ಪರಿವರ್‍ತನೆ

ಗ್ರೀಷ್ಮ ಋತು
ತಾಪದ ಪ್ರಖರತೆಯ ಪ್ರತೀಕ
ಜಗದ ಜೀವಿಗಳಿಗೆ ಬೇಕ
ಮರಗಿಡ ಬಳ್ಳಿಗಳಾಶ್ರಯ

ದಾಹವ ನೀಗಿಸಿಕೊಳ್ಳಲು
ಸರ್‍ಪದ ಹೆಡೆಯ ನೆರಳಲಿ
ಕಪ್ಪೆಯೊಂದು ವಿರಮಿಸಿದಂತೆ
ಶತೃಮಿತ್ರರೊಂದಾಗುವರು

ಇದುವೇ ಗ್ರೀಷ್ಮನ ಪ್ರಭಾವ
ಮಾವು ಬೇವು ಚಿಗುರೊಡೆದು
ಉಸಿರಿಗೆ ಉಸಿರು
ಬೇವು ಬೆಲ್ಲಗಳ ಸಂಮಿಶ್ರಣ

ಸುಖ ದುಃಖಗಳ ದುಮ್ಮಾನ
ಬದುಕಿನ ಚಿತ್ರಣವೇ
ಚೈತ್ರದ ಜಾಣ್ಮೆಯ ಸೊಬಗು
ಹೊಂಗನಸಿನಲಿ ಹೊಸವರ್‍ಷ
ಹರುಷ ತರಲೆಂದು
ಬರುತಿದೆ ಪ್ರತಿಯುಗಾದಿ

ಚೈತ್ರದ ಗಾಳಿ ಬೀಸುತಿರಲು
ನಿಯಮಾವಳಿಗಳೆಲ್ಲ ಗಾಳಿಗೆ ತೂರುತಿರಲು
ಹಣ್ಣೆಲೆ ಉದುರಿ ತರಗೆಲೆ ಹಾರುತಿರಲು
ಚಿಗುರು ಸಂತಸದಿ ಇಣುಕುತಿರಲು

ಪ್ರೀತಿಯ ಆಯ್ಕೆ
ನನಗೂ ನಿನಗೂ
ಎದಕೂ ಉಂಟು

ಶೃಂಗಾರ ಮಾಸವೇ ಹೀಗೆ
ವಸಂತದ ವೈಭವದಲಿ
ಎದುರಾಳಿಗಳೇ ಇಲ್ಲದ ಮನಸು
ಹಳತು ಹೊಸತು ನೆಪಗಳು
ನಿಲ್ಲುವವು ಅಂಚಿನಲಿ ಸುರುಳಿಬಿಚ್ಚಿ
*****
ಸಾಗರದ ವಾರಪತ್ರಿಕೆ ‘ಸಾಗರ ಸುತ್ತ’ ವಿಶೇಷಾಂಕದಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೭
Next post ಪ್ರೀತಿ ಎಂಬ ಹೂದೋಟದಲ್ಲಿ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…