ಕಣ್ಣು ಮುಚ್ಚಾಟ!


ಅಜ್ಜ ಕಣ್ಣು ಮುಚ್ಚಿ ಬಿಟ್ಟ!
ಕೈಯ ಹಿಡಿದು ಕೇಳಿಬಿಟ್ಟ!


“ಇವಳಬಿಟ್ಟು ಇವಳುಯಾರು?
ಇವನಬಿಟ್ಟು ಇವನುಯಾರು?”


ಇವಳುಗಂಗೆ, ಇವಳುಗೌರಿ!
ಬ್ರಹ್ಮ, ವಿಷ್ಣು, ರುದ್ರರಿವರು!


“ಹೋಗೆ ಗಂಗಿ, ಹೋಗೆ ಗೌರಿ!
ಹೋಗೊ ಬ್ರಹ್ಮ, ವಿಷ್ಣು, ರುದ್ರ!”


“ಬಿಟ್ಟಿ, ಬಿಟ್ಟೆ, ಬೆಳಗು ಆಯ್ತು!
ತಟ್ಟಿ ಮನೆಯು ಹಾಳು ಆಯ್ತು!”


“ಹಾಳುಗೋಡೆ ದೆವ್ವ ಬಂತು!”
ಅಯ್ಯೊ ಅವರ ಹುಡುಕಲೆಂತು?


ಗಂಗೆಯಿಲ್ಲ, ಗೌರಿಯಿಲ್ಲ!
ಬ್ರಹ್ಮ, ವಿಷ್ಣು, ರುದ್ರರಿಲ್ಲ!


ವನದೊಳಿಲ್ಲ, ಮನೆಯೊಳಿಲ್ಲ!
ಸ್ವರ್ಗ ನರಕದೊಳಗು ಇಲ್ಲ!


ಹೆಣ್ಣಿನಾಟವಾಡಬಂದೆ!
ಮನೆಯ ಕೆಲಸ ಮರೆತು ನಿಂದೆ!

೧೦
ದೇವರನ್ನು ಹುಡುಕ ಹೋದೆ!
ಗಂಡು ಹುಡುಗ `ಹೆಣ್ಣು’ ಆದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಂಬೆ
Next post ವಚನ ವಿಚಾರ – ಇಲ್ಲೇ ಇದ್ದಾರೆ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys