ಯುಕ್ತಿ

ಶಾಲೆಗೆ ಅಂದು ರಜಾ
ರಂಗ ನಿಂಗರಿಗೆ ಮಜಾ
ತಂದೆಗೆ ಸಹಾಯ ಮಾಡಲು
ಬುತ್ತಿ ಹೊತ್ತು ನಡೆದರು

ದಾರಿಯ ಬದಿಗೆ ಹೊಲ
ಹಸಿರು ಮುರಿಯುವ ನೆಲ
ಭರೋ ಎನ್ನುವ ಗಾಳಿಗೆ
ಹೆದರಿದರು ಆ ಘಳಿಗೆಗೆ

ದೂರದಿ ತಂದೆಯ ನೋಡಿದರು
ಕೂಡಲು ಬರ್ಕಿಸೆ ಓಡಿದರು
ಗೂಳಿಯು ಅವರನು ನೋಡಿತ್ತು
ಅಟ್ಟಿಸಿಕೊಂಡೂ ಹೋಗಿತ್ತು

ಆ ದೃಶ್ಯವ ನೋಡಿದ ತಂದೆ
ಅವರನು ಕೊಂದು ಬಿಡುವುದೆಂದೆ
ಕೋಲನು ಹಿಡಿದು ಅರಚುತ್ತ
ಓಡುತ ಬಂದನು ಅವರತ್ತ

ಕೂಗಿ ಕೂಗಿ ಹೇಳುತಲಿದ್ದ
ಬೋರಲು ಮಲಗಿರಿ ಓಡದೇ
ತಂದೆಯ ಮಾತನು ಕೇಳಿದರು
ಇಬ್ಬರು ಹಾಗೆಯೇ ಮಾಡಿದರು

ತಿವಿಯಲು ನೋಡಿದ ಗೂಳಿಗೆ
ಮಕ್ಕಳು ಸಿಗಲಿಲ್ಲ ಕೋಡಿಗೆ
ಅವರನು ದಾಟಿಯೇ ಓಡಿತ್ತು
ಬೆಳೆಗಳ ಮಧ್ಯೆ ಮರೆಯಾಯ್ತು

ತಂದೆ ಬಂದು ಹಿಡಿದೆತ್ತುತಲೆ
ಮಕ್ಕಳಿಗೆ ತಿಳಿ ಹೇಳಿದನು
ಧೈರ್ಯ ಯುಕ್ತಿ ಇದ್ದರೆ ಸಾಕು
ಬಾಳಿಗೆ ಬೇರಿನ್ನೇನು ಬೇಕು?

ತಂದೆಯ ಬಗ್ಗೆ ಹಿಗ್ಗಿದರು
ಬುತ್ತಿಯನ್ನು ಬಿಚ್ಚಿ ತಿಂದರು
ಕೆಲಸದಿ ಸಹಾಯ ಮಾಡಿದರು
ಮನೆ ಕಡೆ ಹೆಜ್ಜೆ ಹಾಕಿದರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮನ ಊಟ
Next post ಹೆಣ್ಣು: ಸೌಂದರ್ಯೋದ್ಯಮದ ಸರಕೆ?

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys