Home / ಕವನ / ಕವಿತೆ / ಮಾನ್ಯರಿಗೆ ಶರಣು

ಮಾನ್ಯರಿಗೆ ಶರಣು

ಮಾನ್ಯರಿಗೆ ಶರಣು ಜನ
ಸಾಮಾನ್ಯರಿಗೆ ಶರಣು
ಅನ್ಯರಿಗೆ ಶರಣು ಅನನ್ಯರಿಗೆ ಶರಣು
ಗಣ್ಯರಿಗೆ ಶರಣು ನಗಣ್ಯರಿಗೆ ಬಹಳ ಶರಣು

ಹೊನ್ನೆ ಮರದಡಿ ಕೂತವರಿಗೆ
ಚೆನ್ನೆಯಾಡುವ ಕನ್ನೆಯರಿಗೆ
ಕನ್ನಡದ ಜಾಣೆಯರಿಗೆ
ಕನ್ನಡದ ಜಾಣರಿಗೆ ಬಹಳ ಶರಣು

ಮೊನ್ನೆ ಹೋದವರಿಗೆ
ನಿನ್ನೆ ಬಂದವರಿಗೆ
ಮುನ್ನ ಇದ್ದವರಿಗೆ
ಇನ್ನು ಬರುವವರಿಗೆ ಬಹಳ ಶರಣು

ಅಂಕೆಗಳಲಿ ಸೊನ್ನೆಗೆ
ಸಂಕದಲಿ ದಾರಿ ಬಿಡುವವರಿಗೆ
ತೆಂಕಣ ಗಾಳಿಗೆ
ಮಂಕು ಪರಿಹರಿಸುವ ವಿದ್ಯೆಗೆ ಬಹಳ ಶರಣು

ನಿಂತ ಗಿರಿಗಳಿಗೆ
ಹರಿವ ತೊರೆಗಳಿಗೆ
ತುಂಬಿದ ಕೆರೆಗಳಿಗೆ
ಬೀಳುವ ಮಳೆಹನಿಗಳಿಗೆ ಬಹಳ ಶರಣು

ಕತೆಗೆ ಕತೆ ಹೇಳುವರಿಗೆ
ಕವಿತೆಗೆ ಕವಿತೆ ಕಟ್ಟುವರಿಗೆ
ಸುಖದಂತೆ ವ್ಯಥೆಯ ಹಂಚಿಕೊಳ್ಳುವವರಿಗೆ
ಪೃಥ್ವಿಯೇ ಸ್ವರ್‍ಗವೆಂದು ತಿಳಿದವರಿಗೆ ಬಹಳ ಶರಣು

ಕೋಲಾಟದವರಿಗೆ ಬಯಲಾಟದವರಿಗೆ
ಡೊಳ್ಳುಕುಣಿತದವರಿಗೆ
ಹಲಗೆ ಬಡಿವವರಿಗೆ
ಉಳುವ ರೈತರಿಗೆ ಬಹಳ ಶರಣು

ವೈದ್ಯರಿಗೆ ವಕೀಲರಿಗೆ
ಮದ್ಯ ಕುಡಿಯದವರಿಗೆ
ಗದ್ಯ ಬರೆವವರಿಗೆ ಪದ್ಯ ಓದುವರಿಗೆ
ಸದ್ಯ ದುಡಿವವರಿಗೆ ಬಹಳ ಶರಣು

ದೇಶವನಾಳುವ ಪ್ರಜೆಗಳಿಗೆ
ವೇಷ ಹಾಕುವ ನಟರಿಗೆ
ಕಾಶಾಯವಸ್ತ್ರಧಾರಿಗಳಿಗೆ
ಬೇಸಾಯಗಾರರೆಲ್ಲರಿಗೆ ಬಹಳ ಶರಣು

ದೀನರಿಗೆ ದಲಿತರಿಗೆ
ದಾನ ನೀಡುವ ಉದಾರಿಗಳಿಗೆ
ಜ್ಞಾನಿಗಳಿಗೆ ವಿಜ್ಞಾನಿಗಳಿಗೆ
ಧ್ಯಾನಿಗಳಿಗೆ ಮಹಾಮೌನಿಗಳಿಗೆ ಬಹಳ ಶರಣು

ನಕ್ಷತ್ರಗಳಿಗೆ ಶರಣು
ಸಕಲ ಸಾಕ್ಷಿಗಳಿಗೆ ಶರಣು
ಅಕ್ಷಯ ಕನಸುಗಳಿಗೆ ಶರಣು
ಕನಸ ರಕ್ಷಿಸುವ ಕವಿಗಳಿಗೆ ಬಹಳ ಶರಣು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...