ಕೊಂಬೆ

ಈ ಮಾಗಿದ ಸಂಜೆ ಅವಳ ತಲೆಗೂದಲೆಲ್ಲಾ
ಬಿಳಿಬಿಳಿ ಮೋಡಗಳ ರಾಶಿ, ಎದೆಯ ಆಳಕ್ಕೆ
ಇಳಿವ ಅವಳ ಮೌನ ನೋಟದ ತುಂಬ ಈ
ಬದುಕ ನೆರಳು, ಅಲ್ಲಾಡುತ್ತಿವೆ ಹಳದಿ ಎಲೆಗಳು.

ಅವಳು ಮಾತನಾಡುವುದಿಲ್ಲ. ಬರೀ ನಿಟ್ಟುಸಿರು
ಬಿಡುತ್ತಾಳೆ. ಎಲೆಗಂಟಿದ ಇರುವೆಯ ಕಾಲಗಳು
ತುಂಬ ಸ್ಮೃತಿಗಳು ಅರಳಿ, ಮಳೆ ಬಂದ ಸಂಜೆ.
ಅವಳು ಮಗುವಾದಳು ಭಾವಕೋಶದಲಿ ಅವನ
ಹಾಡು.

ವಿಷಾದದ ಅಲೆಗಳು ಅಪ್ಪಳಿಸುತ್ತಿವೆ ಅವಳ ಮುದಿ
ನದಿಯ ದಂಡೆಯ ಗುಂಟ, ಬೆಳಕಿನ ದಾರಿ ದಾಟಿ,
ಒಣಗಿದ ಪಾಚಿಯ ಬಂಡೆಯಂತೆ ಮಸುಕಾಗಿ,
ಒಂದಾಗಿ ಹಣ್ಣಾಗಿದ್ದಾಳೆ ಅನುಭವದ ಕುಲುಮೆಯಲಿ.

ಮನಕ್ಕೆ ಅಂಟಿದ ಸುವಾಸನೆಗಳ ಮಧುರ ನೆನಪು,
ಅವಳ ಆಳದಲಿ ಕೆಂಪಾಗಿ ಹವಳದ ಹರಳುಗಳು,
ಚಿಕ್ಕೀ ಇಲ್ಲದ ಅವಳ ಬಳೆಗಳಿಗೆ ಚಂದ್ರ ಬಿಂಬ,
ಕತ್ತಲ ಸುರಂಗದಲಿ ಹುಡುಕುತ್ತಿದ್ದಾಳೆ ಕಿರಣಗಳ.

ದುಃಖದ ಸಂಜೆಯ ಖಾಲಿ ಆಕಾಶದಲಿ, ಅವಳ
ಮೊಮ್ಮಗಳು ಚಕ್ಕೀ ಹೊಳಪು ಮೂಡಿಸುತ್ತಿದ್ದಾಳೆ.
ಹಕ್ಕಿಯಾಗಿ ಹಾರಾಡಿ ಅಂಗಳದ ತುಂಬ ಬಣ್ಣ
ಬಣ್ಣ ಚಿಟ್ಟೆ ಹರಿದಾಡಿ ಅವಳ ಬೊಚ್ಚುಬಾಯಿ
ನಗೆಬಿರಿಯಿತು. ಅವಳೀಗ ಹಸಿ ಜೋಳದ ತೆನೆಯ
ಹಾಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ದೇವಿ ಭಾರತಿಯೆ
Next post ಕಣ್ಣು ಮುಚ್ಚಾಟ!

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…