ಮಣ್ಣಿನ ಋಣ

ಮಣ್ಣು ಹೊನ್ನಹುದೆಂದು ಅರಿಯರೇಕೋ ಜನರು
ಕೊಟ್ಟ ಕಾಳನು ನುಂಗಿ ಫಲವೃಂದಮೀವುದಲ
ಒಂದು ಬೀಜವ ಕೊಂಡು ಜನಜಗಕೆ ಜೀವಮಂ
ಹರ್ಷದಿಂದೀವುದೀ ಮಣ್ಣೆ ಮಗ ಕಾರ್ಯಸಿದ್ದಿ.

ಆವ ಕಾಲದೊಳಾವ ದೇಶದಲಿ ಆವ ಜನ-
ಕಾವ ಫಲ ಸವಿಯೊಗರು ಕಹಿ ಸಪ್ಪೆ ಹುಳಿಯೆನಿಸಿ
ಫಲಧಾನ್ಯಮಮೃತಮಂ ತೆಂಗು ಕೌಂಗು ರಸಾಲ
ಹಲಸುಗಳ ಕೊಳ್ಳಿರನ್ನುತ ನೀಡಿ ಸಲಹುವುದು.

ಬೆಚ್ಚನೆಯ ಮನೆಯಿರಲು ನಿಂತು ನಡೆಯಲು ಭೂಮಿ
ಮೊದಲಿಂದ ಕೊನೆತನಕ ಉಸಿರಾಡಲೀ ಗಾಳಿ
ಹಚ್ಚ ಹಸುರುಗಳಿತ್ತು ಹೊತ್ತು ಹೊಸ ಪರಿಮಳವ
ಎಮ್ಮ ಮೂಗಿಗೆ ತಂದು ಮೈತೀಡಿ ಹರುಷಿಪುದು.

ಕುಸುಮದಲಿ ತೀವಿರುವ ಸವಿಜೇನು ಪಶುಗಳಲಿ
ತುಂಬಿರುವ ಅಮೃತದಂತಹ ಹಾಲು ಶಿಶುವುಣುವ
ತಾಯಿಸ್ತನ್ಯದ ಸವಿಯು ಮಣ್ಣಿತ್ತ ರಸಮಹುದು
ಕ್ಷಣ ಕ್ಷಣಕೆ ಕಾಯುವುದು ಹೊತ್ತ ಮಕ್ಕಳನಿಂತು.

ಹಳೆ ದೇಹವನು ಕೊಂಡು ಹೊಸ ಶರೀರವ ಕೊಟ್ಟು
ಮರೆತ ಬುದ್ಧಿಯ ಮತ್ತೆ ಜ್ಞಾಪಿಸುತ ಬಳೆಸುವುದು
ಹೊಸ ತಿಳಿವ ನೀಡುತ್ತ ಅಲ್ಲಲ್ಲಿ ತಿರುಗಿಸುತ
ಕಷ್ಟ ಸುಖಗಳ ಸವಿಯ ತೋರುತ್ತ ಕಳುಹುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಡಿಗೆ ತಾಯಂದಿರು
Next post ಮಾಮರ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…