Home / ಕವನ / ಕವಿತೆ / ಬಾಡಿಗೆ ತಾಯಂದಿರು

ಬಾಡಿಗೆ ತಾಯಂದಿರು

ಸಿಗುತ್ತದೆ ಈ ಪುಣ್ಯಭೂಮಿಯಲಿ
ತಾಯಂದಿರ ಗರ್ಭಗಳು ಬಾಡಿಗೆಗೆ
ತಾಯ್ತನದ ಬಯಕೆಗಳ ಅದುಮಿಟ್ಟು
ದುಡ್ಡು ಕೊಟ್ಟವರಿಗೆ ಹೆತ್ತು ಕೊಡುವರು
ಇಲ್ಲಿ ಬಾಡಿಗೆ ತಾಯಂದಿರು

ಬಸಿರಲಿ ಮೂಡಿದ ಮಗು
ಒದ್ದು ಮೈ ಬದಲಿಸುವ ಚಲನೆ
ತಾಯ್ತನದ ಖುಷಿಯ ಘಳಿಗೆಯಲಿ
ಕಲ್ಲಾಗಿ ಕನಸಿಗೆ ನಿಷೇಧ ಹೇರುವರು.
ಹಿಂಸೆಯ ಶಿಲುಬೆಗೇರುವರು
ಇಲ್ಲಿ ಬಾಡಿಗೆ ತಾಯಂದಿರು.

ಕನಲುವ, ಮಗ್ಗಲು ಬದಲಿಸುವ
ಮುಲುಕುವ, ಹೊಟ್ಟೆಗೆ ಒದೆಯುವ,
ಕಂದನ ಕೈಸರಬೇಕೆಂದರೆ
ಸತ್ತ ಹೃದಯ ತಾಯಿಯವಳು
ಗಂಡನ ಸಾಲ ತೀರಿಸಲು
ಕೇವಲ ಬಾಡಿಗೆ ಗರ್ಭವಾದವಳು.

ಹೆತ್ತ ಕೂಸಿಗೆ ಅವಡುಗಚ್ಚಿ ಕೊಡುವಳು
ಉಕ್ಕಿ ಹರಿವ ಹಾಲಿನ ತೊರೆಯ
ಮನಸು ಕಲ್ಲಾಗಿಸಿ ಆವಿಯಾಗಿಸುವಳು
ಕೊಟ್ಟ ಮಕ್ಕಳ ಮರಳಿ ನೋಡಳು
ಹೊಟ್ಟೆ ಹೊರೆಯಲವಳು
ಸಂತೆಯಲಿ ಗರ್ಬವಿಟ್ಟವಳು

ಅವಳದೆಂತಹ ಹಣೆಬರಹ ನೋಡು
ಹೆತ್ತ ಮಗುವಿಗೆ ಎತ್ತಿ ಮುದ್ದಿಸಲಾರಳು
ತನ್ನದೇ ಕುಡಿ, ತನ್ನಾತ್ಮದ ತುಣುಕನು
ಕರುಳಿಲ್ಲದ ಮಾರುಕಟ್ಟೆಯಲ್ಲಿಟ್ಟು
ಜಾಗತೀಕರಣದ ಹೊಸ ಉದ್ಯಮದಲಿ
ಕೇವಲ ಬಾಡಿಗೆ ತಾಯಾದವಳು.

ಪ್ರಭುವೆ! ಕಣ್ಣಲ್ಲಿ ಕನಸುಗಳ ಕೊಡಬೇಡವೆಂದು
ಕಣ್ಣು ರೆಪ್ಪೆ ಗಟ್ಟಿ ಮುಚ್ಚಿಕೊಳ್ಳುವಳು
ತೇಲಿ ಬರುವ ಕನಸುಗಳಿಗೆ ನಿಷೇಧ ಹೇರುವಳು
ಬಸಿರೋದ್ಯಮದಲಿ ಗರ್ಭ ಮಾರಾಟಕ್ಕಿಡುವಳು
ಮಮತೆಯ ಕತ್ತು ಹಿಸುಕಿದ ಅವಳು,
ಕೇವಲ ಬಾಡಿಗೆ ತಾಯಿಯಾದವಳು.

ದೇವತೆಯೆಂದು ಪೂಜಿಸಿದವರೇ
ಅವಳ ಕ೦ಡು ಇಂದೇಕೆ ನಗುವಿರಿ?
ತಾಯ್ತಾನದ ಘನತೆ ಮಾರಾಟದ ಸರಕಾಗಿಸಿ
ಘನತೆಯ ಬದುಕು ಬೀದಿಪಾಲಾಗಿಸಿ
ಕೇವಲ ಬಾಡಿಗೆ ತಾಯಾಗಿಸಿದಿರಿ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...