ಮನವಿದ್ದೆಡೆ ಮಾರ್ಗ

ಜಡವಾಗದಿರು ಶಿಲೆಯಾಗದಿರು
ಇದ್ದು ಸತ್ತಂತೆ
ಜೀವನದ ಪಯಣವಿದು
ಹೋರಾಟದಂತೆ
ಏಳು ಎದ್ದೇಳು
ಬಡಿದೆಬ್ಬಿಸು ಚೇತನವ
ಹೂಡಿದೋಡಿಸು ಜಡತೆಯ
ಅರೆಗಳಿಗೆಯ ವಿಶ್ರಾಂತಿ
ಅಳಿವಿನ ದಾರಿಗೆ ರಿಯಾಯಿತಿ
ನೀ ಹೇಗಿದ್ದರೇನು? ಎಲ್ಲಿದ್ದರೇನು?
ಕನಸು ನನಸಾಗಿಸುವ
ಗುರಿ ಮುಂದಿರಲಿ
ಸಾಧಿಸುವ ಛಲವಿರಲಿ
ಇರಲಿ ನೂರಾರು ಕಷ್ಟ
ಬರಲಿ ಸಾವಿರಾರು ನಷ್ಟ
ಹೆದರದಿರು ಎದೆ ಗುಂದದಿರು
ಮುಂದಿರುವ ಎಡರು ತೊಡರು
ದೂರ ಸರಿಸು ಭಯ ಆತಂಕವ
ಪಡೆದುಕೊ ಆತ್ಮವಿಶ್ವಾಸವ
ಅಡಿ ಮುಂದಿಡು ನೀನು
ತಲುಪುವೆ ತೀರವನು
ಧರಿಸುವೆ ಜಯದ ಮಾಲೆಯನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಸೋಂಕಿನ ಸೋಜಿಗ
Next post ಮನಬಿಚ್ಚಿ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys