ವಿದ್ಯುತ್‌ಪುತ್ರನ ಅವತಾರ

ಸುಸಮರ್‍ಥನಾದ ವಿದ್ಯುತ್‌ ಪುತ್ರನೊಬ್ಬ ತಾನೀ ಭೂಮಿಗಿಳಿದು ಬಂದ
ಅಪ್ರತಿಮ ತ್ವರಿತಗತಿ ಅಗ್ನಿ-ಪಾದಗಳಿಂದ.
ಮಾನವನ ಮೈ ಕಟ್ಟು ಘನಗರ್‍ಜನೆಯ ತೊಟ್ಟು,
ನರಗರ್‍ಭದಲ್ಲಿ ಹುಟ್ಟಿತ್ತು ಬೆಳಕು.

ಸ್ವರ್‍ಗದತಿ ಶಾಂತಗತಿ, ಮಹಿಮೆಯಾ ಮಾಧುರ್‍ಯ, ಪರಿಶುದ್ಧರಾಗ
ಗರಿಗೊಂಡ ಬಲ ಇಳಿದು ಬಂದವಾಗ.
ಎಲ್ಲ ದೇವತೆಗಳೂ ಒಂದೆ ಮರ್‍ತ್ಯ ಶರೀರದಲ್ಲಿ ಬಾಳಿದವು
ಒಂದೇ ಹೆಸರ ತಾಳಿದವು.

ಅಗಲಗಲ ಗತಿಯ ಅಲೆ ಮಸಕು ಭೂಮಂಡಲದಿ ಬಂತು ಬಳಲಿ
ಉತ್ಫುಲ್ಲಸ್ವಪ್ನೋತ್ಥಗುಂಫಗಳಲಿ.
ಭವ್ಯತೆಯ ಕರುವಿಟ್ಟ ಹಾಗೆ ಬಾಳಾಗಿತ್ತು
ಕಡಲಗಲ ಕೈ ಕಾಲ-ಚಕ್ರ ಅಮುಕಿತ್ತು.

ಮಾನವನ ಆತ್ಮ ಮತ್ತೊಮ್ಮೆ ಪಡೆದಿತು ಬಾಳ ಸಾರಥ್ಯ
ಧೀರ ಉದ್ಧತ ದೇವದೇವತೆಗಳಾತಿಥ್ಯ.
ಪ್ರಪ್ರಭಂಜನ ಪಕ್ಷ ಉತ್‌ಕ್ಷಿಪ್ತ ವಾಯುಪಥದಲ್ಲಿ ಹಾರಿತ್ತು
ಭವ್ಯ ಆದರ್‍ಶಕ್ಕೆ ಗುರಿಯಿಟ್ಟು ಎಸೆದ ಈಟಿಯ ಹಾಗೆ ಏರಿತ್ತು.

ಡೆಂಡಣಿಸಿ ಕಳಚಿ ಬಿದ್ದವು ಪುರಾತನಾಯಸ ಕವಚ
ಗೋಡೆ ಸಿಡಿದೊಡೆದು ಬಿದ್ದಿತು ಪುರಾಣ ಪ್ರಕೃತಿ
ತರುಣತರ ಸೌಂದರ್‍ಯ, ಸುವಿಚಾರ, ಸುಪ್ರಭೆಯ ಜಗದಿ
ಹೊಕ್ಕ ದೇವನು ಮತ್ತೆ ತನ್ನ ಹೊಸತನದಿ.

ಮೂಡಿತ್ತು ದೇವವಾಣಿಯ ಸೊಲ್ಲು ಮಾನವರ ತುಟಿಯಲ್ಲು
ಹೃದಯ ಎಚ್ಚತ್ತಿತ್ತು ಮಿಂಚು ಬೆಡಗಿನ ಬಿಳಿಯ ನಸುಕುಗಳಲು
ಗಾಳಿ ಬೆಳಕಿನ ಬಟ್ಟೆ, ಉಸಿರು ಹರ್‍ಷದ ಕುಸರು
ದೇವಲೀಲೆಯ ಆಟದಂತೆ ಬಾಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಗಲಿಕೆ
Next post ವಾಗ್ದೇವಿ – ೨೮

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys