Home / ಕವನ / ಕವಿತೆ / ಅರಳಿದ ಸಂಜೆ

ಅರಳಿದ ಸಂಜೆ

ಈ ಮೌನ ಸಂಜೆ ಬೀದಿಯಲ್ಲಿ ಹೊರಟಿವೆ
ಇರುವೆಗಳ ಮೆರವಣಿಗೆ, ಮರದ ಕೆಳಗೆ,
ಒಳಗೆ ಪೋರ ಚೆಂಡು ಹುಡುಕುತ್ತಿದ್ದಾನೆ,
ಮತ್ತೆ ಚಿಟ್ಟೆ ಹರಿದಾಡದೇ ಕುಳಿತಿದೆ ಹೂವಿನ ಮೇಲೆ.

ಖಾಲಿ ಹಾಳಿಯಲಿ ಅರಳಿವೆ ಕವಿಯ ನೀಲಿ ಅಕ್ಷರಗಳು,
ಮುಗಿಲ ತುಂಬ ಬೆಳ್ಳಕ್ಕಿ ಸಾಲು ಬುದ್ಧ ಗಯಾಕ್ಕೆ ಹಾರಿವೆ,
ರೂಹುಗಳ ಒಡಲಲ್ಲಿ ಅರಿಳಿದ ಪರಿಮಳದ ಅನ್ನ,
ಜೋಲಿಯಲಿ ಕನಸು ಕಂಗಳ ಕಂದನ ಸಂಜೆ ನಿದ್ದೆ.

ತಣ್ಣಗೆ ಹರಿಯುತ್ತಿದೆ ನದಿ. ಮೀನುಗಳ ಒಡಲು,
ಶರತ್ಕಾಲದ ತುಸು ಹಳದಿ ಎಲೆ ಎದುರಿದೆ ನಿರಾಳವಾಗಿ,
ಆಗಸದ ತುಂಬ ನೆನಪುಗಳ ಚುಕ್ಕಿ ಚಂದ್ರಮ ಅರಳುವಾಗ,
ಅಮ್ಮ ದೇವರ ಮುಂದೆ ನೀಲಾಂಜನ ಹಚ್ಚಿದಾಳೆ.

ಸ್ಪರ್ಶಕ್ಕಾಗಿ ಕಾದ ಸಂಜೆಯ ನೆರಳು ಬರೆದ ಅಕ್ಷರಗಳ,
ತಬ್ಬಿಕೊಂಡಿವೆ ಜಗದ ಜನರ ಬೆವರಿನ ನಿಟ್ಟುಸಿರು.
ಸಾವಿರ ಕವನಗಳ ಬೇರು ಮೌನಗರ್ಭದಲ್ಲಿ ಮೊಳೆತು,
ಸಂಜೆ ಚಂದ್ರ ಉದಯಿಸುತ್ತಾನೆ ಹೊಸ ಪ್ರತಿಮೆಗಳ ಹೊತ್ತು.

ಮರದಲ್ಲಿ ಹೂವು ಅರಳಿ ಕಂಪ ತೇಲಿದ ಕವನ,
ಸುಮ್ಮನೆ ಒಂದು ಖುಷಿಯ ಚಿಲುಮೆಯ ಕಿಡಿ.
ಸುಖದಲ್ಲಿ ಮಿಂದವರ, ದುಃಖದಲ್ಲಿ ಬಳಲಿದವರ,
ರಾತ್ರಿಯ ಕನಸುಗಳು ತೊಳೆಯುತ್ತವೆ. ಮತ್ತೆ ಶುಭ್ರ
ಮುಂಜಾವಿಗೆ ಕಾದಿವೆ ಕಣ್ಗಳು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...