ಚೈತ್ರಗಾನ

ಚೈತ್ರ ಬಂತು ಚೈತ್ರ
ಬದುಕು ಬವಣೆಯಾತ್ರೆ
ಅಳುವಿರಲಿ, ನಗುವಿರಲಿ
ಕಥೆಗೆ ತಕ್ಕ ಪಾತ್ರ
ಅಪ್ಪ ಅಮ್ಮ ಅಣ್ಣ ತಂಗಿ
ಜೊತೆಯಾದರು ಪಯಣಕೆ
ನಲಿವಿನಿಂದ ನೋವು ನುಂಗಿ
ನಡೆದೆವು ದೂರ ತೀರಕೆ
ತೀರ ದೂರ ಬದುಕು ಭಾರ
ಸೋಲುಂಡವು ಮೈಮನ
ಉರಿಯೋ ಬಿಸಿಲು ಸುರಿಯೋ ಮಳೆಯೋ
ಜಡವಾಯಿತು ಚೇತನ.
ಚೈತ್ರ ಬಂತು ಹರುಷ ತಂತು
ಸಂಭ್ರಮದಿ ಸಾಗರ
ಹಳತು ಬೇರು ಹೊಸ ಚಿಗುರು
ಬೇವು ಬೆಲ್ಲ ಬಂಧುರ
ಉಸಿರಾಯಿತು ಹಸಿರಾಯಿತು.
ಬದುಕಾಯಿತು ನಂದನ
ಚಿಗುರೊಡೆದು ಪಲ್ಲವಿಸಿತು
ಚೈತನ್ಯದ ಹೂಬನ
ಹೂವು ಗಂಧ ತುಂಬಿ ಬಂದ
ಝೇಂಕಾರದ ನಾದ
ಮನಸೆಳೆಯಿತು ಕಣ್ ತಣಿಸಿತು
ಪ್ರಕೃತಿ ಪ್ರಮೋದ.
ಮಾಮರದ ಕೋಗಿಲೆಯ
ಸುಶ್ರಾವ್ಯ ಗಾನ
ಎದೆಯ ಹಕ್ಕಿ ಪ್ರತಿಧ್ವನಿ
ತಂತನಾನ ತಾನ
ಚಿಗುರೆಲೆಗಳ ಆಗಮನ
ಹಣ್ಣೆಲೆಗಳ ನಿರ್ಗಮನ
ಉದಯಾಸ್ತಮಾನ
ಸೃಷ್ಠಿ ಸಂವಿಧಾನ.
ಮನ ಮನಗಳ ಮಧುರ ಬೆಸುಗೆ
ಭಾವಾತಿಬಂಧನ
ಸರಸ ವಿರಸ ಸಾಮರಸ್ಯ
ಸುಖದ ಸೋಪಾನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಊರ್ವಶಿ ಮತ್ತು ಹಂದಿ
Next post ನನ್ನಲಿಲ್ಲದ್ದು

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…