ವೈರಾಗ್ಯ ಜ್ಯೋತಿ

ಲಕ್ಷೋಪಲಕ್ಷ ಕಣ್ಣುಗಳು
ಧೀಮಂತ ಮೂರ್ತಿಯ ದರ್ಶನಕೆ
ತ್ಯಾಗ ದೌನತ್ಯವ ಅರಿಯಲು
ಕಾತರಿಸುತ್ತಾರೆ
ಹತ್ತುತ್ತಾರೆ ಮೇಲೇರುತ್ತಾರೆ
ನಿನ್ನ ಅಡಿಯವರೆಗಷ್ಟೆ.
ಮತ್ತೆ ಮೇಲೇರುವ
ಕೆಚ್ಚಿಲ್ಲದ ಸಾಮಾನ್ಯರು
ನಿನ್ನ ಅಸಾಮಾನ್ಯತೆಗೆ
ಅದ್ಭುತ ಕಲಾಕೃತಿಗೆ
ಬೆರಗಾಗುತ್ತಾರೆ, ಶಿಲೆಯಾಗುತ್ತಾರೆ
ನಿನ್ನ ಅಂದ ಚೆಂದ ಉದ್ದ ಗಾತ್ರದ ಲೆಕ್ಕ
ಏನೀ ಅದ್ಭುತ | ಉದ್ಗಾರದ ಪುಳಕ
ಬಹಿರಂಗದ ಚೆಲುವ ಅಳತೆ
ಮಾಡುವವನಿಗೆ ಕಾಣುವುದೇ
ಆಂತರ್ಯದ ಬೆಳಕು
ಅರಿವಾಗುವುದೇ ಪಾಮರರಿಗೆ
ಎದೆಯಾಂತರಾಳದಿ
ಉರಿಯುವ ವೈರಾಗ್ಯ ಜ್ಯೋತಿ
ನಿನ್ನ ಕಣ್ಣುಗಳ ಕಾಂತಿಗೆ
ಆಂತರ್ಯದ ಬೆಳಕಿಗೆ
ವೈರಾಗ್ಯದ ಸಂಮ್ಮೋಹನಕೆ
ದಿಗಂಬರರಾಗುತ್ತಾರೆ
ಅರೆಗಳಿಗೆಯಷ್ಟೆ ಮತ್ತೆ
ಮಮಕಾರದ ಬಟ್ಟೆ ತೊಟ್ಟು
ಕೆಳಗಿಳಿಯುತ್ತಾರೆ
ಕತ್ತಲು ಕವಿಯುತ್ತದೆ
ಮೋಡ ಮುಸುಕುತ್ತದೆ
ಇಳಿಯುತ್ತಾರೆ
ಕೆಳಗಿಳಿಯುತ್ತಾರೆ
ರಸಾತಳದತ್ತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಕೊಡಲಾಗದು
Next post ತಪ್ಪು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys