ನನ್ನ ಮನೆಯ ಒಡತಿ ನೀನು,
ನನ್ನ ಮಕ್ಕಳ ತಾಯಿ ನೀನು,
ಮೌನವಾಗಿ ತಲೆ ತಗ್ಗಿಸಿ
ಎಲ್ಲರ ಸೇವೆ ಮಾಡುವ ನಿನಗೆ
ಸ್ವರ್ಗ ಲೋಕದಲ್ಲಿ ಸ್ಥಾನ ಭದ್ರ
ಮರಿಯಮ್, ಖತೀಜಾ ಹಾಗೂ
ಬೀವಿ ಫಾತೀಮಾರಂತೆ
ನಾವು ಮಾಡಿದ ಕಟ್ಟಳೆಗಳನ್ನು
ನೀನೂ ತಲೆ ಮೇಲಿಟ್ಟು ಪಾಲಿಸು,
ಇಂತಹ ಕಾನೂನು ಮಾಡಿದ
ನಮ್ಮ ಉಪಕಾರಕ್ಕೆ ಪ್ರತಿಯಾಗಿ
ಎರಡು ರಕಾತ ಶುಕ್ರಿಯಾ
ನಮಾಜ್ ಮಾಡಿ ಹರಸು,
ಒಂಟಿಯಾಗಿ ಹೊರಗೆ
ಹೋಗುವೆಯಾ ಜೋಕೆ!
ಜನ ನಿನ್ನ ರಸ್ತೆಯಲಿ
ದುರುಗುಟ್ಟಿ ನೋಡಿಯಾರು,
ನಿನ್ನ ನಾಜೂಕು ದೇಹಕ್ಕೆ
ಜನರ ದೃಷ್ಟಿಯಾದೀತು!
ಮನೆತನದ ಮರ್ಯಾದೆ
ನಡುಬೀದಿಯಲಿ ಜನರೆದುರು
ನೀಲಾಮು ಆದೀತು
ನಿನ್ನ ಮಾನ ರಕ್ಷಣೆಯ ಹೊಣೆ
ತಂದೆ, ಪತಿ, ಸುತರು-
ಹೊತ್ತಿರುವಾಗ ನಿನಗೇಕೆ ಪ್ರತ್ಯೇಕ ಸ್ವಾತಂತ್ರ್ಯ
ಅಸ್ತಿತ್ವಗಳ ಜ೦ಜಾಟ?
*****
Related Post
ಸಣ್ಣ ಕತೆ
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…