Home / ಕವನ / ಕವಿತೆ / ಮಾನ್ಯರಿಗೆ ಶರಣು

ಮಾನ್ಯರಿಗೆ ಶರಣು

ಮಾನ್ಯರಿಗೆ ಶರಣು ಜನ
ಸಾಮಾನ್ಯರಿಗೆ ಶರಣು
ಅನ್ಯರಿಗೆ ಶರಣು ಅನನ್ಯರಿಗೆ ಶರಣು
ಗಣ್ಯರಿಗೆ ಶರಣು ನಗಣ್ಯರಿಗೆ ಬಹಳ ಶರಣು

ಹೊನ್ನೆ ಮರದಡಿ ಕೂತವರಿಗೆ
ಚೆನ್ನೆಯಾಡುವ ಕನ್ನೆಯರಿಗೆ
ಕನ್ನಡದ ಜಾಣೆಯರಿಗೆ
ಕನ್ನಡದ ಜಾಣರಿಗೆ ಬಹಳ ಶರಣು

ಮೊನ್ನೆ ಹೋದವರಿಗೆ
ನಿನ್ನೆ ಬಂದವರಿಗೆ
ಮುನ್ನ ಇದ್ದವರಿಗೆ
ಇನ್ನು ಬರುವವರಿಗೆ ಬಹಳ ಶರಣು

ಅಂಕೆಗಳಲಿ ಸೊನ್ನೆಗೆ
ಸಂಕದಲಿ ದಾರಿ ಬಿಡುವವರಿಗೆ
ತೆಂಕಣ ಗಾಳಿಗೆ
ಮಂಕು ಪರಿಹರಿಸುವ ವಿದ್ಯೆಗೆ ಬಹಳ ಶರಣು

ನಿಂತ ಗಿರಿಗಳಿಗೆ
ಹರಿವ ತೊರೆಗಳಿಗೆ
ತುಂಬಿದ ಕೆರೆಗಳಿಗೆ
ಬೀಳುವ ಮಳೆಹನಿಗಳಿಗೆ ಬಹಳ ಶರಣು

ಕತೆಗೆ ಕತೆ ಹೇಳುವರಿಗೆ
ಕವಿತೆಗೆ ಕವಿತೆ ಕಟ್ಟುವರಿಗೆ
ಸುಖದಂತೆ ವ್ಯಥೆಯ ಹಂಚಿಕೊಳ್ಳುವವರಿಗೆ
ಪೃಥ್ವಿಯೇ ಸ್ವರ್‍ಗವೆಂದು ತಿಳಿದವರಿಗೆ ಬಹಳ ಶರಣು

ಕೋಲಾಟದವರಿಗೆ ಬಯಲಾಟದವರಿಗೆ
ಡೊಳ್ಳುಕುಣಿತದವರಿಗೆ
ಹಲಗೆ ಬಡಿವವರಿಗೆ
ಉಳುವ ರೈತರಿಗೆ ಬಹಳ ಶರಣು

ವೈದ್ಯರಿಗೆ ವಕೀಲರಿಗೆ
ಮದ್ಯ ಕುಡಿಯದವರಿಗೆ
ಗದ್ಯ ಬರೆವವರಿಗೆ ಪದ್ಯ ಓದುವರಿಗೆ
ಸದ್ಯ ದುಡಿವವರಿಗೆ ಬಹಳ ಶರಣು

ದೇಶವನಾಳುವ ಪ್ರಜೆಗಳಿಗೆ
ವೇಷ ಹಾಕುವ ನಟರಿಗೆ
ಕಾಶಾಯವಸ್ತ್ರಧಾರಿಗಳಿಗೆ
ಬೇಸಾಯಗಾರರೆಲ್ಲರಿಗೆ ಬಹಳ ಶರಣು

ದೀನರಿಗೆ ದಲಿತರಿಗೆ
ದಾನ ನೀಡುವ ಉದಾರಿಗಳಿಗೆ
ಜ್ಞಾನಿಗಳಿಗೆ ವಿಜ್ಞಾನಿಗಳಿಗೆ
ಧ್ಯಾನಿಗಳಿಗೆ ಮಹಾಮೌನಿಗಳಿಗೆ ಬಹಳ ಶರಣು

ನಕ್ಷತ್ರಗಳಿಗೆ ಶರಣು
ಸಕಲ ಸಾಕ್ಷಿಗಳಿಗೆ ಶರಣು
ಅಕ್ಷಯ ಕನಸುಗಳಿಗೆ ಶರಣು
ಕನಸ ರಕ್ಷಿಸುವ ಕವಿಗಳಿಗೆ ಬಹಳ ಶರಣು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...