ವಚನ ವಿಚಾರ – ಸೋಂಕಿನ ಸೋಜಿಗ

ವಚನ ವಿಚಾರ – ಸೋಂಕಿನ ಸೋಜಿಗ

ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು
ಬರುಮಾತಿನ ಉಯ್ಯಲನೇರಿ ಒದೆದು ಒರಲಿ ಕೆಡುವ ದರಿದ್ರರು
ಅರಿವು ತೋರದೆ ಇರಬೇಕು ಕಾಯನಿರ್ಣಯ ನಿಃಪತಿಯೆಂಬಾತನು
ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು
ಅರಿವು ತೊರೆದ ಎರಂಡೆಂಬ ಭಿನ್ನವೇಷವ ತೊಟ್ಟು
ಡಂಬಕವ ನುಡಿದಹೆವೆಂಬ ಉದ್ದಂಡರ ಗುಹೇಶ್ವರ ಕಂಡರೆ ಕನಲುವ

[ಬರುಮಾತಿನ–ಬರಿಯ ಮಾತಿನ, ಕಾಯನಿರ್ಣಯ ನಿಃಪತಿ-ಪೂರ್ಣಪ್ರಬುದ್ಧತೆಯ ಲಕ್ಷಣ]

ಅಲ್ಲಮನ ವಚನ.

ಕೆಲವರಿಗೆ ಜ್ಞಾನದ ಬಲ ಇರುತ್ತದೆ. ಅದನ್ನು ಬಳಸಿಕೊಂಡು ಅರಿಯದವರನ್ನು ಗೆಲ್ಲಬೇಕೆಂದು ಇನ್ನಿಲ್ಲದಂತೆ ಪ್ರಯತ್ನಿಸುತ್ತಾರೆ. ಮಾತಿನ ಉಯ್ಯಾಲೆಯನ್ನು ಏರಿ ಅತ್ತ ಇತ್ತ ತುಯ್ದಾಡುತ್ತಾರೆ, ಒಮ್ಮೆ ಹಾಗೆ, ಒಮ್ಮೆ ಹೀಗೆ ಅಭಿಪ್ರಾಯವ್ಯಕ್ತಪಡಿಸುತ್ತಾರೆ. ಇವರೆಲ್ಲ (ನಾವೆಲ್ಲ?) ಹೀಗೆ ಸುಮ್ಮನೆ ಮಾತು ಒರಲಿ ಕೆಡುವ ದರಿದ್ರರು.

ಮುಂದಿನ ಕೆಲವು ಪಾರಿಭಾಷಿಕಗಳನ್ನು ಬಿಟ್ಟರೂ `ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು’ ಅನ್ನುವ ಮಾತು ಗಮನಿಸಿ, ಸ್ಪರ್ಶದ ಸೋಜಿಗವನ್ನು ಅನುಭವಿಸಿ, ಪರಿಣತರಾಗಿ ಫಲಿಸಬೇಕು.

ನಾವಾಡುವ ವಿಷಯವೆಲ್ಲ ಬರಿಯ ಮಾತಿನ ಮಟ್ಟದ ಮಾಹಿತಿಯಾಗಿದ್ದರೆ ನಾವೆಲ್ಲ ಮಾತಿನ ಉಯ್ಯಾಲೆಯಾಡುವ, ಅನ್ಯರನ್ನು ಗೆಲ್ಲಬಯಸುವ, ಕೆಡುವ, ದರಿದ್ರರು ಅಷ್ಟೆ. ಆಡುವ ಮಾತಿನ ನಿಜವನ್ನು ಮುಟ್ಟಿ, ಸೋಂಕಿ, ಸೋಜಿಗಪಡುವುದು ಮುಖ್ಯ. ಸೋಜಿಗ ಫಲಿಸುವುದು, ಹಣ್ಣಾಗುವುದು ಮುಖ್ಯ. ಅದು ಆಗದಿದ್ದರೆ ಮಾತು ವ್ಯರ್ಥ.

ಇನ್ನು ಮಾತು ಬೇಡ, ಸುಮ್ಮನೆ ಪರಿಣಮಿಸೋಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಳೆಯ ಮರದಡಿ
Next post ಮನವಿದ್ದೆಡೆ ಮಾರ್ಗ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…