ಮಾಮರ

ಗುಂಡನ ಮನೆಯ ಮುಂದೊಂದು
ಇತ್ತು ಮಾವಿನ ಮರವೊಂದು
ರೆಂಬೆ ಕೊಂಬೆಗಳ ಹರಡಿಬಿಟ್ಟು
ಬಿಸಿಲಿಗೆ ಹಸಿರನು ಹೊದಿಸಿತ್ತು

ಮುದ್ದಾಗಿ ಬೆಳೆದ ಮರವನು ನೋಡಿ
ತೋರಣಕಾಗಿ ಜನ ಮುಗಿಬಿದ್ದು ಗುದ್ದಾಡಿ
ಹಿಂಸೆಯ ಕೊಡುತ್ತಿದ್ದರು ಆ ಮರಕೆ
ಮರೆತಂತೆ ಮನುಷತ್ವ ಕರುಣೆ ಮರುಕ

ವಸಂತ ಮಾಸಕ್ಕೆ ಮಾಮರದಲ್ಲಿ
ಬಿಟ್ಟವು ಹೀಚುಗಳು ಮಾಮೂಲಿ
ಹಿರಿಯರು ಕಿರಿಯರು ಬೀರುವ ಕಲ್ಲಿಗೆ
ಆ ಮರ ಮುಲುಗಿತ್ತು ಮೈ ನೋವಿಗೆ

ನೆರಳು ಆಶ್ರಯ ಹಣ್ಣನು ಕೊಟ್ಟರೂ
ಕರಗದ ಕೃತಘ್ನ ಮನುಜರ ಮನಸು
ಉಪಕಾರಕೆ ಅಪಕಾರವನು ಬಗೆದರೂ
ಹಣ್ಣನೀವ ಮಾಮರ ಅಲ್ಲವೆ ದೇವರು?

ನಮಗಿರುವಂತೆ ಜೀವ ಸಸ್ಯಗಳಿಗೂ ಇದೆ
ಎಂದರು ಸರ್ ಸಿ.ವಿ.ರಾಮನ್ ವಿಜ್ಞಾನಿಗಳು
ಹೇಳುವರು ಪ್ರತಿ ಜೀವಿ ದೇವಾಂಶ ಸಂಭೂತ
ಸಸ್ಯಗಳಿಗೂ ಹನಿಸಿ ಕರುಣಾ ರಸ ಪೂರ್ತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಋಣ
Next post ಕರ್ನಾಟಕದ ಡಾಬಾ ಸಂಸ್ಕೃತಿ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…