ನೂರು ನೆರಳುಗಳು

ನಕ್ಕವರೆಲ್ಲ ನನ್ನವರೆಂದು
ಮಳೆಗರೆಯಿತು ಮನಸು
ಸುತ್ತ ಮುತ್ತಿದ ಕಂಡ ಕಂಡವರಿಗೆ
ಹದವಾಯಿತು ಕನಸು

ಕಳಕಳ ಎನ್ನುವ ಕನಸಿಗೆ ಅವರು
ಅಮಲಿನ ಹಾಸಿಗೆ ಹಾಸಿದರು
ನರಳಿತು ಕನಸು ಸುಖ ಸಂತಸದಲಿ
ಮರೆತು ಹೋಯಿತು ಮಳೆ ಮನಸು

ಬಸಿರಿನ ಕನಸಿಗೆ ಹುಟ್ಟಿದ ಮಕ್ಕಳು
ನೆಟ್ಟಗಿದ್ದರೆ ತಮ್ಮವರು
ಮೂಗೊ ಕಿವುಡೊ ಕುಂಟೊ ಕುರುಡೊ
ಸೊಟ್ಟಗಿದ್ದರೆ ನನ್ನವರು

ಗಜಿಬಿಜಿ ಕೆಸರಿನ ಜನ ಜೈಲಿನಲಿ
ಹೂತ ಮನಸಿದು ಕಂಬಿ ಎಣಿಸಿದೆ
ಬಿಡುಗಡೆ ಬೇಡದೆ, ಒಳಗೇ ಸಾಯದೆ
ದುಗುಡದ ದಿನಗಳ ದಿನ್ನೆಯೇರಿದೆ

ಕಂಬಿಯ ನಡುವೆ ತೂರುವ ಬೆಳಕಿಗೆ
ಕಾಯುತ ಕಾಯುತ ಕಾಯುತ ನಿಂತೆ
ಒಬ್ಬನೆ ಎಂದು ಒಳಗಡೆ ಹುಡುಕಿದೆ
ನೂರು ನೆರಳುಗಳು ನನ್ನಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಮತೀಂದ್ರ ನಾಡಿಗರ “ದಾಂಪತ್ಯ ಗೀತ”
Next post ಒಮ್ಮೆ ಪ್ರೀತಿಯಲಿ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys