ಹೆಣ್ಣೂ ಮಣ್ಣೂ ಹೊನ್ನೂ ಒಂದು | ರಮೈಗಮ್ಯ ಶ್ರೀ ರೂಪವು ಎಂದು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿರೀಕ್ಷೆ
Next post ವಾಗ್ದೇವಿ – ೩೫

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…