ಯುಕ್ತಿ

ಶಾಲೆಗೆ ಅಂದು ರಜಾ
ರಂಗ ನಿಂಗರಿಗೆ ಮಜಾ
ತಂದೆಗೆ ಸಹಾಯ ಮಾಡಲು
ಬುತ್ತಿ ಹೊತ್ತು ನಡೆದರು

ದಾರಿಯ ಬದಿಗೆ ಹೊಲ
ಹಸಿರು ಮುರಿಯುವ ನೆಲ
ಭರೋ ಎನ್ನುವ ಗಾಳಿಗೆ
ಹೆದರಿದರು ಆ ಘಳಿಗೆಗೆ

ದೂರದಿ ತಂದೆಯ ನೋಡಿದರು
ಕೂಡಲು ಬರ್ಕಿಸೆ ಓಡಿದರು
ಗೂಳಿಯು ಅವರನು ನೋಡಿತ್ತು
ಅಟ್ಟಿಸಿಕೊಂಡೂ ಹೋಗಿತ್ತು

ಆ ದೃಶ್ಯವ ನೋಡಿದ ತಂದೆ
ಅವರನು ಕೊಂದು ಬಿಡುವುದೆಂದೆ
ಕೋಲನು ಹಿಡಿದು ಅರಚುತ್ತ
ಓಡುತ ಬಂದನು ಅವರತ್ತ

ಕೂಗಿ ಕೂಗಿ ಹೇಳುತಲಿದ್ದ
ಬೋರಲು ಮಲಗಿರಿ ಓಡದೇ
ತಂದೆಯ ಮಾತನು ಕೇಳಿದರು
ಇಬ್ಬರು ಹಾಗೆಯೇ ಮಾಡಿದರು

ತಿವಿಯಲು ನೋಡಿದ ಗೂಳಿಗೆ
ಮಕ್ಕಳು ಸಿಗಲಿಲ್ಲ ಕೋಡಿಗೆ
ಅವರನು ದಾಟಿಯೇ ಓಡಿತ್ತು
ಬೆಳೆಗಳ ಮಧ್ಯೆ ಮರೆಯಾಯ್ತು

ತಂದೆ ಬಂದು ಹಿಡಿದೆತ್ತುತಲೆ
ಮಕ್ಕಳಿಗೆ ತಿಳಿ ಹೇಳಿದನು
ಧೈರ್ಯ ಯುಕ್ತಿ ಇದ್ದರೆ ಸಾಕು
ಬಾಳಿಗೆ ಬೇರಿನ್ನೇನು ಬೇಕು?

ತಂದೆಯ ಬಗ್ಗೆ ಹಿಗ್ಗಿದರು
ಬುತ್ತಿಯನ್ನು ಬಿಚ್ಚಿ ತಿಂದರು
ಕೆಲಸದಿ ಸಹಾಯ ಮಾಡಿದರು
ಮನೆ ಕಡೆ ಹೆಜ್ಜೆ ಹಾಕಿದರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮನ ಊಟ
Next post ಹೆಣ್ಣು: ಸೌಂದರ್ಯೋದ್ಯಮದ ಸರಕೆ?

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…