ಪ್ರೀತಿ ಎಂಬ ಹೂದೋಟದಲ್ಲಿ

ಪ್ರೀತಿ ಎಂಬ ಹೂದೋಟದಲ್ಲಿ
ನನ್ನ ಭಾವನೆಗಳ ಎಳೆ‍ಎಳೆಯಲ್ಲಿ
ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ
ನನ್ನ ಹೂವುಗಳು ಅರಳಿದವು

ಧನ್ಯವಾದ ಅವನಿಗೆ ಅವನು
ನೀಡಿದ ಚೈತನ್ಯಕೆ
ನಮಿಸುವೆನು ಸದಾ ಅವನ ದಿವ್ಯ
ಚರಣಕೆ ಅವನ ಕೃಪೆಯು
ಇರಲಿ ನಮ್ಮ ಬಾಳಿಗೆ

ರವಿಯು ಮರೆಯಾಗಿ ಚಂದಿರ
ಬರಲು ನನ್ನ ಹೂಗಳು ಮಂದಹಾಸ
ಬೀರಲು ತಣಿವುದೆನ್ನ ಮನವು
ಜೋಗುಳ ಹಾಡಿಗೆ ಕಂದ ಕಿಲಕಿಲನೆ ನಗಲು
ಧನ್ಯವಾದ ಅವನಿತೆ ಅವನು ನೀಡಿದ ಅನುಬಂಧಕೆ

ಜೀವ ಜೀವ ಬೆರೆವ ಭಾವಕೆ
ಅವನ ಕೃಪೆಯು ಇರಲಿ ಸದಾ
ನಮ್ಮ ಬದುಕಿಗೆ ನಮಿಸುವೆನು
ಅವನ ದಿವ್ಯ ಚರಣಕೆ

ಜಗವನು ಬೆಳಗುವ ರವಿ
ಚಂದಿರ ತಾರಾ ಬಾನು
ಸೃಷ್ಟಿಸಿದ ಪರಂಜ್ಯೋತಿಗೆ
ನಮಿಸುವೆನು ಸದಾ ಅವನ
ದಿವ್ಯ ಚರಣಕೆ

ಪ್ರಕೃತಿ ಪುರುಷರಿಹರು
ವಿಶ್ವ ಚೈತನ್ಯಕೆ ಜೀವ
ಚಕ್ರವಿಹುದು ಯುಗ ಯುಗಕೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿವರ್‍ತನೆ
Next post ಶ್ರಾವಣ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys