ಅರಳಿದ ಸಂಜೆ

ಈ ಮೌನ ಸಂಜೆ ಬೀದಿಯಲ್ಲಿ ಹೊರಟಿವೆ
ಇರುವೆಗಳ ಮೆರವಣಿಗೆ, ಮರದ ಕೆಳಗೆ,
ಒಳಗೆ ಪೋರ ಚೆಂಡು ಹುಡುಕುತ್ತಿದ್ದಾನೆ,
ಮತ್ತೆ ಚಿಟ್ಟೆ ಹರಿದಾಡದೇ ಕುಳಿತಿದೆ ಹೂವಿನ ಮೇಲೆ.

ಖಾಲಿ ಹಾಳಿಯಲಿ ಅರಳಿವೆ ಕವಿಯ ನೀಲಿ ಅಕ್ಷರಗಳು,
ಮುಗಿಲ ತುಂಬ ಬೆಳ್ಳಕ್ಕಿ ಸಾಲು ಬುದ್ಧ ಗಯಾಕ್ಕೆ ಹಾರಿವೆ,
ರೂಹುಗಳ ಒಡಲಲ್ಲಿ ಅರಿಳಿದ ಪರಿಮಳದ ಅನ್ನ,
ಜೋಲಿಯಲಿ ಕನಸು ಕಂಗಳ ಕಂದನ ಸಂಜೆ ನಿದ್ದೆ.

ತಣ್ಣಗೆ ಹರಿಯುತ್ತಿದೆ ನದಿ. ಮೀನುಗಳ ಒಡಲು,
ಶರತ್ಕಾಲದ ತುಸು ಹಳದಿ ಎಲೆ ಎದುರಿದೆ ನಿರಾಳವಾಗಿ,
ಆಗಸದ ತುಂಬ ನೆನಪುಗಳ ಚುಕ್ಕಿ ಚಂದ್ರಮ ಅರಳುವಾಗ,
ಅಮ್ಮ ದೇವರ ಮುಂದೆ ನೀಲಾಂಜನ ಹಚ್ಚಿದಾಳೆ.

ಸ್ಪರ್ಶಕ್ಕಾಗಿ ಕಾದ ಸಂಜೆಯ ನೆರಳು ಬರೆದ ಅಕ್ಷರಗಳ,
ತಬ್ಬಿಕೊಂಡಿವೆ ಜಗದ ಜನರ ಬೆವರಿನ ನಿಟ್ಟುಸಿರು.
ಸಾವಿರ ಕವನಗಳ ಬೇರು ಮೌನಗರ್ಭದಲ್ಲಿ ಮೊಳೆತು,
ಸಂಜೆ ಚಂದ್ರ ಉದಯಿಸುತ್ತಾನೆ ಹೊಸ ಪ್ರತಿಮೆಗಳ ಹೊತ್ತು.

ಮರದಲ್ಲಿ ಹೂವು ಅರಳಿ ಕಂಪ ತೇಲಿದ ಕವನ,
ಸುಮ್ಮನೆ ಒಂದು ಖುಷಿಯ ಚಿಲುಮೆಯ ಕಿಡಿ.
ಸುಖದಲ್ಲಿ ಮಿಂದವರ, ದುಃಖದಲ್ಲಿ ಬಳಲಿದವರ,
ರಾತ್ರಿಯ ಕನಸುಗಳು ತೊಳೆಯುತ್ತವೆ. ಮತ್ತೆ ಶುಭ್ರ
ಮುಂಜಾವಿಗೆ ಕಾದಿವೆ ಕಣ್ಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಧ
Next post ಬೀಳ್ದ ಕುಸುಮ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…