ವಚನ ವಿಚಾರ – ಊರ್ವಶಿ ಮತ್ತು ಹಂದಿ

ವಚನ ವಿಚಾರ – ಊರ್ವಶಿ ಮತ್ತು ಹಂದಿ

ಊರ್ವಸಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರಲ್ಲದೆ
ಹಂದಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರೆ
ಹುಡು ಹುಡು ಎಂದಟ್ಟುವರಲ್ಲದೆ
ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರಲ್ಲದೆ
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರೆ
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ ಆ ಹಂದಿಗಿಂತ ಕರಕಷ್ಟ
ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ

ಮೋಳಿಗೆ ಮಾರಯ್ಯನ ಹೆಂಡತಿ ಮೋಳಿಗೆ ಮಹಾದೇವಿಯ ವಚನ ಇದು. ಪಚ್ಚಕರ್ಪೂರವು ಸುಗಂಧಭರಿತ ನಿಜ. ಊರ್ವಶಿ ಕರ್ಪೂರವನ್ನು ಮೆದ್ದು ಮುದ್ದುಕೊಟ್ಟರೆ ರುಚಿ, ಅದೇ ಹಂದಿ ಕರ್ಪೂರವನ್ನು ಮೆದ್ದು ಮುತ್ತುಕೊಟ್ಟರೆ ಅಸಹ್ಯ. ವಚನಗಳೇನೋ ದೊಡ್ಡ ಮಾತುಗಳು ನಿಜ. ಆದರೆ ನಡೆ, ನುಡಿಗಳಲ್ಲಿ ಪಕ್ವವಾದವರು ಅವನ್ನು ಓದಿ, ಹೇಳಿದರೆ ಹಿತ, ಹಾಗಲ್ಲದವರು ಹೇಳಿದರೆ ಹಂದಿಗಿಂತ ಅಸಹ್ಯ ಈ ಮಾತನ್ನು ಓದುಗರ ಜವಾಬ್ದಾರಿ ಎಂದೂ ವಿವರಿಸಿಕೊಳ್ಳಬಹುದು. ಕನ್ನಡವನ್ನು ಓದಲು ಬಂದ ಮಾತ್ರಕ್ಕೆ ಕನ್ನಡದಲ್ಲಿ ಬರೆದಿರುವುದೆಲ್ಲಾ ಅರ್ಥವಾಗಬೇಕೆಂದಿಲ್ಲ. ಓದುಗರ ಮನಸ್ಸೂ ಪಕ್ವವಾಗಿದ್ದಾಗ ಓದಿದ್ದಕ್ಕೆ ಹೊಸ ಅರ್ಥ ಹೊಳೆದು ಅದನ್ನು ಅವರು ಹೇಳಿದರೆ ಕೇಳುವವರಿಗೂ ಊರ್ವಶಿಯ ಚುಂಬನದಂತೆ ಹಿತವಾಗಿರುತ್ತದೆ.

ನಮ್ಮ ಕಾಲದ ದುರಂತವೆಂದರೆ ಯಾರು ಏನೇ ಹೇಳಿದರೂ ಓದುಗರಿಗೆ ಯಾವ ಜವಾಬ್ದಾರಿಯೂ ಇಲ್ಲ, ಅರ್ಥವತ್ತಾಗಿ ಹೇಳುವುದು ಲೇಖಕರ, ಮಾತನಾಡುವವರ ಜವಾಬ್ದಾರಿ ಎಂದು ಭ್ರಮಿಸಿರುವುದು. ಕೇಳಿದ ಓದಿದ ಮಾತಿನ ಬಗ್ಗೆ ಕಟು ಟಿಪ್ಪಣಿ ಮಾಡುವ ಮೊದಲು ಓದುಗರು ತಾವು ಊರ್ವಶಿಯಂಥವರೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದೇನೋ! ತೀರ ಇಷ್ಟು ಸಂಕುಚಿತ ಅರ್ಥದಲ್ಲಿ ಅಲ್ಲದಿದ್ದರೂ ಸ್ವೀಕರಿಸುವವರ ಯೋಗ್ಯತೆಯನ್ನು ಈ ವಚನ ಎತ್ತಿ ಹೇಳುತ್ತಿರುವುದು ಗಮನಾರ್ಹವೆಂದೇ ತೋರುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾದಭೇದ
Next post ಚೈತ್ರಗಾನ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys