Home / ಕವನ / ಕವಿತೆ / ಬಾಡಿಗೆ ತಾಯಂದಿರು

ಬಾಡಿಗೆ ತಾಯಂದಿರು

ಸಿಗುತ್ತದೆ ಈ ಪುಣ್ಯಭೂಮಿಯಲಿ
ತಾಯಂದಿರ ಗರ್ಭಗಳು ಬಾಡಿಗೆಗೆ
ತಾಯ್ತನದ ಬಯಕೆಗಳ ಅದುಮಿಟ್ಟು
ದುಡ್ಡು ಕೊಟ್ಟವರಿಗೆ ಹೆತ್ತು ಕೊಡುವರು
ಇಲ್ಲಿ ಬಾಡಿಗೆ ತಾಯಂದಿರು

ಬಸಿರಲಿ ಮೂಡಿದ ಮಗು
ಒದ್ದು ಮೈ ಬದಲಿಸುವ ಚಲನೆ
ತಾಯ್ತನದ ಖುಷಿಯ ಘಳಿಗೆಯಲಿ
ಕಲ್ಲಾಗಿ ಕನಸಿಗೆ ನಿಷೇಧ ಹೇರುವರು.
ಹಿಂಸೆಯ ಶಿಲುಬೆಗೇರುವರು
ಇಲ್ಲಿ ಬಾಡಿಗೆ ತಾಯಂದಿರು.

ಕನಲುವ, ಮಗ್ಗಲು ಬದಲಿಸುವ
ಮುಲುಕುವ, ಹೊಟ್ಟೆಗೆ ಒದೆಯುವ,
ಕಂದನ ಕೈಸರಬೇಕೆಂದರೆ
ಸತ್ತ ಹೃದಯ ತಾಯಿಯವಳು
ಗಂಡನ ಸಾಲ ತೀರಿಸಲು
ಕೇವಲ ಬಾಡಿಗೆ ಗರ್ಭವಾದವಳು.

ಹೆತ್ತ ಕೂಸಿಗೆ ಅವಡುಗಚ್ಚಿ ಕೊಡುವಳು
ಉಕ್ಕಿ ಹರಿವ ಹಾಲಿನ ತೊರೆಯ
ಮನಸು ಕಲ್ಲಾಗಿಸಿ ಆವಿಯಾಗಿಸುವಳು
ಕೊಟ್ಟ ಮಕ್ಕಳ ಮರಳಿ ನೋಡಳು
ಹೊಟ್ಟೆ ಹೊರೆಯಲವಳು
ಸಂತೆಯಲಿ ಗರ್ಬವಿಟ್ಟವಳು

ಅವಳದೆಂತಹ ಹಣೆಬರಹ ನೋಡು
ಹೆತ್ತ ಮಗುವಿಗೆ ಎತ್ತಿ ಮುದ್ದಿಸಲಾರಳು
ತನ್ನದೇ ಕುಡಿ, ತನ್ನಾತ್ಮದ ತುಣುಕನು
ಕರುಳಿಲ್ಲದ ಮಾರುಕಟ್ಟೆಯಲ್ಲಿಟ್ಟು
ಜಾಗತೀಕರಣದ ಹೊಸ ಉದ್ಯಮದಲಿ
ಕೇವಲ ಬಾಡಿಗೆ ತಾಯಾದವಳು.

ಪ್ರಭುವೆ! ಕಣ್ಣಲ್ಲಿ ಕನಸುಗಳ ಕೊಡಬೇಡವೆಂದು
ಕಣ್ಣು ರೆಪ್ಪೆ ಗಟ್ಟಿ ಮುಚ್ಚಿಕೊಳ್ಳುವಳು
ತೇಲಿ ಬರುವ ಕನಸುಗಳಿಗೆ ನಿಷೇಧ ಹೇರುವಳು
ಬಸಿರೋದ್ಯಮದಲಿ ಗರ್ಭ ಮಾರಾಟಕ್ಕಿಡುವಳು
ಮಮತೆಯ ಕತ್ತು ಹಿಸುಕಿದ ಅವಳು,
ಕೇವಲ ಬಾಡಿಗೆ ತಾಯಿಯಾದವಳು.

ದೇವತೆಯೆಂದು ಪೂಜಿಸಿದವರೇ
ಅವಳ ಕ೦ಡು ಇಂದೇಕೆ ನಗುವಿರಿ?
ತಾಯ್ತಾನದ ಘನತೆ ಮಾರಾಟದ ಸರಕಾಗಿಸಿ
ಘನತೆಯ ಬದುಕು ಬೀದಿಪಾಲಾಗಿಸಿ
ಕೇವಲ ಬಾಡಿಗೆ ತಾಯಾಗಿಸಿದಿರಿ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...