Home / ಕವನ / ಕವಿತೆ / ಮಾನ್ಯರಿಗೆ ಶರಣು

ಮಾನ್ಯರಿಗೆ ಶರಣು

ಮಾನ್ಯರಿಗೆ ಶರಣು ಜನ
ಸಾಮಾನ್ಯರಿಗೆ ಶರಣು
ಅನ್ಯರಿಗೆ ಶರಣು ಅನನ್ಯರಿಗೆ ಶರಣು
ಗಣ್ಯರಿಗೆ ಶರಣು ನಗಣ್ಯರಿಗೆ ಬಹಳ ಶರಣು

ಹೊನ್ನೆ ಮರದಡಿ ಕೂತವರಿಗೆ
ಚೆನ್ನೆಯಾಡುವ ಕನ್ನೆಯರಿಗೆ
ಕನ್ನಡದ ಜಾಣೆಯರಿಗೆ
ಕನ್ನಡದ ಜಾಣರಿಗೆ ಬಹಳ ಶರಣು

ಮೊನ್ನೆ ಹೋದವರಿಗೆ
ನಿನ್ನೆ ಬಂದವರಿಗೆ
ಮುನ್ನ ಇದ್ದವರಿಗೆ
ಇನ್ನು ಬರುವವರಿಗೆ ಬಹಳ ಶರಣು

ಅಂಕೆಗಳಲಿ ಸೊನ್ನೆಗೆ
ಸಂಕದಲಿ ದಾರಿ ಬಿಡುವವರಿಗೆ
ತೆಂಕಣ ಗಾಳಿಗೆ
ಮಂಕು ಪರಿಹರಿಸುವ ವಿದ್ಯೆಗೆ ಬಹಳ ಶರಣು

ನಿಂತ ಗಿರಿಗಳಿಗೆ
ಹರಿವ ತೊರೆಗಳಿಗೆ
ತುಂಬಿದ ಕೆರೆಗಳಿಗೆ
ಬೀಳುವ ಮಳೆಹನಿಗಳಿಗೆ ಬಹಳ ಶರಣು

ಕತೆಗೆ ಕತೆ ಹೇಳುವರಿಗೆ
ಕವಿತೆಗೆ ಕವಿತೆ ಕಟ್ಟುವರಿಗೆ
ಸುಖದಂತೆ ವ್ಯಥೆಯ ಹಂಚಿಕೊಳ್ಳುವವರಿಗೆ
ಪೃಥ್ವಿಯೇ ಸ್ವರ್‍ಗವೆಂದು ತಿಳಿದವರಿಗೆ ಬಹಳ ಶರಣು

ಕೋಲಾಟದವರಿಗೆ ಬಯಲಾಟದವರಿಗೆ
ಡೊಳ್ಳುಕುಣಿತದವರಿಗೆ
ಹಲಗೆ ಬಡಿವವರಿಗೆ
ಉಳುವ ರೈತರಿಗೆ ಬಹಳ ಶರಣು

ವೈದ್ಯರಿಗೆ ವಕೀಲರಿಗೆ
ಮದ್ಯ ಕುಡಿಯದವರಿಗೆ
ಗದ್ಯ ಬರೆವವರಿಗೆ ಪದ್ಯ ಓದುವರಿಗೆ
ಸದ್ಯ ದುಡಿವವರಿಗೆ ಬಹಳ ಶರಣು

ದೇಶವನಾಳುವ ಪ್ರಜೆಗಳಿಗೆ
ವೇಷ ಹಾಕುವ ನಟರಿಗೆ
ಕಾಶಾಯವಸ್ತ್ರಧಾರಿಗಳಿಗೆ
ಬೇಸಾಯಗಾರರೆಲ್ಲರಿಗೆ ಬಹಳ ಶರಣು

ದೀನರಿಗೆ ದಲಿತರಿಗೆ
ದಾನ ನೀಡುವ ಉದಾರಿಗಳಿಗೆ
ಜ್ಞಾನಿಗಳಿಗೆ ವಿಜ್ಞಾನಿಗಳಿಗೆ
ಧ್ಯಾನಿಗಳಿಗೆ ಮಹಾಮೌನಿಗಳಿಗೆ ಬಹಳ ಶರಣು

ನಕ್ಷತ್ರಗಳಿಗೆ ಶರಣು
ಸಕಲ ಸಾಕ್ಷಿಗಳಿಗೆ ಶರಣು
ಅಕ್ಷಯ ಕನಸುಗಳಿಗೆ ಶರಣು
ಕನಸ ರಕ್ಷಿಸುವ ಕವಿಗಳಿಗೆ ಬಹಳ ಶರಣು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...