Home / ಕವನ / ಕವಿತೆ / ಅತೃಪ್ತಿ

ಅತೃಪ್ತಿ

ಎಲ್ಲಿದೆಲ್ಲಿದೆ ತಣಿವು ? ಏತರಲ್ಲಿದೆ ತಣಿವು ?
ಎಲ್ಲಿಯೆಲ್ಲಿಯು ಕಾಣಲೊಲ್ಲದಾ ತಣಿವು!

ಕುಸುರುಕುಸುರಿನ ಚಿನ್ನ -ರನ್ನ ದೊಡವೆಗಳಿಟ್ಟು
ಹೊಸ ಮಿರುಗಿನಾ ಸೀರೆ ಬಣ್ಣಗುಪ್ಪಸ ತೊಟ್ಟು
ಸಾಕುಸಾಕಿನ್ನೆಂಬ ತಣಿವ ಪಡೆಯುವರು,
ಆ ಕೆಳದಿಯರು ನಕ್ಕು ನಲಿದಾಡುತಿಹರು.

ಇದು ಏನು? ನನ್ನದೀ ಎದೆಯಾಟವಚ್ಚರಿಯು!
ಒಡವೆಯುಡುಗೆಯನೊಲಿದು ಪಡೆಯುವೆನು, ಆದರೆಯು
ಒಡವೆ ಬಗೆದುಗುಡವನು ದೂಡಲಿಲ್ಲ!
ಉಡುಗೆ ತಣಿವನು ನಸುವು ನೀಡಲಿಲ್ಲ!

ಸರಿವರಯದವರೆಲ್ಲ ತೆರತೆರದ-ಹುರುಳಿರುವ-
ಅರಳುಗಳ ನುಡಿಮುಡಿದು ಹರುಷದಲಿ ಹಿಗ್ಗುವರು.
ಹಾರಯಿಸಿ ಹಾರಯಿಸಿ ಹೂಮುಡಿಯೆ ನಾನು,
ತೀರಲಿಲ್ಲವತೃಪ್ತಿ, ಹೇರಿತದು ಇನ್ನೂ!

ಕೊಳಲೂದಿ ವೀಣೆ ತಂಬೂರಿಗಳ ಬಾಜಿಸುತ
ಗೆಳತಿಯರು ಸುಲಭದಲಿ ಗಳಿಸುವರು ತೃಪ್ತಿಯನು;
ಕೊಳಲುಲಿಯು ಬಗೆದುಗುಡ ದೊಡಲಿಲ್ಲ!
ವೀಣೆ ತಣಿವನು ನಸುವು ನೀಡಲಿಲ್ಲ!

ಅನುಕೂಲದೈವರಾ ವನಿತೆಯರು, ನಾ ದೈವ-
ದನುನಯವ ಕಳೆದುಕೊಂಡವಳು; ದಿಟವೇ ದೇವ?
ಅಲ್ಲವಿಂತಿದು! ಅವರದದೆ ಸುಖದ ಕೊನೆಯು;
ಎಲ್ಲಿದೆಯೊ ದೂರ ನನ್ನಾ ಸುಖದ ಮನೆಯು..!

ಆ ಸುಖದ ಮನೆಯನೊಂದಿಸುವ ಒಡವೆಯ ಬಯಸಿ
ಆಶೆ-ಸೊನ್ನರತಿ ಬಗೆಯೊಳಗೆ ಬೆಂಕೆಯನಿರಿಸಿ
ಊದಿ ಉರಿಮಾಡಿ ಏನನೋ ಕಾಸುತಿಹಳು,
ಏತರಿಂದಲೊ ಯಾವುದನೊ ಹಣಿಯುತಿಹಳು.
* * * *
ಮನವ ಮನೆಮಾಡಿರುವ ದುಗುಡವನು ತೆಗೆದು
ತಣಿವನೀವಾ ಒಡವೆ ದೊರೆವುದೆನಗೆಂದು?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...