ಪ್ರೀತಿ ಎಂಬ ಹೂದೋಟದಲ್ಲಿ

ಪ್ರೀತಿ ಎಂಬ ಹೂದೋಟದಲ್ಲಿ
ನನ್ನ ಭಾವನೆಗಳ ಎಳೆ‍ಎಳೆಯಲ್ಲಿ
ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ
ನನ್ನ ಹೂವುಗಳು ಅರಳಿದವು

ಧನ್ಯವಾದ ಅವನಿಗೆ ಅವನು
ನೀಡಿದ ಚೈತನ್ಯಕೆ
ನಮಿಸುವೆನು ಸದಾ ಅವನ ದಿವ್ಯ
ಚರಣಕೆ ಅವನ ಕೃಪೆಯು
ಇರಲಿ ನಮ್ಮ ಬಾಳಿಗೆ

ರವಿಯು ಮರೆಯಾಗಿ ಚಂದಿರ
ಬರಲು ನನ್ನ ಹೂಗಳು ಮಂದಹಾಸ
ಬೀರಲು ತಣಿವುದೆನ್ನ ಮನವು
ಜೋಗುಳ ಹಾಡಿಗೆ ಕಂದ ಕಿಲಕಿಲನೆ ನಗಲು
ಧನ್ಯವಾದ ಅವನಿತೆ ಅವನು ನೀಡಿದ ಅನುಬಂಧಕೆ

ಜೀವ ಜೀವ ಬೆರೆವ ಭಾವಕೆ
ಅವನ ಕೃಪೆಯು ಇರಲಿ ಸದಾ
ನಮ್ಮ ಬದುಕಿಗೆ ನಮಿಸುವೆನು
ಅವನ ದಿವ್ಯ ಚರಣಕೆ

ಜಗವನು ಬೆಳಗುವ ರವಿ
ಚಂದಿರ ತಾರಾ ಬಾನು
ಸೃಷ್ಟಿಸಿದ ಪರಂಜ್ಯೋತಿಗೆ
ನಮಿಸುವೆನು ಸದಾ ಅವನ
ದಿವ್ಯ ಚರಣಕೆ

ಪ್ರಕೃತಿ ಪುರುಷರಿಹರು
ವಿಶ್ವ ಚೈತನ್ಯಕೆ ಜೀವ
ಚಕ್ರವಿಹುದು ಯುಗ ಯುಗಕೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿವರ್‍ತನೆ
Next post ಶ್ರಾವಣ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…