ಜಡವಾಗದಿರು ಶಿಲೆಯಾಗದಿರು
ಇದ್ದು ಸತ್ತಂತೆ
ಜೀವನದ ಪಯಣವಿದು
ಹೋರಾಟದಂತೆ
ಏಳು ಎದ್ದೇಳು
ಬಡಿದೆಬ್ಬಿಸು ಚೇತನವ
ಹೂಡಿದೋಡಿಸು ಜಡತೆಯ
ಅರೆಗಳಿಗೆಯ ವಿಶ್ರಾಂತಿ
ಅಳಿವಿನ ದಾರಿಗೆ ರಿಯಾಯಿತಿ
ನೀ ಹೇಗಿದ್ದರೇನು? ಎಲ್ಲಿದ್ದರೇನು?
ಕನಸು ನನಸಾಗಿಸುವ
ಗುರಿ ಮುಂದಿರಲಿ
ಸಾಧಿಸುವ ಛಲವಿರಲಿ
ಇರಲಿ ನೂರಾರು ಕಷ್ಟ
ಬರಲಿ ಸಾವಿರಾರು ನಷ್ಟ
ಹೆದರದಿರು ಎದೆ ಗುಂದದಿರು
ಮುಂದಿರುವ ಎಡರು ತೊಡರು
ದೂರ ಸರಿಸು ಭಯ ಆತಂಕವ
ಪಡೆದುಕೊ ಆತ್ಮವಿಶ್ವಾಸವ
ಅಡಿ ಮುಂದಿಡು ನೀನು
ತಲುಪುವೆ ತೀರವನು
ಧರಿಸುವೆ ಜಯದ ಮಾಲೆಯನು
*****
Related Post
ಸಣ್ಣ ಕತೆ
-
ಕಂಬದಹಳ್ಳಿಗೆ ಭೇಟಿ
ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್ಸೂಟು… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…