ನೀನೆ ಉಪ್ಪು ಬ್ಯಾಳಿಯು

ನನ್ನತನವನು ನಿನ್ನತನದಲಿ
ಗಂಧದಂತೆ ತೇಯುವೆ
ನನ್ನ ಬದುಕಿನ ತಾಳ ತಮ್ಮಟೆ
ಗಂಟು ಮೂಟೆ ಕಟ್ಟುವೆ
ನಿನ್ನ ಪಾದಕೆ ಒಟ್ಟುವೆ

ಅಂತರಂಗದ ಹುಚ್ಚು ಆಸೆಯ
ಬಿಚ್ಚಿ ಬಿಡಿಸಿ ಚಲ್ಲುವೆ
ಕಲ್ಲು ಮಣ್ಣು ಮುಳ್ಳು ಕೊಟ್ಟು
ಹಾಲು ಬೆಣ್ಣೆ ಪಡೆಯುವೆ
ಬಾಳೆ ಹಣ್ಣು ಸವಿಯುವೆ

ನೀನೆ ತಂದಿ ನೀನೆ ತಾಯಿ
ನೀನೆ ನನ್ನ ಬಳಗವು
ನೀನೆ ಚಂದ್ರ ನೀನೆ ತಾರೆ
ನೀನೆ ನನ್ನ ಪ್ರಾಣವು
ಪ್ರಾಣ ನಿನ್ನ ತ್ರಾಣವು

ನಿನ್ನ ಬಿಟ್ಟು ಯಾರು ಇಲ್ಲಾ
ನನ್ನದೆಲ್ಲಾ ನಿನ್ನದು
ನೀನೆ ಬೆಲ್ಲಾ ನೀನೆ ಎಲ್ಲಾ
ನೀನೆ ಹುಳಿಯು ಖಾರವು
ನೀನೆ ಉಪ್ಪು, ಬ್ಯಾಳಿಯು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಗಳಕ್ಕೊಂದು ಚಿತ್ತಾರ
Next post ಕಾವ ಸರಕಾರವೇ ಕಾವಾಗಿ ಕಾಡಿದರೆ?

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…