ಮಣ್ಣಿನ ಋಣ

ಮಣ್ಣು ಹೊನ್ನಹುದೆಂದು ಅರಿಯರೇಕೋ ಜನರು
ಕೊಟ್ಟ ಕಾಳನು ನುಂಗಿ ಫಲವೃಂದಮೀವುದಲ
ಒಂದು ಬೀಜವ ಕೊಂಡು ಜನಜಗಕೆ ಜೀವಮಂ
ಹರ್ಷದಿಂದೀವುದೀ ಮಣ್ಣೆ ಮಗ ಕಾರ್ಯಸಿದ್ದಿ.

ಆವ ಕಾಲದೊಳಾವ ದೇಶದಲಿ ಆವ ಜನ-
ಕಾವ ಫಲ ಸವಿಯೊಗರು ಕಹಿ ಸಪ್ಪೆ ಹುಳಿಯೆನಿಸಿ
ಫಲಧಾನ್ಯಮಮೃತಮಂ ತೆಂಗು ಕೌಂಗು ರಸಾಲ
ಹಲಸುಗಳ ಕೊಳ್ಳಿರನ್ನುತ ನೀಡಿ ಸಲಹುವುದು.

ಬೆಚ್ಚನೆಯ ಮನೆಯಿರಲು ನಿಂತು ನಡೆಯಲು ಭೂಮಿ
ಮೊದಲಿಂದ ಕೊನೆತನಕ ಉಸಿರಾಡಲೀ ಗಾಳಿ
ಹಚ್ಚ ಹಸುರುಗಳಿತ್ತು ಹೊತ್ತು ಹೊಸ ಪರಿಮಳವ
ಎಮ್ಮ ಮೂಗಿಗೆ ತಂದು ಮೈತೀಡಿ ಹರುಷಿಪುದು.

ಕುಸುಮದಲಿ ತೀವಿರುವ ಸವಿಜೇನು ಪಶುಗಳಲಿ
ತುಂಬಿರುವ ಅಮೃತದಂತಹ ಹಾಲು ಶಿಶುವುಣುವ
ತಾಯಿಸ್ತನ್ಯದ ಸವಿಯು ಮಣ್ಣಿತ್ತ ರಸಮಹುದು
ಕ್ಷಣ ಕ್ಷಣಕೆ ಕಾಯುವುದು ಹೊತ್ತ ಮಕ್ಕಳನಿಂತು.

ಹಳೆ ದೇಹವನು ಕೊಂಡು ಹೊಸ ಶರೀರವ ಕೊಟ್ಟು
ಮರೆತ ಬುದ್ಧಿಯ ಮತ್ತೆ ಜ್ಞಾಪಿಸುತ ಬಳೆಸುವುದು
ಹೊಸ ತಿಳಿವ ನೀಡುತ್ತ ಅಲ್ಲಲ್ಲಿ ತಿರುಗಿಸುತ
ಕಷ್ಟ ಸುಖಗಳ ಸವಿಯ ತೋರುತ್ತ ಕಳುಹುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಡಿಗೆ ತಾಯಂದಿರು
Next post ಮಾಮರ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys