ನಾದಭೇದ


ಢಣಢಣನಾದವು ಕೇಳಿಸಿತೆಂದರೆ,
ದೇವರಪ್ರಾಣವು ಹಾರುವುದು.
ಧರ್ಮಕ್ಕೆ ಬೆಂಕಿಯ ಬೀಳುವದು.
ಸೂರ್ಯನ, ಸಾಗರ ನುಂಗುವುದು.
ದೈತ್ಯರ ಮೇಳವು ಕೂಡುವುದು.
ಕಾಲನ ನೃತ್ಯವು ನಡೆಯುವುದು.
ಭೈರವಿರಾಗವು ಕೇಳುವುದು.
ನರಕವು ಸ್ವಾಗತಗೈಯುವುದು.
ಢಣಢಣನಾದವು ಕೇಳಿಸಿತೆಂದರೆ!


ಝಣಝಣನಾದವು ಕೇಳಿಸಿತೆಂದರೆ,
ದೇವರು ಸೇವಕನಾಗುವನು.
ಆಗಸ ಅರಮನೆ ಮಾಡುವನು.
ಇಂದ್ರನು ಆಯುಧಕೊಳ್ಳುವನು.
ಪರ್ವತಪುಡಿಪುಡಿಮಾಡುವನು.
ಕುಬೇರ ನೃತ್ಯವಗೈಯುವನು.
ಚಿನ್ನದಬುಗ್ಗೆಯ ಪುಟಿಸುವನು.
ಕಾಲನು ಕಿಂಕರನಾಗುವನು.
ಪ್ರಾಣದನಿಟ್ಟನು ಒಟ್ಟುವನು.
ಝಣಝಣನಾದವು ಕೇಳಿಸಿತೆಂದರೆ!


ಢಣಢಣನಾದಕೆ ಓಡುವುದೇಕೋ?
ದೇವರಪೂಜೆಯು ಸಾಗಿಹುದು.
ಮಂಗಲಗೀತವು ಕೇಳುವುದು.
ಭಕ್ತಿಯಭಾವವ ತೋರುವುದು.
ಧರ್ಮದಾರತಿಯ ಬೆಳಗುವುದು.
ತನುನೈವೇದ್ಯವ ನೀಡುವುದು.
ಮಕ್ಕಳ ಮಧ್ಯದಿ ಕೂಡುವುದು.
ಉದಯರಾಗವನೆ ಹಾಡುವುದು.
ಆನಂದದಿ ಕುಣಿದಾಡುವುದು.
ಝಣಝಣನಾದಕೆ ಕೂಡುವುದೇಕೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು
Next post ವಚನ ವಿಚಾರ – ಊರ್ವಶಿ ಮತ್ತು ಹಂದಿ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys