ಗಟ್ಟಿಯಾಗದೇ ಬದುಕು ದಕ್ಕದುನ್ನು
ಕೆರೆ ಬಾವಿಗಳ ಪಾಲು ಆಗದಿರು
ಹಗ್ಗದ ಉರುಳಿಗೆ
ನಿನ್ನ ಕೊರಳ ನೀಡದೇ
ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ
ಬೆಂಕಿಯ ಜ್ವಾಲೆಗೆ ದೂಡುವ
ಕೈಗಳನ್ನು ಕತ್ತರಿಸಲು
ಝಳಪಿಸುವ ಖಡ್ಗವಾಗು.
ಶತ್ರುಗಳ ಸೆಣಸಿ ನಿಲ್ಲಲು
ಆತ್ಮವಿಶ್ವಾಸದ ಆಯುಧವಾಗು,
ಏನಾದರೂ ಆಗು ಕೊನೆಗೆ
ದಹಿಸುವ ಜ್ವಾಲೆಗಳ ನಂದಿಸಲು
ಸ್ವಾತಿಯ ಮುತ್ತಿನ ಮಳೆಯಾಗು,
ಅನಂತ ಜೀವನದ ವ್ಯಥೆಗಳು
ಅಮೂಲ್ಯ ಬದುಕು ಚಿವುಟಿ
ನಿರರ್ಥಕ ನಿಟ್ಟುಸಿರಾಗದೇ
ಸಮೃದ್ಧ ನೆಲದಲ್ಲಿ
ಹಸಿರುಟ್ಟು ಬೇರು ಬಿಟ್ಟು
ಅಸ್ತಿತ್ವಕ್ಕೆ ಅರ್ಥ ನೀಡುವ
ಕಂಪ ಸೂಸುವ
ಸಂಪಿಗೆ ಮರವಾಗು,
ಬಿದ್ದ ಮಳೆಗೆ ನೆಲದ ಹಸಿಗೆ
ಧರೆಯ ಎದೆಯಲಿ ರೋಮಾಂಚನ
ಎದೆಯಲಿ ಧವನ ಚಿಗಿತು
ಮೈಮನಗಳಲ್ಲಿ ಮಿಂಚಿನ ಸಂಚಾರ
ಹೊಳೆವ ಕಾಂತಿಯ ಕಣ್ಣುಗಳಲಿ
ಆತ್ಮವಿಶ್ವಾಸದ ದೃಢ ನಿರ್ಧಾರ
ಉಕ್ಕಿ ಹರಿದಿದೆ ಜೀವಜಲ.
ಧಮನಿಗಳಲಿ ನಿರಂತರ
ಬಿಗಿದಿರುವ ನರನಾಡಿಗಳಿಗೆ
ಸ್ನೇಹದ ತಂಪು ಸಿಂಚನ
ಬದುಕಿನ ಹುಡುಕಾಟ,
ಅದೇ ಕ್ಷಣ ಮತ್ತೇ ಮತ್ತೇ
ಬದುಕು ಒಳಹೊರಗು ಹುಡುಕುತ್ತ
ಗಡಿರೇಖೆಗಳ ಮೆಟ್ಟಿ ನಿಂತು
ಬದುಕುವ ಬದುಕಿಸುವ ಪ್ರಯತ್ನ
ಆಗಲಿ ಇದುವೇ ಮುಕ್ತಿ ಮಂತ್ರ
*****
Related Post
ಸಣ್ಣ ಕತೆ
-
ಇರುವುದೆಲ್ಲವ ಬಿಟ್ಟು
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…
-
ಶಾಕಿಂಗ್ ಪ್ರೇಮ ಪ್ರಕರಣ
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
-
ಮನೆ “ಮಗಳು” ಗರ್ಭಿಣಿಯಾದಾಗ
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…