ಬೆಳಕು

ಕಾಲ ಮಾಗಿದ ಹಾಗೆ ಆಳ ನಿರಾಳವಾಗಿ
ಹೃದಯಗಳ ಕಂಪನಗಳ ಭಾವ, ಸ್ಪುರಣದ
ಶಕ್ತಿ ಅಂತಃಕರಣ ಕಲುಕಿದ ಕ್ಷಣಗಳು, ಮತ್ತೆ
ಆಧ್ಯಾತ್ಮದ ಅರಿವು ಒಳಗೊಳಗೆ ಇಳಿದಾಗ
ಸೂರ್ಯ ಉದಯಿಸುತ್ತಾನೆ.

ಗಂಧದ ಹೂಗಳ ಪರಿಮಳದ ಸೂಕ್ಷ್ಮ
ಗಾಳಿಯಲಿ ತೇಲಿ ಮನಸ್ಸು ಅರಳಿದಾಗ,
ಅವ ದೋಣಿ ಹಾಕುವ ಹುಟ್ಟಿಗೆ ಬಲ ಬಂದು
ಚಲನೆಯ ಗತಿಯಲ್ಲಿ ಭೂಮಿ ಜನರು, ಮತ್ತೆ
ಅಂಗಳದಲಿ ಎಳೆ ಬಿಸಿಲಿಗೆ ಕಂದನ ಮೈಬಣ್ಣ
ಸೂರ್ಯ ಹಾಡುತ್ತಾನೆ.

ನಮಗೆ ತಿಳಿಯುವುದೇ ಇಲ್ಲ ಈ ಜಗದ
ಪ್ರೀತಿಯ ಅರಿವು ಶಕ್ತಿ ಒಂದು ಸಂಬಂಧದ
ಮೂಲಕ ಸುರಿದು ಹಸಿರು ಚಿಗುರು ಮೇಳೈಸಿದ ಲೀಲೆ.
ಎಲ್ಲೆಲ್ಲೂ ಹೆರಿಗೆ ಮನೆ ಸೂರ್ಯ ಕಂತುತ್ತಾನೆ.

ಎಲ್ಲ ನೋವುಗಳ ದಾಟಿ ಪ್ರೀತಿ ನದಿಯಲಿ
ಮಿಂದು ಎದ್ದ ಗಳಿಗೆ ಆಕಾಶದ ತುಂಬ ನೀಲಿ
ಹರಡಿ ಬೆಳ್ಳಕ್ಕಿಗಳ ಹಾರಾಟದ ಒಲವು, ಮತ್ತೆ
ಬಣ್ಣದ ಚಿಟ್ಟೆಗಳ ಹಾರಾಟ, ವಸಂತನ ಚಿಗುರು,
ಕೋಗಿಲೆ ಹಾಡಿನ ಇಂಪು, ಮನವೆಲ್ಲಾ ಕಂಪು
ಸೂರ್ಯ ತಬ್ಬುತ್ತಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯ ಮಡಿಲು
Next post ನಾದಭೇದ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys