ಚೈತ್ರಗಾನ

ಚೈತ್ರ ಬಂತು ಚೈತ್ರ
ಬದುಕು ಬವಣೆಯಾತ್ರೆ
ಅಳುವಿರಲಿ, ನಗುವಿರಲಿ
ಕಥೆಗೆ ತಕ್ಕ ಪಾತ್ರ
ಅಪ್ಪ ಅಮ್ಮ ಅಣ್ಣ ತಂಗಿ
ಜೊತೆಯಾದರು ಪಯಣಕೆ
ನಲಿವಿನಿಂದ ನೋವು ನುಂಗಿ
ನಡೆದೆವು ದೂರ ತೀರಕೆ
ತೀರ ದೂರ ಬದುಕು ಭಾರ
ಸೋಲುಂಡವು ಮೈಮನ
ಉರಿಯೋ ಬಿಸಿಲು ಸುರಿಯೋ ಮಳೆಯೋ
ಜಡವಾಯಿತು ಚೇತನ.
ಚೈತ್ರ ಬಂತು ಹರುಷ ತಂತು
ಸಂಭ್ರಮದಿ ಸಾಗರ
ಹಳತು ಬೇರು ಹೊಸ ಚಿಗುರು
ಬೇವು ಬೆಲ್ಲ ಬಂಧುರ
ಉಸಿರಾಯಿತು ಹಸಿರಾಯಿತು.
ಬದುಕಾಯಿತು ನಂದನ
ಚಿಗುರೊಡೆದು ಪಲ್ಲವಿಸಿತು
ಚೈತನ್ಯದ ಹೂಬನ
ಹೂವು ಗಂಧ ತುಂಬಿ ಬಂದ
ಝೇಂಕಾರದ ನಾದ
ಮನಸೆಳೆಯಿತು ಕಣ್ ತಣಿಸಿತು
ಪ್ರಕೃತಿ ಪ್ರಮೋದ.
ಮಾಮರದ ಕೋಗಿಲೆಯ
ಸುಶ್ರಾವ್ಯ ಗಾನ
ಎದೆಯ ಹಕ್ಕಿ ಪ್ರತಿಧ್ವನಿ
ತಂತನಾನ ತಾನ
ಚಿಗುರೆಲೆಗಳ ಆಗಮನ
ಹಣ್ಣೆಲೆಗಳ ನಿರ್ಗಮನ
ಉದಯಾಸ್ತಮಾನ
ಸೃಷ್ಠಿ ಸಂವಿಧಾನ.
ಮನ ಮನಗಳ ಮಧುರ ಬೆಸುಗೆ
ಭಾವಾತಿಬಂಧನ
ಸರಸ ವಿರಸ ಸಾಮರಸ್ಯ
ಸುಖದ ಸೋಪಾನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಊರ್ವಶಿ ಮತ್ತು ಹಂದಿ
Next post ನನ್ನಲಿಲ್ಲದ್ದು

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys