ಜಡವಾಗದಿರು ಶಿಲೆಯಾಗದಿರು
ಇದ್ದು ಸತ್ತಂತೆ
ಜೀವನದ ಪಯಣವಿದು
ಹೋರಾಟದಂತೆ
ಏಳು ಎದ್ದೇಳು
ಬಡಿದೆಬ್ಬಿಸು ಚೇತನವ
ಹೂಡಿದೋಡಿಸು ಜಡತೆಯ
ಅರೆಗಳಿಗೆಯ ವಿಶ್ರಾಂತಿ
ಅಳಿವಿನ ದಾರಿಗೆ ರಿಯಾಯಿತಿ
ನೀ ಹೇಗಿದ್ದರೇನು? ಎಲ್ಲಿದ್ದರೇನು?
ಕನಸು ನನಸಾಗಿಸುವ
ಗುರಿ ಮುಂದಿರಲಿ
ಸಾಧಿಸುವ ಛಲವಿರಲಿ
ಇರಲಿ ನೂರಾರು ಕಷ್ಟ
ಬರಲಿ ಸಾವಿರಾರು ನಷ್ಟ
ಹೆದರದಿರು ಎದೆ ಗುಂದದಿರು
ಮುಂದಿರುವ ಎಡರು ತೊಡರು
ದೂರ ಸರಿಸು ಭಯ ಆತಂಕವ
ಪಡೆದುಕೊ ಆತ್ಮವಿಶ್ವಾಸವ
ಅಡಿ ಮುಂದಿಡು ನೀನು
ತಲುಪುವೆ ತೀರವನು
ಧರಿಸುವೆ ಜಯದ ಮಾಲೆಯನು
*****
Related Post
ಸಣ್ಣ ಕತೆ
-
ನಾಗನ ವರಿಸಿದ ಬಿಂಬಾಲಿ…
ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಟೋಪಿ ಮಾರುತಿ
"ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…