ಯುಕ್ತಿ

ಶಾಲೆಗೆ ಅಂದು ರಜಾ
ರಂಗ ನಿಂಗರಿಗೆ ಮಜಾ
ತಂದೆಗೆ ಸಹಾಯ ಮಾಡಲು
ಬುತ್ತಿ ಹೊತ್ತು ನಡೆದರು

ದಾರಿಯ ಬದಿಗೆ ಹೊಲ
ಹಸಿರು ಮುರಿಯುವ ನೆಲ
ಭರೋ ಎನ್ನುವ ಗಾಳಿಗೆ
ಹೆದರಿದರು ಆ ಘಳಿಗೆಗೆ

ದೂರದಿ ತಂದೆಯ ನೋಡಿದರು
ಕೂಡಲು ಬರ್ಕಿಸೆ ಓಡಿದರು
ಗೂಳಿಯು ಅವರನು ನೋಡಿತ್ತು
ಅಟ್ಟಿಸಿಕೊಂಡೂ ಹೋಗಿತ್ತು

ಆ ದೃಶ್ಯವ ನೋಡಿದ ತಂದೆ
ಅವರನು ಕೊಂದು ಬಿಡುವುದೆಂದೆ
ಕೋಲನು ಹಿಡಿದು ಅರಚುತ್ತ
ಓಡುತ ಬಂದನು ಅವರತ್ತ

ಕೂಗಿ ಕೂಗಿ ಹೇಳುತಲಿದ್ದ
ಬೋರಲು ಮಲಗಿರಿ ಓಡದೇ
ತಂದೆಯ ಮಾತನು ಕೇಳಿದರು
ಇಬ್ಬರು ಹಾಗೆಯೇ ಮಾಡಿದರು

ತಿವಿಯಲು ನೋಡಿದ ಗೂಳಿಗೆ
ಮಕ್ಕಳು ಸಿಗಲಿಲ್ಲ ಕೋಡಿಗೆ
ಅವರನು ದಾಟಿಯೇ ಓಡಿತ್ತು
ಬೆಳೆಗಳ ಮಧ್ಯೆ ಮರೆಯಾಯ್ತು

ತಂದೆ ಬಂದು ಹಿಡಿದೆತ್ತುತಲೆ
ಮಕ್ಕಳಿಗೆ ತಿಳಿ ಹೇಳಿದನು
ಧೈರ್ಯ ಯುಕ್ತಿ ಇದ್ದರೆ ಸಾಕು
ಬಾಳಿಗೆ ಬೇರಿನ್ನೇನು ಬೇಕು?

ತಂದೆಯ ಬಗ್ಗೆ ಹಿಗ್ಗಿದರು
ಬುತ್ತಿಯನ್ನು ಬಿಚ್ಚಿ ತಿಂದರು
ಕೆಲಸದಿ ಸಹಾಯ ಮಾಡಿದರು
ಮನೆ ಕಡೆ ಹೆಜ್ಜೆ ಹಾಕಿದರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮನ ಊಟ
Next post ಹೆಣ್ಣು: ಸೌಂದರ್ಯೋದ್ಯಮದ ಸರಕೆ?

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…