ಒಮ್ಮೆ ಪ್ರೀತಿಯಲಿ

ಒಮ್ಮೆ ಪ್ರೀತಿಯಲಿ
ಸೋತರೇನು,
ಮೋಸ ಹೋದನೆಂದೇಕೆ
ಕೊರಗುವೆ ನೀನು|
ನವಚೈತನ್ಯವ ತಂದುಕೊ
ಸೋತು ಸೊರಗಿ ನೀ ಮಂಕಾಗದಿರು|
ಹೊಸ ಜೀವನವ ನೋಡು
ಹಳೆಯದನ್ನೆಲ್ಲಾ ಮರೆತುಬಿಡು||

ಏಕೆ? ಪ್ರೇಮ
ಫಲಿಸಲಿಲ್ಲವೆಂದು ಯೋಚಿಸು|
ನಿನ್ನ ಪ್ರೀತಿಸುವವರ
ನೀ ಪ್ರೀತಿಸೆ ಸ್ವಾಗತಿಸು|
ಪ್ರೇಮ ಕುರುಡು ಸತ್ಯ, ಆದರೆ
ಕುರುಡು ಪ್ರೇಮ ಸತ್ಯವಲ್ಲ||

ಪ್ರೀತಿ ಎಂದರೆ ಬರೀ
ಹದಿಹರೆಯದಲಿ ಬಂದು
ಹೋಗುವ ಹೆಣ್ಣು ಗಂಡಿನ
ಆಕರ್ಷಣೆಯೊಂದೇ ಪ್ರೀತಿಯಲ್ಲ|
ಸ್ನೇಹಿತರ ಪ್ರೀತಿಸು
ನೆರೆಹೊರೆಯವರ ಪ್ರೀತಿಸು
ಮನುಕುಲ, ಪ್ರಾಣಿಸಂಕುಲವ ಪ್ರೀತಿಸು
ಪ್ರಕೃತಿ ಮಾತೆಯ ಪ್ರೀತಿಸು||

ತಿರಸ್ಕಕರಿಸಿದನು ಬಿಟ್ಟು ಬಿಡು
ಪುರಸ್ಕರಿಸುವುದನು ನೋಡು|
ಅಕ್ಕ ತಂಗಿಯರ ಪ್ರೀತಿಸು
ಒಳ್ಳೆಯ ಪುಸ್ತಕ,
ಒಳ್ಳೆಯ ಸಂಗೀತವನು ಪ್ರೀತಿಸು|
ಒಳ್ಳೆಯದನ್ನೆಲ್ಲಾ ಪ್ರೀತಿಸು
ಒಳ್ಳೆಯದೇ ಬೆಳೆಯುವುದು
ಒಳ್ಳೆಯದೇ ಉಳಿಯುವುದು
ಉಳಿಯುವುದನೇ ನೀ ಪ್ರೀತಿಸು
ಉಳಿಯುವುದನೇ ನೀ ಗಳಿಸು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೂರು ನೆರಳುಗಳು
Next post ಅತೃಪ್ತಿ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…