ಶ್ರಾವಣ

ಶ್ರಾವಣದ ಗುಬ್ಬಿ ಮಳೆಯ ನಡುವೆ
ಆಗಾಗ ಬೀಸುವ ತಂಗಾಳಿ, ಮಲ್ಲಿಗೆ
ಬಿಳಿ ನಕ್ಷತ್ರಗಳಂತೆ ಬಳ್ಳಿ ತುಂಬ ಹರಡಿ
ಓಲಾಡಿದೆ, ಒಳಗೆ ಪುಟ್ಟ ಗೌರಿ ಅಲಂಕಾರವಾಗಿ
ಕುಳಿತಿದ್ದಾಳೆ. ಅಮ್ಮನ ಕೈಗಳಿಗೆ ಹೊಸ ಚಿಕ್ಕೀ
ಬಳೆ ಕಳೆ ಕೊಟ್ಟಿದೆ. ಅವನ ನೆನಪಲಿ ಅವಳ
ಅರಸಿಕ ಕುಂಕುಮ ಏರಿಸಿಕೊಂಡಿದ್ದಾಳೆ.

ಹಸಿರು ಬಸಿರು ಒಡಲು ತುಂಬ ಸಿರಿಗೌರಿಯ
ಅಂದ ಚಂದ, ಭಾರವಾದ ಒಡಲು ಹೊತ್ತ
ಪ್ರಥಾ, ಜಡೆಯ ತುಂಬ ಹೂಗಳು ಅರಳಿ
ಬಸುರಿ ಬಯಕೆ ಜಗದೊಳು, ನದಿ ಹರಿದ
ಬಯಲ ತುಂಬ ಆರತಿ ಆಚರಣೆಗಳು
ಅವನ ಪ್ರೇಮ ಅವಳ ಒಡಲ ತುಂಬಿದೆ.

ಆನಂದದ ಹರವು ಉಕ್ಕಿ, ಒಳಗೊಳಗೆ
ಚಿಗುರಿ ಚಿಮ್ಮುವ ಹಸಿರು ಜೀವ ಜಲ,
ಒಲಿದ ಮನಸ್ಸುಗಳ ಸಮ್ಮೋಹನ ನೆಲ,
ಬಾನು ಹಾಡಿದ ಅಮೃತರಾಗ, ಎದೆ ತುಂಬ
ಹಾಲು ಸ್ಪುರಿಸುವ ಭಾವ ಒಡಲೊಳು,
ಬೆಳಕಿನ ಅಕ್ಕರೆಯ ಪ್ರೀತಿಯ ರೂಪವತಿ ಕವಿತಾ.

ನಾದ-ನೀನಾದ ಶಬ್ದರೂಪಗಳ ರೂಪಂಗಳ
ಬರೆದ ಒಡಲು ತುಂಬದ ಹಸಿರು, ಮಥಿಸಿ
ಒಲವಾದ ಬದುಕು, ಅರಳಿದ ಶ್ರಾವಣದ
ಸಂಜೆ, ಸಂತಳಾದ ಕವಿತಾ ಬೆಳಕ ಹಿಡಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಎಂಬ ಹೂದೋಟದಲ್ಲಿ
Next post ತಾಳೆಯ ಮರದಡಿ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…