ಮಾಮರ

ಗುಂಡನ ಮನೆಯ ಮುಂದೊಂದು
ಇತ್ತು ಮಾವಿನ ಮರವೊಂದು
ರೆಂಬೆ ಕೊಂಬೆಗಳ ಹರಡಿಬಿಟ್ಟು
ಬಿಸಿಲಿಗೆ ಹಸಿರನು ಹೊದಿಸಿತ್ತು

ಮುದ್ದಾಗಿ ಬೆಳೆದ ಮರವನು ನೋಡಿ
ತೋರಣಕಾಗಿ ಜನ ಮುಗಿಬಿದ್ದು ಗುದ್ದಾಡಿ
ಹಿಂಸೆಯ ಕೊಡುತ್ತಿದ್ದರು ಆ ಮರಕೆ
ಮರೆತಂತೆ ಮನುಷತ್ವ ಕರುಣೆ ಮರುಕ

ವಸಂತ ಮಾಸಕ್ಕೆ ಮಾಮರದಲ್ಲಿ
ಬಿಟ್ಟವು ಹೀಚುಗಳು ಮಾಮೂಲಿ
ಹಿರಿಯರು ಕಿರಿಯರು ಬೀರುವ ಕಲ್ಲಿಗೆ
ಆ ಮರ ಮುಲುಗಿತ್ತು ಮೈ ನೋವಿಗೆ

ನೆರಳು ಆಶ್ರಯ ಹಣ್ಣನು ಕೊಟ್ಟರೂ
ಕರಗದ ಕೃತಘ್ನ ಮನುಜರ ಮನಸು
ಉಪಕಾರಕೆ ಅಪಕಾರವನು ಬಗೆದರೂ
ಹಣ್ಣನೀವ ಮಾಮರ ಅಲ್ಲವೆ ದೇವರು?

ನಮಗಿರುವಂತೆ ಜೀವ ಸಸ್ಯಗಳಿಗೂ ಇದೆ
ಎಂದರು ಸರ್ ಸಿ.ವಿ.ರಾಮನ್ ವಿಜ್ಞಾನಿಗಳು
ಹೇಳುವರು ಪ್ರತಿ ಜೀವಿ ದೇವಾಂಶ ಸಂಭೂತ
ಸಸ್ಯಗಳಿಗೂ ಹನಿಸಿ ಕರುಣಾ ರಸ ಪೂರ್ತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಋಣ
Next post ಕರ್ನಾಟಕದ ಡಾಬಾ ಸಂಸ್ಕೃತಿ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys