Home / ಕವನ / ಕವಿತೆ / ಶ್ರಾವಣ

ಶ್ರಾವಣ

ಶ್ರಾವಣದ ಗುಬ್ಬಿ ಮಳೆಯ ನಡುವೆ
ಆಗಾಗ ಬೀಸುವ ತಂಗಾಳಿ, ಮಲ್ಲಿಗೆ
ಬಿಳಿ ನಕ್ಷತ್ರಗಳಂತೆ ಬಳ್ಳಿ ತುಂಬ ಹರಡಿ
ಓಲಾಡಿದೆ, ಒಳಗೆ ಪುಟ್ಟ ಗೌರಿ ಅಲಂಕಾರವಾಗಿ
ಕುಳಿತಿದ್ದಾಳೆ. ಅಮ್ಮನ ಕೈಗಳಿಗೆ ಹೊಸ ಚಿಕ್ಕೀ
ಬಳೆ ಕಳೆ ಕೊಟ್ಟಿದೆ. ಅವನ ನೆನಪಲಿ ಅವಳ
ಅರಸಿಕ ಕುಂಕುಮ ಏರಿಸಿಕೊಂಡಿದ್ದಾಳೆ.

ಹಸಿರು ಬಸಿರು ಒಡಲು ತುಂಬ ಸಿರಿಗೌರಿಯ
ಅಂದ ಚಂದ, ಭಾರವಾದ ಒಡಲು ಹೊತ್ತ
ಪ್ರಥಾ, ಜಡೆಯ ತುಂಬ ಹೂಗಳು ಅರಳಿ
ಬಸುರಿ ಬಯಕೆ ಜಗದೊಳು, ನದಿ ಹರಿದ
ಬಯಲ ತುಂಬ ಆರತಿ ಆಚರಣೆಗಳು
ಅವನ ಪ್ರೇಮ ಅವಳ ಒಡಲ ತುಂಬಿದೆ.

ಆನಂದದ ಹರವು ಉಕ್ಕಿ, ಒಳಗೊಳಗೆ
ಚಿಗುರಿ ಚಿಮ್ಮುವ ಹಸಿರು ಜೀವ ಜಲ,
ಒಲಿದ ಮನಸ್ಸುಗಳ ಸಮ್ಮೋಹನ ನೆಲ,
ಬಾನು ಹಾಡಿದ ಅಮೃತರಾಗ, ಎದೆ ತುಂಬ
ಹಾಲು ಸ್ಪುರಿಸುವ ಭಾವ ಒಡಲೊಳು,
ಬೆಳಕಿನ ಅಕ್ಕರೆಯ ಪ್ರೀತಿಯ ರೂಪವತಿ ಕವಿತಾ.

ನಾದ-ನೀನಾದ ಶಬ್ದರೂಪಗಳ ರೂಪಂಗಳ
ಬರೆದ ಒಡಲು ತುಂಬದ ಹಸಿರು, ಮಥಿಸಿ
ಒಲವಾದ ಬದುಕು, ಅರಳಿದ ಶ್ರಾವಣದ
ಸಂಜೆ, ಸಂತಳಾದ ಕವಿತಾ ಬೆಳಕ ಹಿಡಿದಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...