Home / ಕವನ / ಕವಿತೆ / ಮುಕ್ತಿ ಮಂತ್ರ

ಮುಕ್ತಿ ಮಂತ್ರ

ಗಟ್ಟಿಯಾಗದೇ ಬದುಕು ದಕ್ಕದುನ್ನು
ಕೆರೆ ಬಾವಿಗಳ ಪಾಲು ಆಗದಿರು
ಹಗ್ಗದ ಉರುಳಿಗೆ
ನಿನ್ನ ಕೊರಳ ನೀಡದೇ
ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ
ಬೆಂಕಿಯ ಜ್ವಾಲೆಗೆ ದೂಡುವ
ಕೈಗಳನ್ನು ಕತ್ತರಿಸಲು
ಝಳಪಿಸುವ ಖಡ್ಗವಾಗು.
ಶತ್ರುಗಳ ಸೆಣಸಿ ನಿಲ್ಲಲು
ಆತ್ಮವಿಶ್ವಾಸದ ಆಯುಧವಾಗು,
ಏನಾದರೂ ಆಗು ಕೊನೆಗೆ
ದಹಿಸುವ ಜ್ವಾಲೆಗಳ ನಂದಿಸಲು
ಸ್ವಾತಿಯ ಮುತ್ತಿನ ಮಳೆಯಾಗು,
ಅನಂತ ಜೀವನದ ವ್ಯಥೆಗಳು
ಅಮೂಲ್ಯ ಬದುಕು ಚಿವುಟಿ
ನಿರರ್ಥಕ ನಿಟ್ಟುಸಿರಾಗದೇ
ಸಮೃದ್ಧ ನೆಲದಲ್ಲಿ
ಹಸಿರುಟ್ಟು ಬೇರು ಬಿಟ್ಟು
ಅಸ್ತಿತ್ವಕ್ಕೆ ಅರ್ಥ ನೀಡುವ
ಕಂಪ ಸೂಸುವ
ಸಂಪಿಗೆ ಮರವಾಗು,
ಬಿದ್ದ ಮಳೆಗೆ ನೆಲದ ಹಸಿಗೆ
ಧರೆಯ ಎದೆಯಲಿ ರೋಮಾಂಚನ
ಎದೆಯಲಿ ಧವನ ಚಿಗಿತು
ಮೈಮನಗಳಲ್ಲಿ ಮಿಂಚಿನ ಸಂಚಾರ
ಹೊಳೆವ ಕಾಂತಿಯ ಕಣ್ಣುಗಳಲಿ
ಆತ್ಮವಿಶ್ವಾಸದ ದೃಢ ನಿರ್ಧಾರ
ಉಕ್ಕಿ ಹರಿದಿದೆ ಜೀವಜಲ.
ಧಮನಿಗಳಲಿ ನಿರಂತರ
ಬಿಗಿದಿರುವ ನರನಾಡಿಗಳಿಗೆ
ಸ್ನೇಹದ ತಂಪು ಸಿಂಚನ
ಬದುಕಿನ ಹುಡುಕಾಟ,
ಅದೇ ಕ್ಷಣ ಮತ್ತೇ ಮತ್ತೇ
ಬದುಕು ಒಳಹೊರಗು ಹುಡುಕುತ್ತ
ಗಡಿರೇಖೆಗಳ ಮೆಟ್ಟಿ ನಿಂತು
ಬದುಕುವ ಬದುಕಿಸುವ ಪ್ರಯತ್ನ
ಆಗಲಿ ಇದುವೇ ಮುಕ್ತಿ ಮಂತ್ರ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...