Home / ಕವನ / ಕವಿತೆ / ಕೊಂಬೆ

ಕೊಂಬೆ

ಈ ಮಾಗಿದ ಸಂಜೆ ಅವಳ ತಲೆಗೂದಲೆಲ್ಲಾ
ಬಿಳಿಬಿಳಿ ಮೋಡಗಳ ರಾಶಿ, ಎದೆಯ ಆಳಕ್ಕೆ
ಇಳಿವ ಅವಳ ಮೌನ ನೋಟದ ತುಂಬ ಈ
ಬದುಕ ನೆರಳು, ಅಲ್ಲಾಡುತ್ತಿವೆ ಹಳದಿ ಎಲೆಗಳು.

ಅವಳು ಮಾತನಾಡುವುದಿಲ್ಲ. ಬರೀ ನಿಟ್ಟುಸಿರು
ಬಿಡುತ್ತಾಳೆ. ಎಲೆಗಂಟಿದ ಇರುವೆಯ ಕಾಲಗಳು
ತುಂಬ ಸ್ಮೃತಿಗಳು ಅರಳಿ, ಮಳೆ ಬಂದ ಸಂಜೆ.
ಅವಳು ಮಗುವಾದಳು ಭಾವಕೋಶದಲಿ ಅವನ
ಹಾಡು.

ವಿಷಾದದ ಅಲೆಗಳು ಅಪ್ಪಳಿಸುತ್ತಿವೆ ಅವಳ ಮುದಿ
ನದಿಯ ದಂಡೆಯ ಗುಂಟ, ಬೆಳಕಿನ ದಾರಿ ದಾಟಿ,
ಒಣಗಿದ ಪಾಚಿಯ ಬಂಡೆಯಂತೆ ಮಸುಕಾಗಿ,
ಒಂದಾಗಿ ಹಣ್ಣಾಗಿದ್ದಾಳೆ ಅನುಭವದ ಕುಲುಮೆಯಲಿ.

ಮನಕ್ಕೆ ಅಂಟಿದ ಸುವಾಸನೆಗಳ ಮಧುರ ನೆನಪು,
ಅವಳ ಆಳದಲಿ ಕೆಂಪಾಗಿ ಹವಳದ ಹರಳುಗಳು,
ಚಿಕ್ಕೀ ಇಲ್ಲದ ಅವಳ ಬಳೆಗಳಿಗೆ ಚಂದ್ರ ಬಿಂಬ,
ಕತ್ತಲ ಸುರಂಗದಲಿ ಹುಡುಕುತ್ತಿದ್ದಾಳೆ ಕಿರಣಗಳ.

ದುಃಖದ ಸಂಜೆಯ ಖಾಲಿ ಆಕಾಶದಲಿ, ಅವಳ
ಮೊಮ್ಮಗಳು ಚಕ್ಕೀ ಹೊಳಪು ಮೂಡಿಸುತ್ತಿದ್ದಾಳೆ.
ಹಕ್ಕಿಯಾಗಿ ಹಾರಾಡಿ ಅಂಗಳದ ತುಂಬ ಬಣ್ಣ
ಬಣ್ಣ ಚಿಟ್ಟೆ ಹರಿದಾಡಿ ಅವಳ ಬೊಚ್ಚುಬಾಯಿ
ನಗೆಬಿರಿಯಿತು. ಅವಳೀಗ ಹಸಿ ಜೋಳದ ತೆನೆಯ
ಹಾಲು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...