ನೇಗಿಲು

ನೆಲದ ರಸವನ ಹಿಂಡಿ ನೇಗಿಲಿನ ಮೊನೆಯಿಂದ
ಅನ್ನಮಂ ಪಡಯುವರು ಮಣ್ಣಿನಿಂದ-
ಜೋಡೆತ್ತುಗಳ ಕಟ್ಟಿ ಜೀವದೆಳೆಗಳ ತಂದು
ಲೋಕಮಂ ಸಲಹುವುದು ಮೋದದಿಂದ-
ಕೆರೆದೆಳೆದು ಸಾರಮಂ ಸಾಲಿನಲಿ ನಿಲಿಸುವುದು
ಹಸನೆಸಗಿ ಸವಿಯೂಡಿ ಸುಲಭದಿಂದ-
ತೆರೆದು ಬೇರಿಗೆ ದಾರಿ ಬೆಳೆವ ಹಾದಿಯ ತೋರಿ
ಪ್ರಾಣವೀವುದು ಜಗಕೆ ಚೆಲುವಿನಿಂದ-
ನೇಗಿಲೇ ಸಾಧನವು ಸಕಲ ಜನಕೆ
ಸಾಗಿಸಲು ಸಂಸಾರ ಮುಕ್ತಿಪಥಕೆ
ನಿರಪೇಕ್ಷೆಯಿಂ ನೆರೆದು ಧರ್‍ಮರಥಕೆ
ಕರವಿತ್ತು ನಡೆಸುವುದು ನೇಗಿಲರಕೆ-

ಧ್ಯಾನ ಧಾನ್ಯವ ಬಿತ್ತಿ ಎದೆಯ ಹಸನಂ ಗೆಯ್ದು
ಈ ನೇಗಿಲೇ ಮನವ ಹಗುರೆನಿಪುದು.
ಗಾನ ಮಾಡುವುದಿದುವೆ ಜೀವತಂತಿಯ ಮಿಡಿದು
ಪರಲೋಕ ಮಂತ್ರಗಳ ಹಾಡುತಿಹುದು
ಸರುವ ದುರಿತವ ಮರೆಸಿ ಮುಕ್ತಿಸುಧೆಯನ್ನೆರೆದು
ನರಕ ಬಾಗಿಲ ಮುಚ್ಚಿ ಸಗ್ಗ ತರೆದು
ನರಲೋಕ ಕರ್‍ಮಗಳ ಕಟ್ಟುಗಳ ಹರಿದೊಗೆದು
ಹಿರಿದೆನಿಸಿ ನೈಜಮಂ ತೋರಿಸುವುದು.
ಲೋಕಮಂ ಕಣ್ದೆರೆಸಿ ಜ್ಞಾನಯೋಗಿ
ವಾಕ್ಶುದ್ಧಿ ಗೆಯ್ವುದಿದು ಸತ್ಯಮಾಗಿ
ತ್ಯಾಗಿ ಈ ನೇಗಿಲೇ ಪರಮ ಭೋಗಿ
ನೇಗಿಲೇ ಧರೆಯಲ್ಲಿ ನಿತ್ಯ ಯೋಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಕ್ತಿ ಮಂತ್ರ
Next post ಅಂತರಾರಾಮ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys