Home / ಬಾಲ ಚಿಲುಮೆ / ಕವಿತೆ / ತಕ್ಕ ಶಾಸ್ತಿ

ತಕ್ಕ ಶಾಸ್ತಿ

ಸುಳ್ಳ ನರಿಯು
ಕಳ್ಳ ವೇಷ
ಹಾಕ ಬಯಸಿತು

ಮೋಸ ಮಾಡಿ
ಹೊಸ ಬೇಟೆ
ಹಿಡಿಯ ಹೊರಟಿತು

ಬಿಳಿಯ ಕೋಟ
ನ್ನೊಂದು ತಾನು
ಧರಿಸಿ ಬಂದಿತು

ಸ್ಟೆತಾ ಸ್ಕೋಪು
ಕೈಲಿ ಹಿಡಿದು
ನಲಿಯತೊಡಗಿತು

ನಾನು ವೈದ್ಯನಾದೆ
ಎಂದು ಹೇಳಿ
ಕೊಂಡಿತು

ಒಂಟಿ ಕುದುರೆ
ಗಂಟಲಲ್ಲಿ
ನೋವು ಎಂದಿತು

ಭಾರಿ ಗಂಟು
ಕೊಡುವೆ ಎಂದು
ಆಸೆ ತೋರಿತು

ಪುಟ್ಟ ಮೊಲವು
ಜ್ವರದ ತಾಪದಿಂದ
ಬಂದಿತು

ಪರೀಕ್ಷೆಗೆಂದು
ಒಳಗೆ ಕರೆದು
ಗುಳುಂ ಮಾಡಿತು

ದಷ್ಟಪುಷ್ಟ
ಜಿಂಕೆಯೊಂದು
ಭೇಟಿ ನೀಡಿತು

ಸ್ಟೆತಾಸ್ಕೋಪಿನಿಂದ
ಅದರ ಮೆಟ್ರೆ
ಹಿಸುಕಿತು

ಭಾರಿ ವೈದ್ಯನಂತೆ
ತಾನು ಪೋಸು
ಕೊಟ್ಟಿತು

ನರಿಯು ವೈದ್ಯನಾದ
ಸುದ್ದಿ ಹುಲಿಗೆ
ತಿಳಿಯಿತು

ಬಾಯಿ ಹುಣ್ಣು
ಹುಲಿಗೆ ಒಂದು
ನೆಪವದಾಯಿತು

ಹುಲಿಯ ಕಂಡು
ನರಿಯ ಎದೆಯು
ನಡುಗ ಹತ್ತಿತು

ನಡುಗುತ್ತಿದ್ದ
ನರಿಗೆ ಹುಲಿಯು
ಅಭಯ ನೀಡಿತು

ಬಾಯಿ ಒಳಗೆ
ತಲೆಯನಿಟ್ಟು
ನೋಡು ಎಂದಿತು

ಕಳ್ಳ ನರಿಯ
ಸಾವು ಹುಲಿಯ
ಬಾಯೊಳಿದ್ದಿತು

ರುಂಡವಿರದ
ನರಿಯ ದೇಹ
ಹೊರಗೆ ಬಂದಿತು

ಮೋಸಗಾರ
ನರಿಗೆ ತಕ್ಕ
ಪಾಠ ಕಲಿಸಿತು

ಜಗದಲಿರುವ
ನರಿಗಳೆಲ್ಲ
ವೇಷ ತೊರೆಯಲಿ

ಕಪಟ ವೇಷ
ಸುಳ್ಳು ಮೋಸ
ಅಳಿದು ಹೋಗಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...