ಕೊಂಬೆ

ಈ ಮಾಗಿದ ಸಂಜೆ ಅವಳ ತಲೆಗೂದಲೆಲ್ಲಾ
ಬಿಳಿಬಿಳಿ ಮೋಡಗಳ ರಾಶಿ, ಎದೆಯ ಆಳಕ್ಕೆ
ಇಳಿವ ಅವಳ ಮೌನ ನೋಟದ ತುಂಬ ಈ
ಬದುಕ ನೆರಳು, ಅಲ್ಲಾಡುತ್ತಿವೆ ಹಳದಿ ಎಲೆಗಳು.

ಅವಳು ಮಾತನಾಡುವುದಿಲ್ಲ. ಬರೀ ನಿಟ್ಟುಸಿರು
ಬಿಡುತ್ತಾಳೆ. ಎಲೆಗಂಟಿದ ಇರುವೆಯ ಕಾಲಗಳು
ತುಂಬ ಸ್ಮೃತಿಗಳು ಅರಳಿ, ಮಳೆ ಬಂದ ಸಂಜೆ.
ಅವಳು ಮಗುವಾದಳು ಭಾವಕೋಶದಲಿ ಅವನ
ಹಾಡು.

ವಿಷಾದದ ಅಲೆಗಳು ಅಪ್ಪಳಿಸುತ್ತಿವೆ ಅವಳ ಮುದಿ
ನದಿಯ ದಂಡೆಯ ಗುಂಟ, ಬೆಳಕಿನ ದಾರಿ ದಾಟಿ,
ಒಣಗಿದ ಪಾಚಿಯ ಬಂಡೆಯಂತೆ ಮಸುಕಾಗಿ,
ಒಂದಾಗಿ ಹಣ್ಣಾಗಿದ್ದಾಳೆ ಅನುಭವದ ಕುಲುಮೆಯಲಿ.

ಮನಕ್ಕೆ ಅಂಟಿದ ಸುವಾಸನೆಗಳ ಮಧುರ ನೆನಪು,
ಅವಳ ಆಳದಲಿ ಕೆಂಪಾಗಿ ಹವಳದ ಹರಳುಗಳು,
ಚಿಕ್ಕೀ ಇಲ್ಲದ ಅವಳ ಬಳೆಗಳಿಗೆ ಚಂದ್ರ ಬಿಂಬ,
ಕತ್ತಲ ಸುರಂಗದಲಿ ಹುಡುಕುತ್ತಿದ್ದಾಳೆ ಕಿರಣಗಳ.

ದುಃಖದ ಸಂಜೆಯ ಖಾಲಿ ಆಕಾಶದಲಿ, ಅವಳ
ಮೊಮ್ಮಗಳು ಚಕ್ಕೀ ಹೊಳಪು ಮೂಡಿಸುತ್ತಿದ್ದಾಳೆ.
ಹಕ್ಕಿಯಾಗಿ ಹಾರಾಡಿ ಅಂಗಳದ ತುಂಬ ಬಣ್ಣ
ಬಣ್ಣ ಚಿಟ್ಟೆ ಹರಿದಾಡಿ ಅವಳ ಬೊಚ್ಚುಬಾಯಿ
ನಗೆಬಿರಿಯಿತು. ಅವಳೀಗ ಹಸಿ ಜೋಳದ ತೆನೆಯ
ಹಾಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ದೇವಿ ಭಾರತಿಯೆ
Next post ಕಣ್ಣು ಮುಚ್ಚಾಟ!

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…