ಮಾಮರ

ಗುಂಡನ ಮನೆಯ ಮುಂದೊಂದು
ಇತ್ತು ಮಾವಿನ ಮರವೊಂದು
ರೆಂಬೆ ಕೊಂಬೆಗಳ ಹರಡಿಬಿಟ್ಟು
ಬಿಸಿಲಿಗೆ ಹಸಿರನು ಹೊದಿಸಿತ್ತು

ಮುದ್ದಾಗಿ ಬೆಳೆದ ಮರವನು ನೋಡಿ
ತೋರಣಕಾಗಿ ಜನ ಮುಗಿಬಿದ್ದು ಗುದ್ದಾಡಿ
ಹಿಂಸೆಯ ಕೊಡುತ್ತಿದ್ದರು ಆ ಮರಕೆ
ಮರೆತಂತೆ ಮನುಷತ್ವ ಕರುಣೆ ಮರುಕ

ವಸಂತ ಮಾಸಕ್ಕೆ ಮಾಮರದಲ್ಲಿ
ಬಿಟ್ಟವು ಹೀಚುಗಳು ಮಾಮೂಲಿ
ಹಿರಿಯರು ಕಿರಿಯರು ಬೀರುವ ಕಲ್ಲಿಗೆ
ಆ ಮರ ಮುಲುಗಿತ್ತು ಮೈ ನೋವಿಗೆ

ನೆರಳು ಆಶ್ರಯ ಹಣ್ಣನು ಕೊಟ್ಟರೂ
ಕರಗದ ಕೃತಘ್ನ ಮನುಜರ ಮನಸು
ಉಪಕಾರಕೆ ಅಪಕಾರವನು ಬಗೆದರೂ
ಹಣ್ಣನೀವ ಮಾಮರ ಅಲ್ಲವೆ ದೇವರು?

ನಮಗಿರುವಂತೆ ಜೀವ ಸಸ್ಯಗಳಿಗೂ ಇದೆ
ಎಂದರು ಸರ್ ಸಿ.ವಿ.ರಾಮನ್ ವಿಜ್ಞಾನಿಗಳು
ಹೇಳುವರು ಪ್ರತಿ ಜೀವಿ ದೇವಾಂಶ ಸಂಭೂತ
ಸಸ್ಯಗಳಿಗೂ ಹನಿಸಿ ಕರುಣಾ ರಸ ಪೂರ್ತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಋಣ
Next post ಕರ್ನಾಟಕದ ಡಾಬಾ ಸಂಸ್ಕೃತಿ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…