ತಕ್ಕ ಶಾಸ್ತಿ

ಸುಳ್ಳ ನರಿಯು
ಕಳ್ಳ ವೇಷ
ಹಾಕ ಬಯಸಿತು

ಮೋಸ ಮಾಡಿ
ಹೊಸ ಬೇಟೆ
ಹಿಡಿಯ ಹೊರಟಿತು

ಬಿಳಿಯ ಕೋಟ
ನ್ನೊಂದು ತಾನು
ಧರಿಸಿ ಬಂದಿತು

ಸ್ಟೆತಾ ಸ್ಕೋಪು
ಕೈಲಿ ಹಿಡಿದು
ನಲಿಯತೊಡಗಿತು

ನಾನು ವೈದ್ಯನಾದೆ
ಎಂದು ಹೇಳಿ
ಕೊಂಡಿತು

ಒಂಟಿ ಕುದುರೆ
ಗಂಟಲಲ್ಲಿ
ನೋವು ಎಂದಿತು

ಭಾರಿ ಗಂಟು
ಕೊಡುವೆ ಎಂದು
ಆಸೆ ತೋರಿತು

ಪುಟ್ಟ ಮೊಲವು
ಜ್ವರದ ತಾಪದಿಂದ
ಬಂದಿತು

ಪರೀಕ್ಷೆಗೆಂದು
ಒಳಗೆ ಕರೆದು
ಗುಳುಂ ಮಾಡಿತು

ದಷ್ಟಪುಷ್ಟ
ಜಿಂಕೆಯೊಂದು
ಭೇಟಿ ನೀಡಿತು

ಸ್ಟೆತಾಸ್ಕೋಪಿನಿಂದ
ಅದರ ಮೆಟ್ರೆ
ಹಿಸುಕಿತು

ಭಾರಿ ವೈದ್ಯನಂತೆ
ತಾನು ಪೋಸು
ಕೊಟ್ಟಿತು

ನರಿಯು ವೈದ್ಯನಾದ
ಸುದ್ದಿ ಹುಲಿಗೆ
ತಿಳಿಯಿತು

ಬಾಯಿ ಹುಣ್ಣು
ಹುಲಿಗೆ ಒಂದು
ನೆಪವದಾಯಿತು

ಹುಲಿಯ ಕಂಡು
ನರಿಯ ಎದೆಯು
ನಡುಗ ಹತ್ತಿತು

ನಡುಗುತ್ತಿದ್ದ
ನರಿಗೆ ಹುಲಿಯು
ಅಭಯ ನೀಡಿತು

ಬಾಯಿ ಒಳಗೆ
ತಲೆಯನಿಟ್ಟು
ನೋಡು ಎಂದಿತು

ಕಳ್ಳ ನರಿಯ
ಸಾವು ಹುಲಿಯ
ಬಾಯೊಳಿದ್ದಿತು

ರುಂಡವಿರದ
ನರಿಯ ದೇಹ
ಹೊರಗೆ ಬಂದಿತು

ಮೋಸಗಾರ
ನರಿಗೆ ತಕ್ಕ
ಪಾಠ ಕಲಿಸಿತು

ಜಗದಲಿರುವ
ನರಿಗಳೆಲ್ಲ
ವೇಷ ತೊರೆಯಲಿ

ಕಪಟ ವೇಷ
ಸುಳ್ಳು ಮೋಸ
ಅಳಿದು ಹೋಗಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚ೦ದ್ರ ಗಲಿಬಿಲಿಗೊಂಡಾಗ
Next post ಸೂಟಿಯ ಕಾಲ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…