ಪ್ರೀತಿ ಎಂಬ ಹೂದೋಟದಲ್ಲಿ

ಪ್ರೀತಿ ಎಂಬ ಹೂದೋಟದಲ್ಲಿ
ನನ್ನ ಭಾವನೆಗಳ ಎಳೆ‍ಎಳೆಯಲ್ಲಿ
ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ
ನನ್ನ ಹೂವುಗಳು ಅರಳಿದವು

ಧನ್ಯವಾದ ಅವನಿಗೆ ಅವನು
ನೀಡಿದ ಚೈತನ್ಯಕೆ
ನಮಿಸುವೆನು ಸದಾ ಅವನ ದಿವ್ಯ
ಚರಣಕೆ ಅವನ ಕೃಪೆಯು
ಇರಲಿ ನಮ್ಮ ಬಾಳಿಗೆ

ರವಿಯು ಮರೆಯಾಗಿ ಚಂದಿರ
ಬರಲು ನನ್ನ ಹೂಗಳು ಮಂದಹಾಸ
ಬೀರಲು ತಣಿವುದೆನ್ನ ಮನವು
ಜೋಗುಳ ಹಾಡಿಗೆ ಕಂದ ಕಿಲಕಿಲನೆ ನಗಲು
ಧನ್ಯವಾದ ಅವನಿತೆ ಅವನು ನೀಡಿದ ಅನುಬಂಧಕೆ

ಜೀವ ಜೀವ ಬೆರೆವ ಭಾವಕೆ
ಅವನ ಕೃಪೆಯು ಇರಲಿ ಸದಾ
ನಮ್ಮ ಬದುಕಿಗೆ ನಮಿಸುವೆನು
ಅವನ ದಿವ್ಯ ಚರಣಕೆ

ಜಗವನು ಬೆಳಗುವ ರವಿ
ಚಂದಿರ ತಾರಾ ಬಾನು
ಸೃಷ್ಟಿಸಿದ ಪರಂಜ್ಯೋತಿಗೆ
ನಮಿಸುವೆನು ಸದಾ ಅವನ
ದಿವ್ಯ ಚರಣಕೆ

ಪ್ರಕೃತಿ ಪುರುಷರಿಹರು
ವಿಶ್ವ ಚೈತನ್ಯಕೆ ಜೀವ
ಚಕ್ರವಿಹುದು ಯುಗ ಯುಗಕೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿವರ್‍ತನೆ
Next post ಶ್ರಾವಣ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…