ಅಮ್ಮನ ಊಟ

ಊಟಕ್ಕೆ ಕುಳಿತ
ತಿಮ್ಮನ ಮೊಗವು
ಬಾಡಿ ಹೋಗಿದೆ

ಸೊಪ್ಪಿನ ಸಾರಿನ
ಜೊತೆಗೆ ರಾಗಿ
ಮುದ್ದೆ ನಕ್ಕಿದೆ

ಕಪ್ಪನೆ ಬಣ್ಣದ
ರಾಗಿಮುದ್ದೆ
ನಾನು ತಿನ್ನಲ್ಲ

ಮುತ್ತಿನಂಥ
ಅನ್ನವನ್ನು
ಅಮ್ಮ ಬಡಿಸಲ್ಲ

ರಾಗಿ ತಿಂದು
ನಿರೋಗಿಯಾದ
ಕತೆಯ ಹೇಳ್ತಾಳೆ

ತುಂಬಾ ಶಕ್ತಿಗಾಗಿ
ಮುದ್ದೆ
ತಿನ್ಬೇಕಂತಾಳೆ

ಮುದ್ದೆ ಜೊತೆಗೆ
ಬೇಳೆ ಕಾಳು
ಬೇಯಿಸಿ ಇಡ್ತಾಳೆ

ಹಸಿರು ಸೊಪ್ಪು
ತರಕಾರಿಯೆಲ್ಲ
ನಮ್ಮುಸಿರು ಅಂತಾಳೆ

ನಾಲಗೆ ಬಯಸಿದ
ಪದಾರ್ಥನೆಲ್ಲಾ
ತಿನ್ಬಾರ್ದಂತಾಳೆ

ಅಮ್ಮ ಅಂತೂ
ಒಂದೊಂದ್ ಬಾರಿ
ಡಾಕ್ಷೇ ಆಗ್ತಾಳೆ

ಏನೇ ಆದ್ರೂ
ಅಮ್ಮ ನಮ್ಮ
ಒಳಿತೇ ಬಯಸ್ತಾಳೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸ್ತಿತ್ವ
Next post ಯುಕ್ತಿ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…