ಮುಸ್ಸ೦ಜೆಯ ಹೊತ್ತಿನಲಿ
ಗೂಡು ಸೇರುವ ತವಕದಲಿ
ಗುಂಪಾಗಿ ಹಾರುವ ಹಕ್ಕಿಗಳು,
ಮಧ್ಯಾಹ್ನ ನೆರಳಾಗಿದ್ದ ಮರಗಳ
ಬರಬರುತ್ತ ಕಡುಕಪ್ಪು ನೆರಳು
ಗಡುಸಾಗಿ ನಿಶ್ಚಲವಾಗಿ
ನೆಲ ಮುಗಿಲು ಒಂದಾಗಿ ಕ್ಷಿತಿಜದಲಿ
ಸಂಧಿಸುವ ರೇಖೆಯಲಿ ಒಂದಾದ
ಆಕಾಶ ಭೂಮಿಗಳ
ಸುಂದರ ಸಮ್ಮಿಲನ.
ಲೋಕದ ಜೀವರಾಶಿಗಳು
ಮೆಲ್ಲ ಮೆಲ್ಲನೆ ಕತ್ತಲೆಯ
ಮಡಿಲಿಗೆ ಶರಣಾಗತ
ಸದ್ದು ಗದ್ದಲ ಕೇಳಿಸದು,
ಮನಃಪಟಲದ ಮೇಲೆ
ಯಾವ ಚಿತ್ರವೂ ಕಾಣದು,
ಎಲ್ಲವೂ ಮಸು ಮಸುಕು
ಮೋಡಗಳಲ್ಲಿ ಮರೆಯಾಗುತ್ತ
ಹೊರಗೆ ಮತ್ತೆ ಇಣುಕುತ್ತ
ತನ್ನ ಮುಖದ ಮೇಲಿನ
ಕಲೆಗಳನ್ನು ಮುಚ್ಚಿಕೊಳ್ಳುತ್ತ
ನಾಚುತ್ತ ನಾಚುತ್ತ
ಮೆಲ್ಲಗೆ ಹೊರಬರುವ ಚ೦ದ್ರ
ಕಣ್ಣು ಮಿಟುಕಿಸುವ ತಾರೆಗಳ
ಕಂಡು ಗಲಿಬಿಲಿಗೊಂಡನು-
ಮೋಡಗಳ ಮರೆಯಲ್ಲಿ
ಮುಖ ಮುಚ್ಚಿಕೊಂಡನು.
*****
Related Post
ಸಣ್ಣ ಕತೆ
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ಮುಗ್ಧ
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…
-
ಏಕಾಂತದ ಆಲಾಪ
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…