Home / ಕವನ / ಕವಿತೆ / ಅಂತರಾರಾಮ

ಅಂತರಾರಾಮ

ಹೃದಯದಾಕಾಶವಿದು ಅದುರಿ ಗಡ ಗದ್ದರಿಸಿ
ಪ್ರೇಮವಂಕುರಿಸಿ ಸೌರಭವು ಹಾರಿ
ಭೇದಿಸುತ ಸಪ್ತತಲ ಇಂದ್ರಚಂದ್ರರ ಲೋಕ
ಪಾರ ಅಪರಂಪಾರ ದೂರ ಸೇರಿ

ಆವ ಲೋಕವ ಕಾಣೆ-ದಿವ್ಯಜ್ಯೋತಿಯ ಕಂಡೆ
ಕಣ್ಣರಳಿ ಬಂತಾಗ ಭವ್ಯದೃಷ್ಟಿ
ಆವ ಆಶೆಯ ಪಾಶವೆಸಗಿಲ್ಲ ಬಿರುಗಾಳಿ
ಬೀಸಿ ಸೂಸಿತು ಈ ಪ್ರಕಾಶವೃಷ್ಟಿ

ನಲ್ಲನಲ್ಲೆಯ ಪ್ರೇಮ ಬಲ್ಲೆನೆಂಬುವ ಬಿರುದು
ಹದಿನಾಲ್ಕು ಲೋಕಕ್ಕೆ ತಟ್ಟಿಮುಟ್ಟಿ
ಎಲ್ಲೆಡೆಗೆ ವ್ಯಾಪಿಸಿತು ಬೆಳ್ಳಬೆಳು ಬೆಳಕಾಗಿ
ನನ್ನಲ್ಲೆ ಆ ಕಳೆಯ ಮೊಳಕೆ ಹುಟ್ಟಿ

ಉರಿದುರಿದು ಉರಿದೆದ್ದ ಆ ಊರ್‍ಮೆಯುರಿಯಲ್ಲಿ
ಒಂದಾಗಿ ಸದಾ ಸವಿಯನುಂಡೆ
ಸುರರು ಸುರಗುರು ಸೂರ್ಯಚಂದ್ರರೂ ಕಾಣದಾ
ಬೆಳಕಿನುನ್ಮಾದದಾ ಕಾಂತಿ ಕಂಡೆ

ಪ್ರೇಮದಾಚೆಯ ಊರ್‍ಮೆ ಪ್ರೇಮಕ್ಕೆ ಬೀಜವದು
ಪ್ರೇಮದಾ ಫಲವಾಗಿ ಫಲಿಸಿ ನಿಂದು
ಉಮ್ಮಳಿಸಿ ತನ್ಮಯತೆ ಪಾವಿತ್ರ್ಯ ಪರವಶತೆ
ಪರದೆಗಳ ಹರಿಹರಿದು ಸುಳಿದು ಬಂದು

ವೇದಶಾಸ್ತ್ರ ಪುರಾಣ ವರ ಕುರಾನಗಳೆಲ್ಲ
ಕುಣಿಕುಣಿದು ನನ್ನ ಊರ್‍ಮೆಯೊಳೆ ಹುಟ್ಟಿ
ಅಡಗಿಹವು ಇಡಗಿಹವು ಎಲ್ಲೆಡೆಗೆ ನುಡಿಯುವವು
ಊರ್‍ಮೆಕೂರ್‍ಮೆಯೆ ಭವ್ಯದಿವ್ಯ ಸೃಷ್ಟಿ

ಮರವು ಮತ್ಸರ ಕರಗಿ ಕಷ್ಟನಷ್ಟವು ಸುಟ್ಟು
ಭರದಿ ಭಸ್ಮಿಭೂತವಾಗಿ ಹಾರಿ
ಅರವು ಅಗಲಾಗಿ ಅದ್ಭುತದ ಅಘಟಿತ ಶಕ್ತಿ
ಹೆಡಕರಿಸಿ ಹೊಳೆದು ಕುಡಿಮಿಂಚುದೋರಿ

ಘನಸಿರಿಯ ಚಿನ್ಮಯ ಚಿದಾನಂದವನು ಕಂಡೆ
ಹೊರಮರೆದು ಒಳ ಉರ್‍ಮೆ ಕುದುರೆ ಏರಿ
ನೆನಪುದೋರಿತು ಇತ್ತ ಕನಸು ಹರಿಯಿತು ಅತ್ತ
ಹತ್ತುತಾಸಿನ ಹಿಗ್ಗು ಹಾಡನೇರಿ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...