Home / ಲೇಖನ / ಇತರೆ / ವಚನ ವಿಚಾರ – ಸೋಂಕಿನ ಸೋಜಿಗ

ವಚನ ವಿಚಾರ – ಸೋಂಕಿನ ಸೋಜಿಗ

ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು
ಬರುಮಾತಿನ ಉಯ್ಯಲನೇರಿ ಒದೆದು ಒರಲಿ ಕೆಡುವ ದರಿದ್ರರು
ಅರಿವು ತೋರದೆ ಇರಬೇಕು ಕಾಯನಿರ್ಣಯ ನಿಃಪತಿಯೆಂಬಾತನು
ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು
ಅರಿವು ತೊರೆದ ಎರಂಡೆಂಬ ಭಿನ್ನವೇಷವ ತೊಟ್ಟು
ಡಂಬಕವ ನುಡಿದಹೆವೆಂಬ ಉದ್ದಂಡರ ಗುಹೇಶ್ವರ ಕಂಡರೆ ಕನಲುವ

[ಬರುಮಾತಿನ–ಬರಿಯ ಮಾತಿನ, ಕಾಯನಿರ್ಣಯ ನಿಃಪತಿ-ಪೂರ್ಣಪ್ರಬುದ್ಧತೆಯ ಲಕ್ಷಣ]

ಅಲ್ಲಮನ ವಚನ.

ಕೆಲವರಿಗೆ ಜ್ಞಾನದ ಬಲ ಇರುತ್ತದೆ. ಅದನ್ನು ಬಳಸಿಕೊಂಡು ಅರಿಯದವರನ್ನು ಗೆಲ್ಲಬೇಕೆಂದು ಇನ್ನಿಲ್ಲದಂತೆ ಪ್ರಯತ್ನಿಸುತ್ತಾರೆ. ಮಾತಿನ ಉಯ್ಯಾಲೆಯನ್ನು ಏರಿ ಅತ್ತ ಇತ್ತ ತುಯ್ದಾಡುತ್ತಾರೆ, ಒಮ್ಮೆ ಹಾಗೆ, ಒಮ್ಮೆ ಹೀಗೆ ಅಭಿಪ್ರಾಯವ್ಯಕ್ತಪಡಿಸುತ್ತಾರೆ. ಇವರೆಲ್ಲ (ನಾವೆಲ್ಲ?) ಹೀಗೆ ಸುಮ್ಮನೆ ಮಾತು ಒರಲಿ ಕೆಡುವ ದರಿದ್ರರು.

ಮುಂದಿನ ಕೆಲವು ಪಾರಿಭಾಷಿಕಗಳನ್ನು ಬಿಟ್ಟರೂ `ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು’ ಅನ್ನುವ ಮಾತು ಗಮನಿಸಿ, ಸ್ಪರ್ಶದ ಸೋಜಿಗವನ್ನು ಅನುಭವಿಸಿ, ಪರಿಣತರಾಗಿ ಫಲಿಸಬೇಕು.

ನಾವಾಡುವ ವಿಷಯವೆಲ್ಲ ಬರಿಯ ಮಾತಿನ ಮಟ್ಟದ ಮಾಹಿತಿಯಾಗಿದ್ದರೆ ನಾವೆಲ್ಲ ಮಾತಿನ ಉಯ್ಯಾಲೆಯಾಡುವ, ಅನ್ಯರನ್ನು ಗೆಲ್ಲಬಯಸುವ, ಕೆಡುವ, ದರಿದ್ರರು ಅಷ್ಟೆ. ಆಡುವ ಮಾತಿನ ನಿಜವನ್ನು ಮುಟ್ಟಿ, ಸೋಂಕಿ, ಸೋಜಿಗಪಡುವುದು ಮುಖ್ಯ. ಸೋಜಿಗ ಫಲಿಸುವುದು, ಹಣ್ಣಾಗುವುದು ಮುಖ್ಯ. ಅದು ಆಗದಿದ್ದರೆ ಮಾತು ವ್ಯರ್ಥ.

ಇನ್ನು ಮಾತು ಬೇಡ, ಸುಮ್ಮನೆ ಪರಿಣಮಿಸೋಣ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...