Home / ಲೇಖನ / ಇತರೆ / ಪಾಲ್ಮರ್ ಕತೆ

ಪಾಲ್ಮರ್ ಕತೆ

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಪಾಲ್ಮರ್ ಎಂಬ ಶ್ರೀಮಂತ ದಂತ ವೈದ್ಯನಿದ್ದಾನೆ. ತನ್ನ ವೃತ್ತಿಗಿಂತಾ ಪ್ರವೃತ್ತಿಯ ಬಗ್ಗೆ ವಿಪರೀತ ಹುಚ್ಚು. ವನ್ಯ ಜೀವಿಗಳ ಬೇಟೆಯಾಡುವುದು! ಕೆಲವರನ್ನು ಸುಟ್ಟರೂ ಹುಟ್ಟು ಗುಣ ಹೋಗಲಾರದು… ಎಂಬಂತೇ ಪಾಲ್ಮರ್ ಈ ಹಿಂದೆ ಅಮೆರಿಕಾದಲ್ಲಿ ಜಿಂಕೆಯನ್ನು ಬೇಟೆಯಾಡಿ ಸಿಕ್ಕಿ ಬಿದ್ದಿರುವರು. ಆ ಪ್ರಕರಣವಿನ್ನು ಹಸಿಹಸಿಯಾಗಿರುವಾಗಲೇ ಈತ ವಿಶ್ವಪ್ರಸಿದ್ಧ ಸೆಸಿಲ್ ಹೆಸರಿನ ಆಫ್ರಿಕನ್ ಸಿಂಹವನ್ನು ಈಗ ಆಗಸ್ಟ್ ೨೦೧೫ರಲ್ಲಿ ಕೊಂದಿದ್ದಾನೆ. ಇದು ವನ್ಯ ಜೀವಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿರುವನು!

ಜಿಂಬಾಬ್ವೆಯ ಹವಾಂಗೆ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಈ ಸಿಂಹದ ಫೋಟೋ ತೆಗೆಯುವುದೂ ಕೂಡಾ ಕಷ್ಟದ ಕೆಲಸ. ಬಿಲ್ಲು ವಿದ್ಯೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಪಾಲ್ಮರ್ ದಂತ ವೈದ್ಯ ಕೆಲಸಕ್ಕಿಂತ ಬೇಟೆ ಕೆಲಸ ಪ್ರವೃತ್ತಿಯನ್ನಾಗಿಸಿಕೊಂಡಿರುವರು!

ವನ್ಯ ಜೀವಿಗಳನ್ನು ಬೇಟೆಯಾಡುವುದು ಅಪರಾಧ. ಗುರುತರವಾದ ಶಿಕ್ಷೆ ದಂಡನೆ ಇದೆಯೆಂದು ಅರಿವಿದ್ದರೂ ಈತ ಅಮೆರಿಕಾದಿಂದ ಬೇಟೆಯಾಡಲು ಜಿಂಬಾಬ್ಬೆಗೆ ಬಂದಿದ್ದ! ಅಷ್ಟೊಂದು ಗೀಳು!

ಬ೦ದವನೇ ಈತ ಬಾಣ ಬಿಟ್ಟಿದ್ದಾನೆ! ಅದು ಗಾಯಗೊಂಡು ಕೆರಳಿ ತಪ್ಪಿಸಿಕೊಂಡಿದೆ. ಅದಕ್ಕಾಗಿ ೪೦ ಗಂಟೆಗಳ ಕಾಲ ಹುಡುಕಾಟ ನಡೆಸಿ ತದನಂತರ ಬಂದೂಕಿನಿಂದ ಗುಂಡು ಹಾರಿಸಿಕೊಂದಿದ್ದಾನೆ! ಅಲ್ಲದೆ ಅದರೊಂದಿಗೆ ಸೆಲ್ಫಿ ಕೂಡಾ ತೆಗೆದುಕೊಂಡಿದ್ದಾನೆ!

ಈತ ಎಂಥಾ ಹುಚ್ಚನೆಂದರೆ…. ಈ ರಾಷ್ಟ್ರೀಯ ಅಭಯಾರಣ್ಯದಲ್ಲಿ ಬೇಟೆಯಾಡುವುದು ಕೂಡಾ ಕಾನೂನುಬದ್ಧ ಇರಬಹುದೆಂದು ನಾನು ಭಾವಿಸಿದ್ದೆನೆಂದು ಆತ ತಪ್ಪೋಪ್ಪಿಕೊಂಡಿದ್ದಾನೆ.

ಈ ಅಭಯಾರಣ್ಯಕ್ಕೆ ನಿತ್ಯ ನೂರಾರು ಜನರು ಬಂದು ಹೋಗುತ್ತಿದ್ದ ಪ್ರವಾಸಿಗರ ಬಲು ನೆಚ್ಚಿನ ಮೆಚ್ಚಿನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಈ ಸಿಂಹವನ್ನು ಕೊಂದಿರುವುದು ಭಾರೀ ಭಾರೀ ನೋವನ್ನುಂಟು ಮಾಡಿದೆಯೆಂದು ಜಿಂಬಾಬ್ವೆಯ ಸಫಾರಿ ನಿಯೋಜಕರ ಕೂಟದ ಅಧ್ಯಕ್ಷ ಇಮ್ಯನುವೆಲ್ ಪುಂಡ್ರಿಯಾ ಅವರು ಸಾರಿದ್ದಾರೆ.

ಈ ಪಾಲ್ಕರ್ ಸಿಂಹದ ಬೇಟೆಗಾಗಿ ೫೦ ಲಕ್ಷ ರೂಪಾಯಿ ನೀಡಿದ್ದ ಎಂದು ಈ ಇಮ್ಯನುವೆಲ್ ಪುಂಡ್ರಿಯಾ ಹೇಳಿರುವರು.

ಅಬ್ಬಾ! ಇಂಥಾ ಹುಚ್ಚರ ಸಹವಾಸದಿಂದ ಯಾರಿಗೆ ನೆಮ್ಮದಿ ಗೌರವ ಹೆಸರು ಬರಲು ಸಾಧ್ಯ ಹೇಳಿ? ಗೊತ್ತಿಲ್ಲದ ದಡ್ಡರಿಗೆ ಬುದ್ಧಿ ಹೇಳಬಹುದು. ಈತ ಗೊತ್ತಿರುವ ವಿದ್ಯಾವಂತ ವೈದ್ಯ ಇವನಿಗೆ ಹೇಗೆ ಬುದ್ದಿ ಹೇಳುವುದು ??
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...