ನೇಗಿಲು

ನೆಲದ ರಸವನ ಹಿಂಡಿ ನೇಗಿಲಿನ ಮೊನೆಯಿಂದ
ಅನ್ನಮಂ ಪಡಯುವರು ಮಣ್ಣಿನಿಂದ-
ಜೋಡೆತ್ತುಗಳ ಕಟ್ಟಿ ಜೀವದೆಳೆಗಳ ತಂದು
ಲೋಕಮಂ ಸಲಹುವುದು ಮೋದದಿಂದ-
ಕೆರೆದೆಳೆದು ಸಾರಮಂ ಸಾಲಿನಲಿ ನಿಲಿಸುವುದು
ಹಸನೆಸಗಿ ಸವಿಯೂಡಿ ಸುಲಭದಿಂದ-
ತೆರೆದು ಬೇರಿಗೆ ದಾರಿ ಬೆಳೆವ ಹಾದಿಯ ತೋರಿ
ಪ್ರಾಣವೀವುದು ಜಗಕೆ ಚೆಲುವಿನಿಂದ-
ನೇಗಿಲೇ ಸಾಧನವು ಸಕಲ ಜನಕೆ
ಸಾಗಿಸಲು ಸಂಸಾರ ಮುಕ್ತಿಪಥಕೆ
ನಿರಪೇಕ್ಷೆಯಿಂ ನೆರೆದು ಧರ್‍ಮರಥಕೆ
ಕರವಿತ್ತು ನಡೆಸುವುದು ನೇಗಿಲರಕೆ-

ಧ್ಯಾನ ಧಾನ್ಯವ ಬಿತ್ತಿ ಎದೆಯ ಹಸನಂ ಗೆಯ್ದು
ಈ ನೇಗಿಲೇ ಮನವ ಹಗುರೆನಿಪುದು.
ಗಾನ ಮಾಡುವುದಿದುವೆ ಜೀವತಂತಿಯ ಮಿಡಿದು
ಪರಲೋಕ ಮಂತ್ರಗಳ ಹಾಡುತಿಹುದು
ಸರುವ ದುರಿತವ ಮರೆಸಿ ಮುಕ್ತಿಸುಧೆಯನ್ನೆರೆದು
ನರಕ ಬಾಗಿಲ ಮುಚ್ಚಿ ಸಗ್ಗ ತರೆದು
ನರಲೋಕ ಕರ್‍ಮಗಳ ಕಟ್ಟುಗಳ ಹರಿದೊಗೆದು
ಹಿರಿದೆನಿಸಿ ನೈಜಮಂ ತೋರಿಸುವುದು.
ಲೋಕಮಂ ಕಣ್ದೆರೆಸಿ ಜ್ಞಾನಯೋಗಿ
ವಾಕ್ಶುದ್ಧಿ ಗೆಯ್ವುದಿದು ಸತ್ಯಮಾಗಿ
ತ್ಯಾಗಿ ಈ ನೇಗಿಲೇ ಪರಮ ಭೋಗಿ
ನೇಗಿಲೇ ಧರೆಯಲ್ಲಿ ನಿತ್ಯ ಯೋಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಕ್ತಿ ಮಂತ್ರ
Next post ಅಂತರಾರಾಮ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…