ಪರಿವರ್‍ತನೆ

ಗ್ರೀಷ್ಮ ಋತು
ತಾಪದ ಪ್ರಖರತೆಯ ಪ್ರತೀಕ
ಜಗದ ಜೀವಿಗಳಿಗೆ ಬೇಕ
ಮರಗಿಡ ಬಳ್ಳಿಗಳಾಶ್ರಯ

ದಾಹವ ನೀಗಿಸಿಕೊಳ್ಳಲು
ಸರ್‍ಪದ ಹೆಡೆಯ ನೆರಳಲಿ
ಕಪ್ಪೆಯೊಂದು ವಿರಮಿಸಿದಂತೆ
ಶತೃಮಿತ್ರರೊಂದಾಗುವರು

ಇದುವೇ ಗ್ರೀಷ್ಮನ ಪ್ರಭಾವ
ಮಾವು ಬೇವು ಚಿಗುರೊಡೆದು
ಉಸಿರಿಗೆ ಉಸಿರು
ಬೇವು ಬೆಲ್ಲಗಳ ಸಂಮಿಶ್ರಣ

ಸುಖ ದುಃಖಗಳ ದುಮ್ಮಾನ
ಬದುಕಿನ ಚಿತ್ರಣವೇ
ಚೈತ್ರದ ಜಾಣ್ಮೆಯ ಸೊಬಗು
ಹೊಂಗನಸಿನಲಿ ಹೊಸವರ್‍ಷ
ಹರುಷ ತರಲೆಂದು
ಬರುತಿದೆ ಪ್ರತಿಯುಗಾದಿ

ಚೈತ್ರದ ಗಾಳಿ ಬೀಸುತಿರಲು
ನಿಯಮಾವಳಿಗಳೆಲ್ಲ ಗಾಳಿಗೆ ತೂರುತಿರಲು
ಹಣ್ಣೆಲೆ ಉದುರಿ ತರಗೆಲೆ ಹಾರುತಿರಲು
ಚಿಗುರು ಸಂತಸದಿ ಇಣುಕುತಿರಲು

ಪ್ರೀತಿಯ ಆಯ್ಕೆ
ನನಗೂ ನಿನಗೂ
ಎದಕೂ ಉಂಟು

ಶೃಂಗಾರ ಮಾಸವೇ ಹೀಗೆ
ವಸಂತದ ವೈಭವದಲಿ
ಎದುರಾಳಿಗಳೇ ಇಲ್ಲದ ಮನಸು
ಹಳತು ಹೊಸತು ನೆಪಗಳು
ನಿಲ್ಲುವವು ಅಂಚಿನಲಿ ಸುರುಳಿಬಿಚ್ಚಿ
*****
ಸಾಗರದ ವಾರಪತ್ರಿಕೆ ‘ಸಾಗರ ಸುತ್ತ’ ವಿಶೇಷಾಂಕದಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೭
Next post ಪ್ರೀತಿ ಎಂಬ ಹೂದೋಟದಲ್ಲಿ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys