ವೈರಾಗ್ಯ ಜ್ಯೋತಿ

ಲಕ್ಷೋಪಲಕ್ಷ ಕಣ್ಣುಗಳು
ಧೀಮಂತ ಮೂರ್ತಿಯ ದರ್ಶನಕೆ
ತ್ಯಾಗ ದೌನತ್ಯವ ಅರಿಯಲು
ಕಾತರಿಸುತ್ತಾರೆ
ಹತ್ತುತ್ತಾರೆ ಮೇಲೇರುತ್ತಾರೆ
ನಿನ್ನ ಅಡಿಯವರೆಗಷ್ಟೆ.
ಮತ್ತೆ ಮೇಲೇರುವ
ಕೆಚ್ಚಿಲ್ಲದ ಸಾಮಾನ್ಯರು
ನಿನ್ನ ಅಸಾಮಾನ್ಯತೆಗೆ
ಅದ್ಭುತ ಕಲಾಕೃತಿಗೆ
ಬೆರಗಾಗುತ್ತಾರೆ, ಶಿಲೆಯಾಗುತ್ತಾರೆ
ನಿನ್ನ ಅಂದ ಚೆಂದ ಉದ್ದ ಗಾತ್ರದ ಲೆಕ್ಕ
ಏನೀ ಅದ್ಭುತ | ಉದ್ಗಾರದ ಪುಳಕ
ಬಹಿರಂಗದ ಚೆಲುವ ಅಳತೆ
ಮಾಡುವವನಿಗೆ ಕಾಣುವುದೇ
ಆಂತರ್ಯದ ಬೆಳಕು
ಅರಿವಾಗುವುದೇ ಪಾಮರರಿಗೆ
ಎದೆಯಾಂತರಾಳದಿ
ಉರಿಯುವ ವೈರಾಗ್ಯ ಜ್ಯೋತಿ
ನಿನ್ನ ಕಣ್ಣುಗಳ ಕಾಂತಿಗೆ
ಆಂತರ್ಯದ ಬೆಳಕಿಗೆ
ವೈರಾಗ್ಯದ ಸಂಮ್ಮೋಹನಕೆ
ದಿಗಂಬರರಾಗುತ್ತಾರೆ
ಅರೆಗಳಿಗೆಯಷ್ಟೆ ಮತ್ತೆ
ಮಮಕಾರದ ಬಟ್ಟೆ ತೊಟ್ಟು
ಕೆಳಗಿಳಿಯುತ್ತಾರೆ
ಕತ್ತಲು ಕವಿಯುತ್ತದೆ
ಮೋಡ ಮುಸುಕುತ್ತದೆ
ಇಳಿಯುತ್ತಾರೆ
ಕೆಳಗಿಳಿಯುತ್ತಾರೆ
ರಸಾತಳದತ್ತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಕೊಡಲಾಗದು
Next post ತಪ್ಪು

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…